ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂಪಿ ಸ್ಮಾರಕಗಳನ್ನು ಉಳಿಸಲು ಚಿ.ಮೂ ಕರೆ

By Staff
|
Google Oneindia Kannada News

ಬೆಂಗಳೂರು, ಆ.6: ಇತಿಹಾಸ ಪ್ರಸಿದ್ಧ ಹಂಪಿಯಲ್ಲಿನ ಸ್ಮಾರಕಗಳು ಮುಸ್ಲಿಂರ ದರ್ಗಾಗಳಾಗಿ ಬದಲಾಗುತ್ತಿವೆ. ಸ್ಮಾರಕಗಳನ್ನು ನಮಾಜ್ ಮಾಡಲು ಬಳಸಿಕೊಳ್ಳಲಾಗುತ್ತಿದೆ ಎಂದು ಸಾಹಿತಿ ಸಂಶೋಧಕ ಡಾ.ಚಿದಾನಂದ ಮೂರ್ತಿ ಖೇದ ವ್ಯಕ್ತಪಡಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ವಿಜಯನಗರ ಸಾಮ್ರಾಜ್ಯದಲ್ಲಿ ನಿರ್ಮಿತವಾದ ಹಲವಾರು ಸ್ಮಾರಕಗಳನ್ನು ಮುಸ್ಲಿಂರು ತಮ್ಮ ವಶಕ್ಕೆ ತೆಗೆದುಕೊಂಡು ನಮಾಜ್ ಮಾಡಲು ಉಪಯೋಗಿಸಿಕೊಳ್ಳುತ್ತಿದ್ದಾರೆ. ಹಂಪಿಯ ಪ್ರಸಿದ್ಧ ವಿರೂಪಾಕ್ಷ ದೇವಾಲಯದ ಮಂಟಪದಲ್ಲೂ ನಮಾಜ್ ಮಾಡಲು ಮುಂದಾಗಿದ್ದಾರೆ. ಇಂತಹ ದೌರ್ಜನ್ಯಗಳನ್ನು ಸರ್ಕಾರ ಕೂಡಲೆ ತಡೆಯಬೇಕು ಎಂದು ಆಗ್ರಹಿಸಿದರು.

ಬಾಬಾಬುಡನ್ ಗಿರಿಯಲ್ಲಿ ಹಿಂದು ವಿಧಿವಿಧಾನದಲ್ಲೇ ಪೂಜೆ ನಡೆಯುವಂತೆ ಹೈಕೋರ್ಟ್ ನೀಡಿರುವ ತೀರ್ಪನ್ನು ಚಿದಾನಂದಮೂರ್ತಿ ಸ್ವಾಗತಿಸಿದರು. ಕಾಶ್ಮೀರ ಸರ್ಕಾರ ಮುಸ್ಲಿಂರ ಪ್ರತಿಭಟನೆಗೆ ಹೆದರಿ ಅಮರನಾಥ ದೇವಾಲಯಕ್ಕೆ ನೀಡಿದ್ದ ಜಮೀನನ್ನು ಹಿಂಪಡೆದುಕೊಂಡನ್ನು ವಿರೋಧಿಸಿ ಹಿಂದೂಗಳು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದು ಅವರು ತಿಳಿಸಿದರು.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X