ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಾಸನ : ಒಂದೇ ಕುಟುಂಬದ 7ಜನ ಆತ್ಮಹತ್ಯೆಗೆ ಶರಣು
ಹಾಸನ : ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ, ನಗರದಲ್ಲಿ ಗುರುವಾರ ನಡೆದಿದೆ.
ನಗರದ ದಕ್ಷ ವ್ಯಾಪಾರಿ ಎಂದೇ ಹೆಸರಾಗಿದ್ದ ವಿಶ್ವನಾಥ್ ಗುಪ್ತಾ ಮತ್ತು ಅವರ ಕುಟುಂಬ ಸದಸ್ಯರು ಆಹಾರದೊಂದಿಗೆ ವಿಷ ಬೆರೆಸಿಕೊಂಡು, ಗಾಂಧಿ ಬಜಾರ್ನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಪ್ತಾರೊಂದಿಗೆ ಅವರ ಪತ್ನಿ, ಮಗ, ಅಳಿಯ, ಮೂವರು ಮೊಮ್ಮಕ್ಕಳು ಅಸುನೀಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಟ್ಟಿದ್ದ ಸಾಲಗಳು ಮರುಪಾವತಿಯಾಗದ ಕಾರಣ, ಆರ್ಥಿಕವಾಗಿ ವಿಶ್ವನಾಥ್ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
(ಯುಎನ್ಐ)
Comments
Story first published: Thursday, January 25, 2007, 5:30 [IST]