ಸಣ್ಣ ಮತ್ತು ಮಧ್ಯಮ ರೈತರ ಸಾಲ ಸಂಪೂರ್ಣ ಮನ್ನಾ
ನವದೆಹಲಿ, ಫೆ.29 : ತೀವ್ರವಾಗಿ ಕುಸಿದಿರುವ ಕೃಷಿ ಕ್ಷೇತ್ರದ ಅಭಿವೃದ್ಧಿಯನ್ನು ಮೇಲೆತ್ತುವ ಮತ್ತು ನಿರಂತರವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರನ್ನು ಗಮನದಲ್ಲಿರಿಸಿಕೊಂಡು ಸಣ್ಣ ಮತ್ತು ಮಧ್ಯಮದ ರೈತರ ಸಾಲ ಮನ್ನಾ ಮಾಡುವ ಮಹತ್ತರ ನಿರ್ಧಾರವನ್ನು ಯುಪಿಎ ಸರ್ಕಾರ ಕೈಗೊಂಡಿದೆ.
2008-09 ಸಾಲಿನ ಕೇಂದ್ರ ಬಜೆಟ್ ಮಂಡಿಸುತ್ತಿರುವ ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ಅವರು ರೈತರನ್ನು ಆತ್ಮಹತ್ಯೆಯ ಕುಣಿಕೆಯಿಂದ ಹೊರತರಲು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು. ಬಜೆಟ್ ಮಂಡನೆಯ ಮೊದಲು ಕೃಷಿ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದ್ದಕ್ಕಾಗಿ ನಿರಾಶೆಯನ್ನೂ ಅವರು ವ್ಯಕ್ತಪಡಿಸಿದರು.
ಸಾಲಮನ್ನಾ ಯೋಜನೆಯಿಂದಾಗಿ 3 ಕೋಟಿ ಸಣ್ಣ ರೈತರು ಮತ್ತು 1 ಕೋಟಿ ಮಧ್ಯಮ ರೈತರು ಒಟ್ಟು 4 ಕೋಟಿ ರೈತರು ಲಾಭ ಪಡೆಯಲಿದ್ದಾರೆ. ಈ ಯೋಜನೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ 60 ಸಾವಿರ ಕೋಟಿ ರು. ನಷ್ಟವಾಗಲಿದೆ. 2007 ಮಾರ್ಚ್ 31ರವರೆಗಿನ ಎಲ್ಲ ಸಾಲಗಳಿಗೂ ಈ ಯೋಜನೆ ಅನ್ವಯವಾಗಲಿದೆ. 2 ಹೆಕ್ಟೇರ್ ವರೆಗೆ ಭೂಮಿ ಹೊಂದಿರುವವರಿಗೆ ಈ ಸಾಲಮನ್ನಾ ಅನ್ವಯವಾಗಲಿದೆ.
ಈ ಕ್ಷೇತ್ರದಲ್ಲಿ ಮುಂಬರುವ ವರ್ಷಗಳಲ್ಲಿ ಒಟ್ಟು 280 ಸಾವಿರ ಕೋಟಿ ರು. ಸಾಲ ನೀಡುವ ಯೋಜನೆಯನ್ನೂ ಕೇಂದ್ರ ಸರ್ಕಾರ ಹಾಕಿಕೊಂಡಿದೆ. 2008ರ ಜೂನ್ ದೊಳಗೆ ಸಾಲಮನ್ನಾ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಚಿದಂಬರಂ ಹೇಳಿದರು.
(ದಟ್ಸ್ಕನ್ನಡ ವಾರ್ತೆ)
ಬಜೆಟ್
08-09:
ಶಿಕ್ಷಣ
ಕ್ಷೇತ್ರಕ್ಕೆ
ಏನು
ಸಿಕ್ಕಿದೆ?
ಕೇಂದ್ರ
ಬಜೆಟ್
2008-09ನ
ಹೆಚ್ಚಿನ
ವಿವರಗಳಿಗೆ
ಇಲ್ಲಿ
ಕ್ಲಿಕ್ಕಿಸಿ