ರಾಜ್ಯದ 15 ಜಿಲ್ಲೆಗಳಲ್ಲಿ ಬರಗಾಲದ ಕಾರ್ಮೋಡ
ಬೆಂಗಳೂರು, ಆ. 8 : ರಾಜ್ಯದಲ್ಲಿ ಮುಂಗಾರುಮಳೆ ಮುನಿಸಿಕೊಂಡ ಪರಿಣಾಮ 15 ಜಿಲ್ಲೆಗಳು ಬರಗಾಲದ ಭೀತಿ ಎದುರಿಸುತ್ತಿವೆ. ಈ ಹಂತದಲ್ಲಿ ರಾಜ್ಯಕ್ಕೆ 503 ಮಿಲಿಮೀಟರ್ ಮಳೆಯಾಗಬೇಕಿತ್ತು. ಆದರೆ ಜೂನ್ 1 ರಿಂದ ಆ.5ರ ವರೆಗೆ ಕೇವಲ 386 ಮಿಲಿಮೀಟರ್ ಮಾತ್ರ ಮಳೆಯಾಗಿದೆ. ಇದರ ಪರಿಣಾಮವಾಗಿ ರೈತನ ಸ್ಥಿತಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.
ಬೆಂಗಳೂರು
ಗ್ರಾಮಾಂತರ,
ಕೋಲಾರ,
ತುಮಕೂರು,
ರಾಮನಗರ,
ಉಡುಪಿ,
ಬಳ್ಳಾರಿ,
ಕೊಪ್ಪಳ,
ಬಾಗಲಕೋಟೆ,
ಬಿಜಾಪೂರ,
ಮತ್ತು
ಉತ್ತರ
ಕನ್ನಡ
ಜಿಲ್ಲೆಗಳಲ್ಲಿ
ಸಾಧಾರಣಕ್ಕಿಂತ
ಕಡಿಮೆ
ಮಳೆಯಾಗಿದೆ.
ಚಿಕ್ಕಬಳ್ಳಾಪುರ,
ಚಾಮರಾಜನಗರ,
ಮಂಡ್ಯ,
ರಾಯಚೂರು,
ಗದಗ
ಜಿಲ್ಲೆಗಳಲ್ಲಿ
ಬರಗಾಲದ
ಕಾರ್ಮೋಡ
ಆವರಿಸಿದೆ.
ಬೆಂಗಳೂರು
ಮತ್ತು
ಮೈಸೂರು
ಜಿಲ್ಲೆಗಳಲ್ಲಿ
ಸಾಧಾರಣ
ಮಳೆಯಾಗಿದೆ
ಎಂದು
ರಾಜ್ಯ
ಹವಾಮಾನ
ಇಲಾಖೆ
ತಿಳಿಸಿದೆ.
ಆದರೆ
ಕೊಡಗು,
ಬೆಳಗಾವಿ
ಹಾಗೂ
ಬೀದರ್
ಜಿಲ್ಲೆಗಳಲ್ಲಿ
ಮಾತ್ರ
ಉತ್ತಮ
ಮಳೆಯಾಗಿರುವ
ಬಗ್ಗೆ
ವರದಿಯಾಗಿದೆ
ಎಂದು
ತಿಳಿಸಿದ್ದಾರೆ.
ಜು.
30
ರಿಂದ
ಆ.
5ರ
ವರೆಗೆ
ಕೊಡಗು,
ಬೆಳಗಾವಿ,
ಬೆಂಗಳೂರು
ನಗರ,
ಬೀದರ್,
ಚಿತ್ರದುರ್ಗ,
ದಾವಣಗೆರೆ,
ಶಿವಮೊಗ್ಗ,
ಚಿಕ್ಕಮಗಳೂರು,
ಹಾಸನ,
ಮೈಸೂರು,
ಗುಲ್ಬರ್ಗ,
ಹಾವೇರಿ,
ದಕ್ಷಿಣ
ಕನ್ನಡ,
ಧಾರವಾಡ
ಜಿಲ್ಲೆಗಳ
176
ತಾಲ್ಲೂಕುಗಳಲ್ಲಿ
30
ತಾಲ್ಲೂಕುಗಳಲ್ಲಿ
ಮಾತ್ರ
ಅತ್ಯುತ್ತಮ
ಮಳೆಯಾಗಿದೆ.
57
ತಾಲ್ಲೂಕುಗಳಲ್ಲಿ
ಸಾಧಾರಣಕ್ಕಿಂತ
ಕಡಿಮೆ
ಮಳೆ
ಹಾಗೂ
43
ತಾಲ್ಲೂಕುಗಳಲ್ಲಿ
ಬರಗಾಲದ
ಛಾಯೆ
ಆವರಿಸಿದೆ.
ಇನ್ನೆರಡು
ದಿನಗಳಲ್ಲಿ
ರಾಜ್ಯದಲ್ಲಿ
ಉತ್ತಮ
ಮಳೆಯಾಗುವ
ಸಂಭವವಿದ್ದು,
ಅದರಲ್ಲಿ
ಗುಲ್ಬರ್ಗ
ಮತ್ತು
ಬೆಳಗಾವಿಯಲ್ಲಿ
ಹೆಚ್ಚು
ಮಳೆ
ಬೀಳುವ
ಸಾಧ್ಯತೆಗಳಿವೆ.
ರಾಜ್ಯದ
ವಿವಿಧಡೆ
ಮಳೆಯಾಗುತ್ತಿರುವುದರಿಂದ
ಲಿಂಗನಮಕ್ಕಿ,
ವರಾಹಿ,
ಸೂಪ
ಅಣೆಕಟ್ಟುಗಳಲ್ಲಿ
ನೀರಿನ
ಹರಿವು
ಹೆಚ್ಚಾಗಿದೆ
ಎಂದು
ಹವಾಮಾನ
ಇಲಾಖೆ
ತಿಳಿಸಿದೆ.
(ದಟ್ಸ್ಕನ್ನಡ ವಾರ್ತೆ)