ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದಶಾವತಾರಂ :ದೊಡ್ಡಬಳ್ಳಾಪುರದಲ್ಲಿ ಕಲ್ಲು ತೂರಾಟ
ದೊಡ್ಡಬಳ್ಳಾಪುರ, ಜೂ. 13 : ಬಹುನಿರೀಕ್ಷಿತ ಕಮಲಹಾಸನ್ ನಟನೆಯ ಅದ್ಧೂರಿ ಚಿತ್ರ ದಶಾವತಾರಂ ಪ್ರದರ್ಶನ ವಿಳಂಬವಾಗಿದ್ದನ್ನ ಪ್ರತಿಭಟಿಸಿ ರೊಚ್ಚಿಗೆದ್ದ ಅಭಿಮಾನಿಗಳು ಚಿತ್ರಮಂದಿರಕ್ಕೆ ಕಲ್ಲು ತೂರಾಟ ನಡೆಸಿರುವ ಘಟನೆ ಜರುಗಿದೆ.
ನಗರದ ಸೌಂದರ್ಯ ಚಿತ್ರಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ಆರಂಭವಾಗಬೇಕಿದ್ದ ದಶಾವತಾರಂ ಚಿತ್ರ ಪ್ರದರ್ಶನ 12 ಗಂಟೆಯಾದರೂ ಆರಂಭವಾಗದಿದ್ದರಿಂದ ರೊಚ್ಚಿಗೆದ್ದ ಕಮಲ ಹಾಸನ್ ಅಭಿಮಾನಿಗಳು ಚಿತ್ರ ಮಂದಿರದತ್ತ ಕಲ್ಲು ತೂರಾಟ ಆರಂಭಿಸಿದರು.ಇದರಿಂದ ಕೆಲ ಕಾಲ ಪರಿಸ್ಥಿತಿ ಉದ್ವಿಗ್ನಗೊಂಡಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಿದರು. ಕಲ್ಲು ತೂರಾಟದ ಸಂದರ್ಭದಲ್ಲಿ ಎಎಸ್ಐ ಒಬ್ಬರಿಗೆ ತೀವ್ರ ಗಾಯವಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಏನಿದು ದಶಾವತರಂ ?
Comments
Story first published: Friday, June 13, 2008, 18:29 [IST]