ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲ್ಲಲು ಬಂದ ಪವಿತ್ರನ್‌ ಮೇಲೂ ‘ಅಮ್ಮ’ನ ಅಕ್ಕರೆ

By Staff
|
Google Oneindia Kannada News

ಕೊಲ್ಲಲು ಬಂದ ಪವಿತ್ರನ್‌ ಮೇಲೂ ‘ಅಮ್ಮ’ನ ಅಕ್ಕರೆ
ಅಮೃತಾನಂದಮಯಿ ಹತ್ಯೆ ಪ್ರಯತ್ನದ ಹಿಂದೆ ದೊಡ್ಡ ಹುನ್ನಾರ -ಪೊಲೀಸರ ಸಂಶಯ

ತಿರುವನಂತಪುರ : ಪ್ರತಿಯಾಬ್ಬರೂ ಒಂದಲ್ಲ ಒಂದು ದಿನ ಸಾಯಲೇ ಬೇಕು. ಆ ವಾಸ್ತವವನ್ನು ನಾನು ಬಲ್ಲೆ. ಹೀಗಾಗಿ ಭಾನುವಾರದ ಘಟನೆಯಿಂದ ಆತಂಕಪಡುವ ಪ್ರಶ್ನೆಯೇ ಇಲ್ಲ. ಎಂದಿನಂತೆಯೇ ನನ್ನ ದರ್ಶನಕ್ಕೆ ಆಶ್ರಮದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಮಾತಾ ಅಮೃತಾನಂದಮಯಿ ದೇವಿ ಸೋಮವಾರ ತಿಳಿಸಿದ್ದಾರೆ.

ಸಾವಿರಾರು ಭಕ್ತರ ಸಮ್ಮುಖದಲ್ಲಿಯೇ ಭಾನುವಾರ ಸಂಜೆ ಭಕ್ತನೊಬ್ಬ ಚಾಕುವಿನಿಂದ ಅಮೃತಾನಂದಮಯಿ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದ. ಈ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಮೇಲ್ಕಂಡಂತೆ ಅವರು ಪ್ರತಿಕ್ರಿಯಿಸಿದರು.

ನನ್ನ ಹತ್ಯೆಗೆ ಯತ್ನಿಸಿದ ಆತನೂ ನನ್ನ ಮಗನೇ. ಆತನ ಮೇಲೆ ನನಗೆ ಯಾವುದೇ ದ್ವೇಷವಿಲ್ಲ. ಬದಲಿಗೆ ಕನಿಕರವಿದೆ ಎಂದು ಕೋಟ್ಯಾಂತರ ಭಕ್ತರ ಪಾಲಿಗೆ ಅಮ್ಮನೆಂದೇ ಖ್ಯಾತರಾಗಿರುವ ಅಮೃತಾನಂದಮಯಿ ಅಭಿಪ್ರಾಯಪಟ್ಟಿದ್ದಾರೆ.

ಕೇರಳದ ಕೊಲ್ಲಂ ಜಿಲ್ಲೆಯ ವಳ್ಳಿಕಾಪುವಿನಲ್ಲಿರುವ ಮಠದಲ್ಲಿ ಅಮೃತಾನಂದಮಯಿ ಅವರ ಮೇಲೆ ಇಡುಕ್ಕಿ ನಿವಾಸಿ ಪವಿತ್ರನ್‌ ಎಂಬಾತ ಹಲ್ಲೆಗೆ ವಿಫಲ ಯತ್ನ ನಡೆಸಿದ್ದನು.

ಈ ಹಿಂದೆ ಆಶ್ರಮದ ಉದ್ಯೋಗಿಯಾಗಿದ್ದ ಪವಿತ್ರನ್‌ನನ್ನು ಇತ್ತೀಚೆಗೆ ಹೊರಹಾಕಲಾಗಿತ್ತು. ಮಾನಸಿಕವಾಗಿ ಆತ ಅಸ್ವಸ್ಥ ಎಂದು ಆಶ್ರಮದ ಮೂಲಗಳು ತಿಳಿಸಿವೆ. ಆದರೆ ಆತನನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದು, ಹತ್ಯೆ ಯತ್ನದ ಹಿಂದೆ ಯಾವುದೋ ಸಂಚಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X