ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆಂಧ್ರಪ್ರದೇಶದಲ್ಲಿ ಕುಂಭದ್ರೋಣ ಮಳೆ: 16 ಬಲಿ
ಹೈದರಾಬಾದ್, ಆ.9: ಆಂಧ್ರಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಒಟ್ಟು 16 ಮಂದಿ ಬಲಿಯಾಗಿದ್ದಾರೆ. ಹೈದರಾಬಾದ್ನಲ್ಲಿ ಕಳೆದ ರಾತ್ರಿಯಿಂದ ಸುರಿಯುತ್ತಿರುವ ಮಳೆ ಜನಜೀವನ್ನು ಅಸ್ತವ್ಯಸ್ತವಾಗಿಸಿದೆ.
ಮಳೆಯ ತೀವ್ರತೆಗೆ ಹೈದರಾಬಾದ್ನ ಮೂರು ಕಡೆಗಳಲ್ಲಿ ಮನೆಗಳು ಕುಸಿದು ಬಿದ್ದಿವೆ. ಹೈದರಾಬಾದ್ನ ಪಾತಬಸ್ತಿಯಲ್ಲಿ ಮಳೆಗೆ ಏಳು ಮಂದಿ ಬಲಿಯಾಗಿದ್ದು, ವಿಜಯವಾಡ, ಮೇದಕ್ ಹಾಗೂ ರಂಗಾರೆಡ್ಡಿ ಜಿಲ್ಲೆಗಳಲ್ಲಿ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ. ಮುಂದಿನ 48 ಗಂಟೆಗಳಲ್ಲಿ ಮತ್ತ್ತಷ್ಟು ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ಕೊಟ್ಟಿದೆ.
ಹೈದರಾಬಾದ್ ಹಾಗೂ ಸಿಕಿಂದ್ರಾಬಾದ್ ಅವಳಿ ನಗರಗಳಲ್ಲಿ ಮಳೆಯ ಕಾರಣ ಮೃತಪಟ್ಟ ಕುಟುಂಬಗಳಿಗೆ ತಲಾ ರು. 1 ಲಕ್ಷ ಪರಿಹಾರ ಘೋಷಿಸಲಾಗಿದೆ. ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ 246 ಮಿ.ಮೀ ದಾಖಲೆಯ ಮಳೆ ಸುರಿದಿದ್ದು 40 ಸಾವಿರ ಎಕರೆಯಷ್ಟು ಬೆಳೆ ನಷ್ಟವಾಗಿದೆ. ಹಾಗೆಯೇ ಗುಂಟೂರು, ನಲ್ಗೊಂಡ ಜಿಲ್ಲೆಗಳಲ್ಲೂ ಸಹ ಅಪಾರ ಪ್ರಮಾಣದ ಬೆಳೆಯನ್ನು ಮಳೆ ಆಹುತಿ ತೆಗೆದುಕೊಂಡಿದೆ.
(ಏಜೆನ್ಸೀಸ್)
Comments
Story first published: Saturday, August 9, 2008, 14:11 [IST]