ಪದ್ಮಪ್ರಿಯಾ ಪ್ರಕರಣ : ಅತುಲ್ ರಾವ್ ಬಂಧನ
ಮಂಗಳೂರು, ಜೂ. 23 : ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯಾ ಪ್ರಕರಣಕ್ಕೆ ಇದೀಗ ಮತ್ತೆ ಜೀವ ಬಂದಿದ್ದು. ಶಾಸಕ ಕೆ.ರಘುಪತಿ ಭಟ್ ದೂರಿನ ಮೇರೆಗೆ ಮಣಿಪಾಲ್ ಪೊಲೀಸರು ಪ್ರಕರಣದ ಕೇಂದ್ರ ಬಿಂದು ಅತುಲ್ ರಾವ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಕಳೆದ ಜೂ.11 ರಂದು ಪದ್ಮಪ್ರಿಯಾ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಅತುಲ್ ಮೇಲೆ ಸಂಶಯ ವ್ಯಕ್ತಪಡಿಸಿದ ಶಾಸಕ ರಘುಪತಿ ಭಟ್ ಮಣಿಪಾಲ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ಅತುಲ್ ಬಂಧನಕ್ಕೆ ಕಾದು ಕುಳಿತಿದ್ದ ಪೊಲೀಸರು ಇಂದು ನಗರದ ಸಿಟಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆಯೇ ಬಂಧಿಸಿದ್ದಾರೆ. ಇಂದು ಸಂಜೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಐಜಿಪಿ ಪ್ರಸಾದ್ ತಿಳಿಸಿದ್ದಾರೆ.
ಪದ್ಮಪ್ರಿಯಾ ನಾಪತ್ತೆಗೆ ಅತುಲ್ ಕಾರಣ ಹಾಗೂ ನನಗೆ ಮಿತ್ರ ದ್ರೋಹ ಎಸಗಿದ್ದಾನೆ ಎಂದು ಶಾಸಕ ರಘುಪತಿ ಭಟ್ ಬಹಿರಂಗ ಹೇಳಿಕೆ ನೀಡಿದ್ದರು. ಪದ್ಮಪ್ರಿಯಾ ಅವರ ಜತೆಗೆ ಅತುಲ್ ದೆಹಲಿಗೆ ತೆರಳಿ ಅವರಿಗೆ ವಾಸಿಸಲು ವ್ಯವಸ್ಥೆ ಕಲ್ಪಿಸಿ ಮತ್ತೆ ವಾಪಸ್ಸು ಬೆಂಗಳೂರು ಮೂಲಕ ಉಡುಪಿಗೆ ತೆರಳಿರುವ ಬಗ್ಗೆ ಪೊಲೀಸರಲ್ಲಿ ಮಾಹಿತಿ ಇದೆ. ಪ್ರಕರಣದಿಂದ ಆಘಾತಕ್ಕೆ ಒಳಗಾಗಿದ್ದ ಅತುಲ್ ಹೃದಯದ ತೊಂದರೆಯಿಂದ ನಗರದ ಪ್ರತಿಷ್ಠಿತ ಎಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಅತುಲ್ ಆಸ್ಪತ್ರೆಯಿಂದ ಬಿಡುಗಡೆ ಹೊಂದುತ್ತಿರುವುದು ತಿಳಿಯುತ್ತಿದ್ದಂತೆಯೇ ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಪ್ರತಿಭಟನೆ
ಪದ್ಮಪ್ರಿಯಾ
ನಿಗೂಢ
ಸಾವಿನ
ಪ್ರಕರಣವನ್ನು
ಸಿಬಿಐ
ತನಿಖೆಗೆ
ಒಪ್ಪಿಸಬೇಕು
ಎಂದು
ಉಡುಪಿ
ಜಿಲ್ಲಾ
ಬ್ಲಾಕ್
ಕಾಂಗ್ರೆಸ್
ಆಗ್ರಹಿಸಿದೆ.
ಪದ್ಮಪ್ರಿಯಾ
ಪ್ರಕರಣ
ಗೊಂದಲದ
ಗೂಡಾಗಿದ್ದು,
ಅನೇಕ
ಸಂಶಯಗಳಿಗೆ
ಕಾರಣವಾಗಿದೆ.
ಈ
ಹಿನ್ನಲೆಯಲ್ಲಿ
ಈ
ಪ್ರಕರಣವನ್ನು
ಸಿಬಿಐ
ತನಿಖೆಗೆ
ನೀಡಬೇಕು
ಪ್ರತಿಭಟನಾನಿರತ
ಕಾಂಗ್ರೆಸ್
ಕಾರ್ಯಕರ್ತರು
ಒತ್ತಾಯಿಸಿದ್ದಾರೆ.
ಸರ್ಕಾರ ಪದ್ಮಪ್ರಿಯಾ ಪ್ರಕರಣ ತನಿಖೆಗೆ ಹಿಂದೇಟು ಹಾಕುತ್ತಿದ್ದು, ಶಾಸಕ ರಘುಪತಿ ಭಟ್ ಮತ್ತು ಪ್ರಕರಣದ ಪ್ರಮುಖ ರೂವಾರಿ ಅತುಲ್ ರಾವ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಜಿ.ಹೆಗಡೆ ಆಗ್ರಹಿಸಿದ್ದಾರೆ. ಈ ಪ್ರಕರಣದಲ್ಲಿ ದಿನಕ್ಕೊಂದು ಹೇಳಿಕೆ ನೀಡುತ್ತಾ ಜನಸಾಮಾನ್ಯರನ್ನು ದಾರಿ ತಪ್ಪಿಸಿರುವ ಗೃಹ ಮಂತ್ರಿ ಆಚಾರ್ಯ ನೈತಿಕೆ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)