ಸುಬ್ಬಣ್ಣ ನೆನಪಿಗೆ 'ನಟನ' ತಂಡದಿಂದ ನಾಟಕ ಪ್ರದರ್ಶನ
ಮೈಸೂರು, ಜು. 8 : ನಟ ಮತ್ತು ನಿರ್ದೇಶಕ ಮಂಡ್ಯ ರಮೇಶ್ ಅವರ 'ನಟನ' ರಂಗ ಸಂಘಟನೆ ಹೆಗ್ಗೋಡಿನ ಕೆ.ವಿ.ಸುಬ್ಬಣ್ಣ ಅವರ ನೆನಪಿಗಾಗಿ 'ಸುಬ್ಬಣ್ಣ ಸ್ಮರಣೆ' ಸರಣಿ ನಾಟಕಗಳ ಪ್ರದರ್ಶನವನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಜುಲೈ 7ರಿಂದ ಜುಲೈ 27ರವರೆಗೆ ಹಮ್ಮಿಕೊಂಡಿದೆ. ಏಳು ದಿನಗಳ ಕಾಲ ನಡೆಯುವ ಈ ರಂಗೋತ್ಸವದಲ್ಲಿ ಐದು ನಾಟಕ, ಒಂದು ಚಲನಚಿತ್ರ ಪ್ರದರ್ಶನಗೊಳ್ಳಲಿವೆ. ಇದೇ ಸಮಯದಲ್ಲಿ ಜವರನಹಳ್ಳಿ ಸಿದ್ದಪ್ಪ ವಿರಚಿತ 'ಕಪ್ಪೆಗಳು' ನಾಟಕ ಪುಸ್ತಕ ಕೂಡ ಬಿಡುಗಡೆಯಾಗಲಿದೆ.
ಈ ಪ್ರದರ್ಶನದ ಕುರಿತಾಗಿ ದಟ್ಸ್ಕನ್ನಡದ ಜೊತೆ ಮಾತನಾಡುತ್ತಿದ್ದ ಮಂಡ್ಯ ರಮೇಶ್ ಅವರು, ನಿರಂತರವಾಗಿ ಒಂದಿಲ್ಲೊಂದು ರಂಗ ಚಟುವಟಿಕೆಯಲ್ಲಿರುವ 'ನಟನ' ತಂಡವನ್ನು ರಂಗಾಸಕ್ತರು ಪ್ರೋತ್ಸಾಹಿಸಬೇಕು ಎಂದು ಕೇಳಿಕೊಂಡರು. 'ನಟನ' ತಂಡವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಹೆಬ್ಬಯಕೆಯನ್ನೂ ಅವರು ವ್ಯಕ್ತಪಡಿಸಿದರು.
ನಟನ ಪ್ರದರ್ಶಿಸುತ್ತಿರುವ ನಾಟಕಗಳು ಕೆಳಗಿನಂತಿವೆ
ದಿನಾಂಕ
:
ಜುಲೈ
7
ನಾಟಕ
:
ಚೋರ
ಚರಣದಾಸ
ಸ್ಥಳ
:
ರವೀಂದ್ರ
ಕಲಾಕ್ಷೇತ್ರ,
ಬೆಂಗಳೂರು
ರಚನೆ
:
ಹಬೀಬ್
ತನ್ವೀರ್,
ನಿರ್ದೇಶನ
:
ಮಂಡ್ಯ
ರಮೇಶ್
ದಿನಾಂಕ
:
ಜುಲೈ
12
ನಾಟಕ
:
ಚೋರ
ಚರಣದಾಸ
ಸ್ಥಳ
:
ನಟನ
ರಂಗಮಂಟಪ,
ಮೈಸೂರು
ರಚನೆ
:
ಹಬೀಬ್
ತನ್ವೀರ್,
ನಿರ್ದೇಶನ
:
ಮಂಡ್ಯ
ರಮೇಶ್
ನಾಟಕ
ಪುಸ್ತಕ
'ಕಪ್ಪೆಗಳು'
ಬಿಡುಗಡೆ,
ರಚನೆ
:
ಜವರನಹಳ್ಳಿ
ಸಿದ್ದಪ್ಪ
ದಿನಾಂಕ
:
ಜುಲೈ
13
ನಾಟಕ
:
ಬಾಬಾ
ಸಾಹೇಬ್
ಅಂಬೇಡ್ಕರ್
ಸ್ಥಳ
:
ನಟನ
ರಂಗಮಂಟಪ,
ಮೈಸೂರು
ರಚನೆ
:
ಮುಕುಂದ
ರಾವ್,
ನಿರ್ದೇಶನ
:
ವೆಂಕಟರಮಣ
ಐತಾಳ್
ಅಭಿನಯಿಸುವವರು
:
ನೀನಾಸಂ
ದಿನಾಂಕ
:
ಜುಲೈ
14
ನಾಟಕ
:
ನಾಯಿತಿಪ್ಪ
ಸ್ಥಳ
:
ನಟನ
ರಂಗಮಂಟಪ,
ಮೈಸೂರು
ರಚನೆ
:
ಕೆ.
