ಅಪರಾಧಿ ನಿಗ್ರಹ ದಳಕ್ಕೆ ಸೆರೆಸಿಕ್ಕ 3 ಉಗ್ರರು
ಅಹಮದಾಬಾದ್, ಜು. 28 : ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಇಂದು ಅಹಮದಾಬಾದ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರಿ ಕಟ್ಟೆಚ್ಚರ ವಹಿಸಿದ ಹಿನ್ನಲೆಯಲ್ಲಿ ಮತ್ತೆ ಮೂವರು ಶಂಕಿತ ಉಗ್ರರನ್ನು ಬಂಧಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ಶುಕ್ರವಾರ ಅಹಮದಾಬಾದ್ ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದರಿಂದ 17 ಕಡೆಗಳಲ್ಲಿ ಬಾಂಬ್ ಸ್ಫೋಟ ಘಟನೆ ನಡೆದಿತ್ತು. ಘಟನೆಯಲ್ಲಿ 49 ಮಂದಿ ಮೃತಪಟ್ಟಿದ್ದು. ನೂರಕ್ಕೂ ಅಧಿಕ ಜನ ತೀವ್ರವಾಗಿ ಗಾಯಗೊಂಡಿದ್ದರು. ಜಗತ್ತಿನಾದ್ಯಂತ ಘಟನೆಗೆ ಖಂಡನೆ ವ್ಯಕ್ತವಾದ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಘಟನೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ವಿಚಾರಣೆ ನಡೆಸಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯದ್ಯಂತ ಭಾರಿ ಕಟ್ಟೆಚ್ಚರ ವಹಿಸಿದ್ದ ಪೊಲೀಸರ ಕೈಗೆ ಸೂರತ್ ನಗರದಿಂದ ಸುರೇಂದರ್ ನಗರಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ಶಂಕಿತ ಮೂವರು ಉಗ್ರರು ಸಿಕ್ಕಿಬಿದ್ದಿದ್ದಾರೆ. ಅವರಿಂದ 85 ಸಾವಿರ ರುಪಾಯಿ ಭಾರತೀಯ ನೋಟು ಮತ್ತು ಎರಡು ಲಕ್ಷ ರು ಗಳ ವಿದೇಶ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಇದಕ್ಕೂ ಮುಂಚೆ ಸಿಮಿ ಸಂಘಟನೆಯ ಮುಖ್ಯಸ್ಥ ಸಫ್ದಾರ್ ನಾಗೋರಿಯ ಆತ್ಮೀಯ ಎನ್ನಲಾದ ಜುಲ್ಫೀಕರ್ ನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ಆರಂಭಿಸಿದ್ದಾರೆ. ಅಪರಾಧಿ ನಿಗ್ರಹ ದಳ ಉಗ್ರರ ಬಂಧನಕ್ಕೆ ತಂಡ ತಂಡವಾಗಿ ಜಾಲ ಬೀಸಿ ಶೋಧ ಕಾರ್ಯದಲ್ಲಿ ತೊಡಗಿದೆ.
(ದಟ್ಸ್ ಕನ್ನಡ ವಾರ್ತೆ)
ಅಹಮದಾಬಾದ್ಗೆ
ಪ್ರಧಾನಿ,
ಸೋನಿಯಾ
ಭೇಟಿ
ಸರಣಿ
ಸ್ಫೋಟ
:ರಾಷ್ಟ್ರದಾದ್ಯಂತ
ಭಾರಿ
ಕಣ್ಗಾವಲು
ಶಂಕಿತ
ಉಗ್ರ
ಅಬ್ದುಲ್
ಹಲೀಂ
ತೀವ್ರ
ವಿಚಾರಣೆ
ಅಹಮದಾಬಾದ್
ಸ್ಫೋಟ
ಸಿಮಿ
ಉಗ್ರನ
ಬಂಧನ