ವಿಶ್ವಕಪ್ ಗೆದ್ದ ಕಪಿಲ್ ಬಳಗೆಕ್ಕೆ ಲಾರ್ಡ್ಸ್ನಲ್ಲಿ ಸನ್ಮಾನ
ಬೆಂಗಳೂರು, ಜೂ.25: ಕಪಿಲ್ ದೇವ್ ನಾಯಕತ್ವದ ಭಾರತ ತಂಡ ವಿಶ್ವಕಪ್ ಗೆದ್ದು ಬುಧವಾರಕ್ಕೆ 25 ವರ್ಷಗಳು ಪೂರ್ಣವಾಗುತ್ತದೆ. ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ವಿಶ್ವಕಪ್ ಗೆದ್ದ್ದು ಸಂಭ್ರಮಿಸಿದ ದಿನವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ.
1983, ಜೂ.25ರಂದು ಕಿಕ್ಕಿರಿದ ಲಾರ್ಡ್ಸ್ ಮೈದಾನದಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು 43 ರನ್ಗಳಿಂದ ಭಾರತ ತಂಡ ಸೋಲಿಸಿ ಇತಿಹಾಸ ನಿರ್ಮಿಸಿತ್ತು. ಈ ಸಾಧನೆಗೆ ರಜತ ಮಹೋತ್ಸವದ ಸಂಭ್ರಮ. ಜೂ.22ರಂದು ಬಿಸಿಸಿಐ ಕಪಿಲ್ ದೇವ್ ಬಳಗಕ್ಕೆ ಸನ್ಮಾನ ಮಾಡಿ ತಲಾ 25 ಲಕ್ಷ ರು.ಗಳ ಬಹುಮಾನ ನೀಡಿ ಗೌರವಿಸಿತ್ತು.
ಇಂದು
ಲಂಡನ್ನಲ್ಲಿ
ಔತಣ
ಕೂಟ
ವಿಶ್ವಕಪ್
ಕ್ರಿಕೆಟ್
ಗೆದ್ದ
ರಜತ
ಮಹೋತ್ಸವದ
ಆಚರಣೆಯ
ಅಂಗವಾಗಿ
ಕಪಿಲ್
ದೇವ್
ಬಳಗಕ್ಕೆ
ಬುಧವಾರ
ಲಾರ್ಡ್ಸ್
ಮೈದಾನದ
ಲಾಂಜ್
ರೂಮಲ್ಲಿ
ಔತಣಕೂಟ
ಏರ್ಪಡಿಸಲಾಗಿದೆ.
ಹಾಗೆಯೇ ವಿಶ್ವಕಪ್ ಗೆದ್ದ ತಂಡದ ಹಿರಿಯ ಸದಸ್ಯ ಸುನಿಲ್ ಗವಾಸ್ಕರ್ ಪ್ರಾಯೋಜಕತ್ವದಲ್ಲಿ ಬುಧವಾರ ಭಾರೀ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ. ಈ ವಿಶೇಷ ಔತಣಕೂಟದಲ್ಲಿ ಬಿಸಿಸಿಐ ಅಧ್ಯಕ್ಷ ಶರದ್ ಪವಾರ್ ಉಪನ್ಯಾಸ ನೀಡಲಿದ್ದಾರೆ. ಈ ಹಿನ್ನಲೆಯಲ್ಲಿ ವಿಶ್ವಕಪ್ ಗೆದ್ದ ತಂಡದ ಎಲ್ಲ ಸದಸ್ಯರು, ಬಿಸಿಸಿಐನ ಕೆಲ ಪದಾಧಿಕಾರಿಗಳು, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಲಂಡನ್ಗೆ ತೆರಳಿದ್ದಾರೆ.
(ದಟ್ಸ್ಕನ್ನಡ ವಾರ್ತೆ)