ಕಾಕೋಳಿನಲ್ಲಿ ಶ್ರೀವೇಣುಗೋಪಾಲಸ್ವಾಮಿ ರಥೋತ್ಸವ

kakolu Venugopala Swamy ಬೆಂಗಳೂರು : ಬೆಂಗಳೂರು ಉತ್ತರ ತಾಲ್ಲೂಕಿನ ಕಾಕೋಳು ಗ್ರಾಮದಲ್ಲಿ ಶ್ರೀ ವೇಣುಗೋಪಾಲಸ್ವಾಮಿ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.

ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ರಥೋತ್ಸವದಲ್ಲಿ ಭಕ್ತಿ-ಶ್ರದ್ಧೆಗಳಿಂದ ಪಾಲ್ಗೊಂಡಿದ್ದರು. ಹೊಸಬಟ್ಟೆ ತೊಟ್ಟ ಹಿರಿಯರು-ಕಿರಿಯರು ಹಬ್ಬದ ಸಡಗರಕ್ಕೆ ಸಂಕೇತವಾಗಿದ್ದರು. ರಥೋತ್ಸವದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರವಹಿಸಲಾಗಿತ್ತು.

ರಥೋತ್ಸವಕ್ಕೂ ಮೊದಲು ವೇಣುಗೋಪಾಲಕೃಷ್ಣ ಸ್ವಾಮಿಯ ಪೂಜೆ ಭಾರೀ ಸಡಗರದಿಂದ ನಡೆಯಿತು. ನಗರಗಳಲ್ಲಿ ನೆಲೆಸಿರುವ ಗ್ರಾಮದ ಜನರು, ರಥೋತ್ಸವದ ನಿಮಿತ್ತ ಊರಿಗೆ ಬಂದು ಸಡಗರದಿಂದ ಭಾಗವಹಿಸಿದ್ದರು. ಆ ಮೂಲಕ ಭಾರತೀಯ ಹಬ್ಬಗಳು ಜನರನ್ನು ಒಂದುಗೂಡಿಸಲು ಹೇಗೆ ವೇದಿಕೆಯಾಗುತ್ತವೆ ಎಂಬುದಕ್ಕೆ ಸಾಕ್ಷಿಯಂತಿದ್ದರು.

(ದಟ್ಸ್‌ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+