ಮುಯ್ಯಿಗೆ ಮುಯ್ಯಿ!:ಆಗುಂಬೆ ಬಳಿ ಬಿತ್ತು ಎಎಸ್ಐ ಹೆಣ!

ಶಿವಮೊಗ್ಗ, ಜುಲೈ 18: ಹಿಂಸಾ ಮಾರ್ಗ ತುಳಿದು, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹತ್ಯೆಗೆ ಕಾರಣರಾದ ನಕ್ಸಲರು, ತಕ್ಕ ದಂಡವನ್ನು ತೆರಬೇಕಾಗುತ್ತದೆ. ನಕ್ಸಲರ ಮಟ್ಟ ಹಾಕಲು, ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸುವುದಾಗಿ ರಾಜ್ಯ ಸರ್ಕಾರ ಬುಧವಾರ ಹೇಳಿದೆ.

ಹಿನ್ನೆಲೆ : ಮುಯ್ಯಿಗೆ ಮುಯ್ಯಿ, ಸೇಡಿಗೆ ಸೇಡು ಎಂಬಂತೆ ನಕ್ಸಲರ ಬಂದೂಕುಗಳು ಆಗುಂಬೆ ಸಮೀಪದ ಕಾಡಿನಲ್ಲಿ ಅಬ್ಬರಿಸಿವೆ. ಪೊಲೀಸರು ಮತ್ತು ನಕ್ಸಲರ ಗುಂಡಿನ ಚಕಮಕಿಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ವೆಂಕಟೇಶ್(55) ಬಲಿಯಾಗಿದ್ದಾರೆ. ಆಗುಂಬೆ ಬಳಿಯ ಹುಲಗಾರು ಬೈಲು ಕಾಡಿನಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ.

ಗುಂಡಿನ ಚಕಮಕಿಯಲ್ಲಿ ನಕ್ಸಲ್ ಯುವತಿಗೆ ಗುಂಡು ತಗಲಿದೆ ಎನ್ನಲಾಗಿದೆ. ಜು.10ರ ಪೊಲೀಸ್ ಎನ್‌ಕೌಂಟರ್‌ನಲ್ಲಿ ನಕ್ಸಲ್ ಗೌತಮ್ಮ ಸೇರಿದಂತೆ ನಾಲ್ವರು ಗ್ರಾಮಸ್ಥರು ಮೃತಪಟ್ಟಿದ್ದರು. ಈ ಘಟನೆ ನಡೆದ ಮೇಲೆ, ನಕ್ಸಲರು ಸಿಡಿಮಿಡಿಗೊಂಡಿದ್ದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+