ಅಪರಾಧಿ ನಾನಲ್ಲ,ಅಪವಾದ ಎನಗಿಲ್ಲ : ಡಾ.ಹನೀಫ್
ಮೆಲ್ಪೋರ್ನ್, ಜು.27 : ಸ್ಕಾಟ್ಲೆಂಡ್ ನ ಗ್ಲಾಸ್ಗೊ ವಿಮಾನ ನಿಲ್ದಾಣ ಸ್ಫೋಟ ಪ್ರಕರಣಕ್ಕ ಸಂಬಂಧಿಸಿದಂತೆ ಬಂಧಿತರಾಗಿದ್ದ ಬೆಂಗಳೂರಿನ ವೈದ್ಯ ಡಾ.ಹನೀಫ್, ಶನಿವಾರ ರಾತ್ರಿ ತವರಿಗೆ ಮರಳಲಿಲ್ದಾರೆ.
ಹನೀಫ್ ವಿರುದ್ಧದ ಎಲ್ಲಾ ಆರೋಪಗಳನ್ನು ಆಸ್ಟ್ರೇಲಿಯಾ ಸರ್ಕಾರ ವಾಪಸ್ಸು ಪಡೆದಿದೆ. ತವರಿಗೆ ಮರಳಲು ಹಂಬಲಿಸುತ್ತಿರುವ ಹನೀಫ್, ಶನಿವಾರ ರಾತ್ರಿ ಭಾರತಕ್ಕೆ ವಿಮಾನದಲ್ಲಿ ಬರುವ ಸಾಧ್ಯತೆಗಳಿವೆ. ಕಳೆದ ನಾಲ್ಕು ವಾರಗಳಿಂದ ಬಂಧನಕ್ಕೆ ಸಿಲುಕಿ, ಭಯೋತ್ಪಾದಕನೆಂಬ ಕಳಂಕವನ್ನು ಅವರು ಹೊತ್ತಿದ್ದರು.
ಮಾಡದ ತಪ್ಪಿಗೆ 26ದಿನ ಶಿಕ್ಷೆ ಅನುಭವಿಸಿದೆ. ತಾಯ್ನಾಡಿಗೆ ಹೆಮ್ಮೆಯಿಂದ ತಲೆ ಎತ್ತಿಕೊಂಡು ಮರಳುತ್ತಿದ್ದೇನೆ. ನನ್ನ ಹೆಂಡತಿ ಮತ್ತು ಮಗಳನ್ನು ನೋಡದ ಹೊರತು ಸಮಾಧಾನವಿಲ್ಲ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ, ಬೆಂಗಳೂರು ತಲುಪಬೇಕು ಎಂದು ಹನೀಫ್ ಹೇಳಿಕೆ ನೀಡಿದ್ದಾರೆ.
ಅಮಾಯಕನಾದ ಹನೀಫ್ ವಿರುದ್ಧ, ಆರೋಪ ದಾಖಲಿಸಿದ ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಅಸಮಾಧಾನ ಉಂಟಾಗಿದೆ.
(ಏಜನ್ಸೀಸ್)
ಪೂರಕ ಓದಿಗೆ :
ಡಾ.ಹನೀಫ್
ಈಗ
ಕಳಂಕ
ಮುಕ್ತ
:
ಆಸ್ಟ್ರೇಲಿಯಾ
ಸ್ಪಷ್ಟನೆ
ವಿಚಾರಣೆಯ
ನಂತರ
ಹನೀಫ್
ಮೊಹಮ್ಮದ್
ಭಾರತಕ್ಕೆ
ಹನೀಫ್
ಮೊಹಮ್ಮದ್
ಬಿಡುಗಡೆ
:
ಕಭಿ
ಹಾ,
ಕಭಿ
ನಾ!
ಅಂತೂ
ಡಾ.ಹನೀಫ್
ಅಹಮದ್ಗೆ
ಷರತ್ತಿನ
ಜಾಮೀನು!
ಬಿಡುಗಡೆಯಾಗಬೇಕಿದ್ದ
ಹನೀಫ್
ವಿರುದ್ಧ
ಆರೋಪಪಟ್ಟಿ
ಗ್ಲಾಸ್ಗೋ
ದಾಳಿ
:
ಕಫೀಲ್
ಸಂಬಂಧಿ
ಹನೀಫ್
ನಿರಪರಾಧಿ