ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರಿನಲ್ಲಿ ದತ್ತಜಯಂತಿಯ ಆನಂದ ಮತ್ತು ಆತಂಕ

By Staff
|
Google Oneindia Kannada News

ಚಿಕ್ಕಮಗಳೂರಿನಲ್ಲಿ ದತ್ತಜಯಂತಿಯ ಆನಂದ ಮತ್ತು ಆತಂಕ
ಡಿ.14ರಂದು ಸಂಘಪರಿವಾರದಿಂದ ದತ್ತಜಯಂತಿಗೆ ಸಿದ್ಧತೆ, ಅದನ್ನು ತಡೆಯಲು ಕೋಮು ಸೌಹಾರ್ದ ವೇದಿಕೆಯಿಂದ ಸಿದ್ಧತೆ

ಚಿಕ್ಕಮಗಳೂರು : ಜಿಲ್ಲೆಯ ಬಾಬಾ ಬುಡನ್‌ಗಿರಿಯಲ್ಲಿ ಮೂರು ದಿನಗಳ ದತ್ತ ಜಯಂತಿ ಕಾರ್ಯಕ್ರಮ ಡಿ.13ರಿಂದ ಆರಂಭವಾಗಲಿದ್ದು, ಈ ಪ್ರದೇಶದಲ್ಲಿ ಆತಂಕದ ಪರಿಸ್ಥಿತಿ ನೆಲೆಸಿದೆ.

ಡಿ.14ರಂದು ಸಂಘ ಪರಿವಾರ ನಡೆಸಲುದ್ದೇಶಿಸಿರುವ ದತ್ತ ಜಯಂತಿ ತಡೆಯದಿದ್ದರೆ, ರಕ್ತ ಹರಿಸಿಯಾದರೂ ನಾವು ತಡೆಯುತ್ತೇವೆ ಎಂದು ಕೋಮು ಸೌಹಾರ್ದ ವೇದಿಕೆ ಎಚ್ಚರಿಸಿದೆ.

ದತ್ತ ಜಯಂತಿಗೆ ಸಂಬಂಧಿಸಿದಂತೆ ಎಡ ಮತ್ತು ಬಲಪಂಥೀಯರ ನಡುವೆ ವಿಚಾರಗಳ ಸಂಘರ್ಷ ನಡೆದಿದೆ. ಪರಿಸ್ಥಿತಿಯ ಲಾಭ ಪಡೆಯಲು ರಾಜಕೀಯ ಹುನ್ನಾರಗಳು ನಡೆಯುತ್ತಿವೆ.

ಸೌಹಾರ್ದತೆಯನ್ನು ಬಿಂಬಿಸುವ ಹಿಂದೂ ಮತ್ತು ಮುಸಲ್ಮಾನರ ಧಾರ್ಮಿಕ ಕೇಂದ್ರವಾಗಿದ್ದ ಬಾಬಾ ಬುಡನ್‌ಗಿರಿಯಲ್ಲಿ ಈಗ ಕೋಮು ವಾಸನೆ ಹರಡಿದೆ. ದಕ್ಷಿಣದ ಅಯೋಧ್ಯೆಯನ್ನಾಗಿ, ಕರ್ನಾಟಕ ಗುಜರಾತ್‌ ಆಗಿ ಬಾಬಾ ಬುಡನ್‌ಗಿರಿಯನ್ನು ಪರಿವರ್ತಿಸಿ, ರಾಜಕೀಯ ಲಾಭ ಪಡೆಯಲು ರಾಜಕೀಯ ಪಕ್ಷಗಳು ಪ್ರಯತ್ನಿಸಿವೆ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X