ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸದ್ಯದಲ್ಲಿಯೇ ಗುಲ್ಬರ್ಗದಲ್ಲಿ ಐಟಿ ಮತ್ತು ಜವಳಿ ಪಾರ್ಕ್
ಗುಲ್ಬರ್ಗ : ಹೈದರಾಬಾದ್ ಕರ್ನಾಟಕದ ವಾಣಿಜ್ಯ ಮತ್ತು ಉದ್ಯಮ ಸಂಘ(ಹೆಚ್ಕೆಸಿಸಿಐ) ಬೇಡಿಕೆ ಮನ್ನಿಸಿ ಗುಲ್ಬರ್ಗದಲ್ಲಿ ಐಟಿ ಹಾಗೂ ಜವಳಿ ಪಾರ್ಕ್ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪ್ರೊ. ನಂಜುಡಪ್ಪ ವರದಿಯನ್ನು ಜಾರಿಗೆ ತಂದು, ಪ್ರಾದೇಶಿಕ ಅಸಮಾನತೆಯನ್ನು ತೊಡೆದು ಹಾಕಲಾಗುವುದು. ಮುಂದಿನ ಬಜೆಟ್ನಲ್ಲಿ ಹೈದರಾಬಾದ್ ಕರ್ನಾಟಕ ವಲಯಕ್ಕೆ ಹೆಚ್ಚಿನ ಹಣ ಮಂಜೂರು ಮಾಡಲಾಗುವುದು ಎಂದರು.
ಐಟಿ ಉದ್ಯಮವನ್ನು ವಿಸ್ತರಿಸುವ ನಿಟ್ಟಿನಲ್ಲಿ ರಾಜ್ಯದ ಹತ್ತು ಜಿಲ್ಲೆಗಳಿಗೆ ಐಟಿ ಉದ್ಯಮಗಳು ಕಾಲಿಡಲಿವೆ, ಅದರಲ್ಲಿ ಗುಲ್ಬರ್ಗ ಕೂಡ ಒಂದು . ಮೈಸೂರಿನಂತೆಯೇ ಇಲ್ಲೂ ಕೂಡ ಜವಳಿ ಪಾರ್ಕ್ ನಿರ್ಮಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.
ಜುಲೈನಿಂದ ರಾಜ್ಯವನ್ನು ಸಾರಾಯಿ ಮುಕ್ತ ರಾಜ್ಯವನ್ನಾಗಿ ಮಾಡುವ ಭರವಸೆಯನ್ನು ಈ ಸಂದರ್ಭದಲ್ಲಿ ಅವರು ನೀಡಿದರು.
(ದಟ್ಸ್ ಕನ್ನಡ ವಾರ್ತೆ)
Story first published: Tuesday, January 9, 2007, 5:30 [IST]