ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಣಕ್ಕಾಗಿ ದರೋಡೆಗಿಳಿದ ಶಸ್ತ್ರಸಜ್ಜಿತ ನಕ್ಸಲರು

By Staff
|
Google Oneindia Kannada News

ಶೃಂಗೇರಿ, ಆ. 6 : ಶಸ್ತ್ರಸಜ್ಜಿತ ನಕ್ಸಲರ ತಂಡ ವ್ಯಾಪಾರಿಯೊಬ್ಬರ ಮನೆಗೆ ನುಗ್ಗಿ ಸಿಂಗಲ್ ಬ್ಯಾರಲ್ ಗನ್ ಮತ್ತು 27 ಸಾವಿರ ರುಪಾಯಿಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿರುವ ಘಟನೆ ಮಂಗಳವಾರ ಮಧ್ಯರಾತ್ರಿ ನಡೆದಿದೆ. ಆದರೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮಂಗಳವಾರ ಮಧ್ಯರಾತ್ರಿ ಶೃಂಗೇರಿ ಬಳಿಯಲ್ಲಿರುವ ಮಾತುವಳ್ಳಿಯ ವ್ಯಾಪಾರಿ ಸತೀಶ್ ಎಂಬುವವರ ಮನೆಗ ನುಗ್ಗಿದ ಶಸ್ತ್ರಸಜ್ಜಿತ 12 ಜನ ನಕ್ಸಲರ ತಂಡ ಕುಟುಂಬ ಸದಸ್ಯರನ್ನು ಬೆದರಿಸಿ ಮನೆಯಲ್ಲಿದ್ದ 27 ಸಾವಿರ ರುಪಾಯಿ ಹಾಗೂ ಸಿಂಗಲ್ ಬ್ಯಾರಲ್ ಗನ್ ತಗೆದುಕೊಂಡು ಪರಾರಿಯಾಗಿದೆ. ಕಳೆದ ಒಂದು ವಾರದ ಹಿಂದೆ ಕೃಷ್ಣ ಶಂಕಿತ ನಕ್ಸಲ್ ನನ್ನು ವಿಚಾರಣೆ ನಡೆಸಲಾಗಿತ್ತು. ಇದರ ಬೆನ್ನಲ್ಲೇ ಈ ಪ್ರಕರಣ ಜರುಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ನಕ್ಸಲ್ ನಿಗ್ರಹ ಪಡೆ ಹಾಗೂ ಪೊಲೀಸರ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶಸ್ತ್ರಸಜ್ಜಿತ ನಕ್ಸಲ್ ರ ಬಂಧನಕ್ಕೆ ವ್ಯಾಪಕ ಜಾಲ ಬೀಸಲಾಗಿದೆ. ಕೆಲ ಮಾಹಿತಿ ಮೇರೆಗೆ ಮಪ್ತಿ ವೇಷದ ಮೂಲಕ ಕೆಲ ಪ್ರದೇಶಗಳಲ್ಲಿ ಶೋಧನಾ ಕಾರ್ಯ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X