ಕಿಡ್ನಿ ಬಜಾರ್: ಕಾಸಿಗೊಂದು ಕಿಡ್ನಿ,ಕೊಸರಿಗೊಂದು ಕಿಡ್ನಿ!
ಬೆಂಗಳೂರು, ಆಗಸ್ಟ್ 13 : ನಗರದಲ್ಲಿ ಮೂತ್ರಪಿಂಡ(ಕಿಡ್ನಿ) ಖದೀಮರ ಜಾಲ ಪತ್ತೆಯಾಗಿದೆ.
ನೆಲಮಂಗಲ, ಮಾಗಡಿ, ರಾಮನಗರ, ಚನ್ನಪಟ್ಟಣ ಮತ್ತಿತರ ಭಾಗಗಳಲ್ಲಿ ಕಾರ್ಯಾಚರಣೆ ಆರಂಭಿಸಿದ್ದ ಜಾಲವನ್ನು ಪೊಲೀಸರು ಬಂಧಿಸಿದ್ದಾರೆ. ಈ ಖದೀಮರ ತಂಡ ಬಡವರಿಗೆ ಹಣದ ಆಸೆ ತೋರಿಸಿ ಕಿಡ್ನಿ ನೀಡುವಂತೆ ಮನವೊಲಿಸುತ್ತಿದ್ದರು. ಈವರೆಗೆ 35ರಿಂದ 40ಕಿಡ್ನಿಗಳನ್ನು ಮಾರಾಟ ಮಾಡಲಾಗಿದೆ.
ಕಿಡ್ನಿ ನೀಡಿದವರಿಗೆ 50ರಿಂದ 70ಸಾವಿರ ಹಣ ನೀಡುತ್ತಿದ್ದ ಈ ಗುಂಪು, 2ರಿಂದ 3ಲಕ್ಷ ರೂ.ಗಳಿಗೆ ಕಿಡ್ನಿಯನ್ನು ಮಾರಾಟ ಮಾಡುತ್ತಿತ್ತು ಎನ್ನಲಾಗಿದೆ.
ಕಿಡ್ನಿ ಖದೀಮರ ಜಾಲದಲ್ಲಿ ನಗರದ ಕೆಲವು ವೈದ್ಯರು ಮತ್ತು ವಕೀಲರೂ ಇದ್ದಾರೆ ಎನ್ನಲಾಗಿದ್ದು, ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.
ಕಿಡ್ನಿ ಪಡೆಯಲು ಶಸ್ತ್ರಚಿಕಿತ್ಸೆಯನ್ನು ಮಣಿಪಾಲ್ ಮತ್ತು ಕೆ.ಆರ್.ಆಸ್ಪತ್ರೆಯಲ್ಲಿ ನಡೆಸಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications