ಲಂಕಾ ಪ್ರವಾಸಕ್ಕೆ ಭಾರತದ ಟೆಸ್ಟ್ ತಂಡ ಪ್ರಕಟ
ನವದೆಹಲಿ, ಜು. 8 : ಶ್ರೀಲಂಕಾ ಪ್ರವಾಸ ತೆರಳುವ ಹಿನ್ನಲೆಯಲ್ಲಿ ಮಂಗಳವಾರ ಸಭೆ ನಡೆಸಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟೆಸ್ಟ್ ಪಂದ್ಯಗಳ ತಂಡವನ್ನು ಆಯ್ಕೆ ಮಾಡಿ 16 ಜನ ಆಟಗಾರರ ಹೆಸರುಗಳನ್ನು ಪ್ರಕಟಿಸಿದೆ. ಖ್ಯಾತ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರನ್ನು ಟೆಸ್ಟ್ ನಾಯಕನನ್ನಾಗಿ ಮುಂದುವೆರಿಸಿರುವ ಬಿಸಿಸಿಐ, ಉಪನಾಯಕನಾಗಿ ವಿರೇಂದ್ರ ಸೆಹ್ವಾಗ್ ಅವರಿಗೆ ಜವಾಬ್ದಾರಿ ವಹಿಸಿದೆ.
ಈ ಪ್ರವಾಸಕ್ಕೆ ಪ್ರಗ್ಯಾನ್ ಓಜಾ ಮತ್ತು ಇಶಾಂತ್ ಶರ್ಮ ಟೆಸ್ಟ್ ಪಂದ್ಯಗಳಿಗೆ ಆಯ್ಕೆಯಾದ ಹೊಸಬರು. ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಉಪನಾಯಕ ಯುವರಾಜ್ ಸಿಂಗ್ ಮತ್ತು ವೇಗಿ ಎಸ್.ಶ್ರೀಶಾಂತ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಜು. 23 ರಿಂದ ಟೆಸ್ಟ್ ಪಂದ್ಯಗಳನ್ನು ಆಡಲು ಶ್ರೀಲಂಕಾಕ್ಕೆ ತೆರಳಿರುವ ತಂಡ ಕೆಳಗಿನಂತಿದೆ. ಅನಿಲ್ ಕುಂಬ್ಳೆ(ನಾಯಕ), ವಿರೇಂದ್ರ ಸೆಹ್ವಾಗ್(ಉಪನಾಯಕ), ಗೌತಮ್ ಗಂಭೀರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವಿವಿಎಸ್.ಲಕ್ಷ್ಮಣ್ , ಸಚಿನ್ ತಂಡೊಲ್ಕರ್, ರೋಹಿತ್ ಶರ್ಮ, ದಿನೇಶ್ ಕಾರ್ತಿಕ್, ಪಾರ್ಥೀವ್ ಪಟೇಲ್, ಹರ್ಭಜನ್ ಸಿಂಗ್, ಇಶಾಂತ್ ಶರ್ಮ, ಜಹೀರ್ ಖಾನ್, ಆರ್.ಪಿ.ಸಿಂಗ್, ಮುನಾಫ್ ಪಟೇಲ್, ಪ್ರಗ್ಯಾನ್ ಓಜಾ
(ದಟ್ಸ್ ಕನ್ನಡ ವಾರ್ತೆ)