ಟೆಸ್ಟ್ ಕ್ರಿಕೆಟ್ : ಮೊದಲ ಇನ್ನಿಂಗ್ಸ್ ಭಾರತ 249 ಆಲೌಟ್
ಕೊಲಂಬೋ,
ಆ.
8
:
ಭಾರತ-ಶ್ರೀಲಂಕಾ
ವಿರುದ್ಧ
ನಡುವೆ
ನಡೆಯುತ್ತಿರುವ
ಮೂರನೇ
ಹಾಗೂ
ಅಂತಿಮ
ಟೆಸ್ಟ್
ಪಂದ್ಯದ
ಮೊದಲ
ದಿನದಾಟದಲ್ಲಿ
ಲಂಕಾ
ಬೌಲರ್
ಗಳು
ಭಾರತೀಯ
ದಾಂಡಿಗರಿಗೆ
ಸಿಂಹಸ್ವಪ್ನರಾಗಿ
ಕಾಡುವ
ಮೂಲಕ
ಮೇಲುಗೈ
ಸಾಧಿಸಿದರು.
ಆರಂಭಿಕ
ಆಟಗಾರ
ಗೌತಮ್
ಗಂಭೀರ್
ಹೊರತುಪಡಿಸಿ
ಲಂಕಾ
ಬೌಲರ್
ಗಳಿಗೆ
ಪ್ರತಿರೋಧ
ತೋರುವಲ್ಲಿ
ಭಾರತೀಯ
ತಂಡದ
ಆಟಗಾರರು
ವಿಫಲರಾದರು.
ಭಾರತ
249
ರನ್
ಗಳಿಗೆ
ಆಲೌಟಾಯಿತು.
ಟಾಸ್
ಗೆದ್ದು
ಬ್ಯಾಟಿಂಗ್
ಆಯ್ದುಕೊಂಡ
ಭಾರತ
ಆರಂಭದಲ್ಲಿ
ಗೌತಮ್
ಗಂಭೀರ್
ಮತ್ತು
ವಿರೇಂದ್ರ
ಸೆಹ್ವಾಗ್
ಉತ್ತಮ
ಅಡಿಪಾಯ
ಹಾಕುವ
ನಿಟ್ಟಿನಲ್ಲಿ
ಸಾಗುತ್ತಿದ್ದಾಗ
ಲಂಕಾ
ಬೌಲರ್
ಗಳು
ಸೆಹ್ವಾಗ್(21)
ಅವರ
ವಿಕೆಟ್
ಉರುಳಿಸುವ
ಮೂಲಕ
ಭಾರತಕ್ಕೆ
ಆರಂಭಿಕ
ಆಘಾತ
ನೀಡಿದರು.
ನಂತರ
ಬಂದ
ರಾಹುಲ್
ದ್ರಾವಿಡ್(10),
ವಿವಿಎಸ್
ಲಕ್ಷ್ಮಣ್
(25),
ಸಚಿನ್
ತೆಂಡೂಲ್ಕರ್(6),
ಗಂಗೂಲಿ(35),
ನಾಯಕ
ಕುಂಬ್ಳೆ(1),
ಪಾರ್ಥೀವ್
ಪಟೇಲ್(13),
ಹರ್ಭಜನ
ಸಿಂಗ್(3)
ಸೇರಿದಂತೆ
ಎಲ್ಲ
ಘಟಾನುಘಟಿ
ಆಟಗಾರರಿಗೆ
ಪೆವಿಲಿಯನ್
ದಾರಿ
ತೋರಿಸುವಲ್ಲಿ
ಲಂಕಾ
ಬೌಲರ್
ಗಳು
ಯಶಸ್ವಿಯಾದರು.
ಆರಂಭಿಕ
ಗೌತಮ್
ಗಂಭೀರ್
(72)
ಮಾತ್ರ
ಲಂಕಾ
ಬೌಲರ್
ಗಳನ್ನು
ಸಮರ್ಥವಾಗಿ
ಎದುರಿಸಿದರು.
ಕೊನೆಯಲ್ಲಿ ಜಹೀರ್ ಖಾನ್(32) ಮತ್ತು ಇಶಾಂತ್ ಶರ್ಮಾ(17) ಅವರ 50 ರನ್ ಗಳ ಜೊತೆಯಾಟದ ಮೂಲಕ ಭಾರತ ಗೌರವ ಎನ್ನುವ ಮೊತ್ತವನ್ನು ಕಲೆಹಾಕಿ ಮಾನ ಉಳಿಸಿಕೊಂಡಿತು. ಲಂಕಾ ಬೌಲರ್ ಗಳಾದ ಅಜಂತಾ ಮೆಂಡಿಸ್, ಮುತ್ತಯ್ಯ ಮುರಳೀಧರನ್ ಹಾಗಾ ದಾಮಿಕ್ ಪ್ರಸಾದ್ ಅವರ ಕರಾರುವಕ್ಕಾದ ದಾಳಿಗೆ ಭಾರತೀಯ ಬ್ಯಾಟ್ಸ್ ಮನ್ ಗಳ ಆಟ ನಡೆಯಲಿಲ್ಲ. ಮೂರು ಟೆಸ್ಟ್ ಸರಣಿಯಲ್ಲಿ ಲಂಕಾ ಮತ್ತು ಭಾರತ ತಲಾ ಒಂದು ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿ ಸಮ ಮಾಡಿಕೊಂಡಿವೆ. ಮೊದಲ ಟೆಸ್ಟ್ ನಲ್ಲಿ ಲಂಕಾ ಗೆಲುವು ಸಾಧಿಸಿದರೆ, ಎರಡನೇ ಪಂದ್ಯದಲ್ಲಿ ಭಾರತ ಜಯಗಳಿಸಿತ್ತು. ಮೂರನೇ ಪಂದ್ಯದಲ್ಲಿ ತೀವ್ರ ಹಣಾಹಣೆ ನಿರೀಕ್ಷಿಸಬಹುದಾಗಿದೆ.
(ದಟ್ಲ್ ಕನ್ನಡ ಕ್ರೀಡಾ ವಾರ್ತೆ)