ರಾಮಯ್ಯ,
ನಿರ್ದೇಶನ
:
ಮಂಡ್ಯ
ರಮೇಶ್,
ಸಂಗೀತ
:
ರಾಜು
ಅನಂತಸ್ವಾಮಿ
ದಿನಾಂಕ
:
ಜುಲೈ
20
ನಾಟಕ
:
ಗಾಂಧಿ
ಅಂಬೇಡ್ಕರ್
ಸ್ಥಳ
:
ನಟನ
ರಂಗಮಂಟಪ,
ಮೈಸೂರು
ಮೂಲ
:
ಗಜನಿ,
ಕನ್ನಡಕ್ಕೆ
:
ಡಿ.ಎಸ್.ಚೌಗುಲೆ,
ನಿರ್ದೇಶನ
:
ಸಿ.
ಬಸವಲಿಂಗಯ್ಯ,
ಸಂಗೀತ
:
ನಂದಕುಮಾರ್
ದಿನಾಂಕ
:
ಜುಲೈ
26
ಚಲನಚಿತ್ರ
:
ಕಲರ್
ಆಫ್
ಪ್ಯಾರಡೈಸ್
ಸ್ಥಳ
:
ನಟನ
ರಂಗಮಂಟಪ,
ಮೈಸೂರು
ಸಮಯ
:
ಸಂಜೆ
4
ಗಂಟೆಗೆ
ದಿನಾಂಕ
:
ಜುಲೈ
27
ನಾಟಕ
:
ಮೋಜಿನ
ಸೀಮೆಯಾಚೆ
ಒಂದೂರು
ಸ್ಥಳ
:
ನಟನ
ರಂಗಮಂಟಪ,
ಮೈಸೂರು
ಮೂಲ
:
ಬಾದಲ್
ಸರ್ಕಾರ್,
ಕನ್ನಡಕ್ಕೆ
:
ರಾಜೇಂದ್ರ
ಕಾರಂತ್,
ನಿರ್ದೇಶನ
:
ಬಾಲಾಜಿ
ಮನೋಹರ್
ವಿಳಾಸ
ರವೀಂದ್ರ
ಕಲಾಕ್ಷೇತ್ರ,
ಜೆಸಿ
ರಸ್ತೆ,
ಬೆಂಗಳೂರು.
ನಟನ
ರಂಗಮಂಟಪ,
ಕೆ.
ಬ್ಲಾಕ್,
ರಾಮಕೃಷ್ಣ
ನಗರ,
ಮೈಸೂರು
ಚಲನಚಿತ್ರ ಹೊರತುಪಡಿಸಿ ಎಲ್ಲ ನಾಟಕಗಳು ಸಂಜೆ 7 ಗಂಟೆಗೆ ಪ್ರದರ್ಶಿತವಾಗಲಿವೆ. ಹೆಚ್ಚಿನ ವಿವರಗಳಿಗೆ ಸಂಪರ್ಕ : [email protected]
(ದಟ್ಸ್ಕನ್ನಡ ವಾರ್ತೆ)