ಗಣಿ ವಿಚಾರಕ್ಕೆ ಹೈಕೋರ್ಟ್ ಸಲಹೆ ಸೂಕ್ತ: ಯಡಿಯೂರಪ್ಪ
ಬೆಂಗಳೂರು,
ಆ.
8
:
ಗಣಿ
ವಿಚಾರಕ್ಕೆ
ಸಂಬಂಧಿಸಿದಂತೆ
ಹೈಕೋರ್ಟ್
ಸೂಚಿಸಿರುವ
ಸಲಹೆಗೆ
ಸರ್ಕಾರ
ಬದ್ಧವಾಗಿದೆ.
ಈ
ಕುರಿತು
ಸಚಿವ
ಸಂಪುಟದಲ್ಲಿ
ಸಭೆಯಲ್ಲಿ
ಸಮಗ್ರವಾಗಿ
ಚರ್ಚಿಸಿ
ಮುಂದಿನ
ಕ್ರಮಗಳನ್ನು
ಕೈಗೊಳ್ಳಲಾಗುವುದು
ಎಂದು
ಮುಖ್ಯಮಂತ್ರಿ
ಬಿ.ಎಸ್.ಯಡಿಯೂರಪ್ಪ
ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ
ಸುದ್ದಿಗಾರರೊಂದಿಗೆ
ಮಾತನಾಡಿದ
ಅವರು,
ನ್ಯಾಯಾಲಯದ
ಸಲಹೆಯನ್ನು
ಸ್ವಾಗತಿಸುತ್ತೇವೆ.
ನಾಡಿನ
ನೆಲ
ಜಲ
ರಕ್ಷಣೆಯೇ
ನಮ್ಮ
ಆದ್ಯತೆಯಾಗಿದೆ
ಎಂದರು.
ಹೈಕೋರ್ಟ್
ನೀಡಿರುವ
ಎಲ್ಲ
ವಿಷಯಗಳ
ಬಗ್ಗೆ
ಸಂಪುಟ
ಸಭೆಯಲ್ಲಿ
ಸಮಗ್ರವಾಗಿ
ಚರ್ಚಿಸಿ
ಮುಂದಿನ
ಕ್ರಮ
ಕೈಗೊಳ್ಳಲಾಗುವುದು.
ನೈಸರ್ಗಿಕ
ಸಂಪತ್ತು
ಉಳಿಸಲು
ಸರ್ಕಾರ
ಎಲ್ಲ
ಕ್ರಮಗಳನ್ನು
ಕೈಗೊಳ್ಳಲಿದೆ
ಎಂದು
ಯಡಿಯೂರಪ್ಪ
ಸ್ಪಷ್ಟಪಡಿಸಿದರು.
ಗುರುವಾರ
ಹೈಕೋರ್ಟ್
ರಾಜ್ಯದಲ್ಲಿ
ಹೆಚ್ಚುತ್ತಿರುವ
ಗಣಿಗಾರಿಕೆಗೆ
ನಿರ್ಬಂಧ
ಹೇರುವ
ನಿಟ್ಟಿನಲ್ಲಿ
ಮಹತ್ವದ
ತೀರ್ಪು
ನೀಡಿತ್ತು.
ಅರಣ್ಯ
ಪ್ರದೇಶಗಳಲ್ಲಿ
ಗಣಿಗಾರಿಕೆ
ಸಂಪೂರ್ಣವಾಗಿ
ನಿಷೇಧಿಸಬೇಕೆಂದು
ಆದೇಶ
ಹೊರಡಿಸಿತ್ತು.
ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಕೋಲಾರ, ಮೈಸೂರು, ಮಂಡ್ಯ, ಜಿಲ್ಲೆಗಳಿಗೆ ಸೇರಿದಂತೆ 36 ಬ್ಲಾಕ್ ಗಳಲ್ಲಿ ಗಣಿಗಾರಿಕೆ ನಡೆಸಲು ರಾಜ್ಯ ಸರ್ಕಾರ 15-3-2003ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ವಜಾಗೊಳಿಸಿದ್ದ ನ್ಯಾಯಪೀಠ ಗಣಿಗಾರಿಕೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಅರಣ್ಯ ರಕ್ಷಣೆಯ ಮಹತ್ವದ ಸಲಹೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ಹೇಳಿಕೆಗೆ ಭಾರಿ ಮಹತ್ವದ ಬಂದಿದೆ.
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ತಮಿಳುನಾಡು ಅನಗತ್ಯವಾಗಿ ಮೂಗು ತೂರಿಸುತ್ತಿರುವುದಕ್ಕೆ ತೀಕ್ಣವಾಗಿ ಪ್ರತಿಕ್ರಿಯಿಸಿದ ಅವರು, ತಮ್ಮದಲ್ಲದ ವಿಷಯಕ್ಕೆ ತಲೆ ಹಾಕುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರ ಕುತಂತ್ರಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನಮಾನ ನೀಡುವ ವಿಷಯವನ್ನು ವಿರೋಧಿಸುತ್ತಲೇ ತಮಿಳುನಾಡು ಬಂದಿದೆ. ಚೆನ್ನೈನ ಹಿರಿಯ ವಕೀಲ ಗಾಂಧಿ ಅಲ್ಲಿನ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)
ಗಣಿಗಾರಿಕೆ ರಾಷ್ಟ್ರೀಕರಣಕ್ಕೆ ಹೈಕೋರ್ಟ್ ಸೂಚನೆ