ಕರ್ನಾಟಕಕ್ಕೆ ಬರುತಿದೆ ರಾಜಸ್ಥಾನ ಮಾದರಿ ‘ವಿಲಾಸಿ ರೈಲು’ ಬಂಡಿ
ಕರ್ನಾಟಕಕ್ಕೆ ಬರುತಿದೆ ರಾಜಸ್ಥಾನ ಮಾದರಿ ‘ವಿಲಾಸಿ ರೈಲು’ ಬಂಡಿ
ಬೆಂಗಳೂರು-ಮೈಸೂರು-ಹಾಸನ-ಹೊಸಪೇಟೆ-ಗದಗ್-ಲೊಂಡಾ..... ರೈಟ್ ರೈಟ್
ಪ್ಯಾಲೇಸ್ ಆನ್ವೀಲ್ಹ್- ಈ ವಿಶೇಷ ವಿಲಾಸಿ ರೈಲು 2115 ಕೀ.ಮೀ ವ್ಯಾಪ್ತಿಯಲ್ಲಿ ಸಂಚರಿಸಲಿದೆ. ಬೆಂಗಳೂರು, ಮೈಸೂರು, ಹಾಸನ, ಹೊಸಪೇಟೆ(ಹಂಪಿ), ಗದಗ್, ಲೊಂಡಾ, ಮಡಗಾಂವ್,ಬೆಂಗಳೂರು ಮಾರ್ಗದಲ್ಲಿ ರೈಲು ಸಂಚರಿಸಲಿದೆ. ಹದಿನೆಂಟು ಬೋಗಿಗಳ ಈ ಗಾಲಿ ಮೇಲಿನ ಅರಮನೆ(ರೈಲು)ಯಲ್ಲಿ ಹನ್ನೊಂದು ಹವಾನಿಯಂತ್ರಿತ ಬೋಗಿಗಳಿವೆ. ಉಪಹಾರಗೃಹ, ಸಭಾಂಗಣ ಮತ್ತಿತರ ವ್ಯವಸ್ಥೆಗಳನ್ನು ಇದು ಹೊಂದಿದೆ.
ರೈಲಿನ ನಿರ್ವಹಣೆಯನ್ನು ರಾಜ್ಯಪ್ರವಾಸೋದ್ಯಮ ಇಲಾಖೆಗೆ ವಹಿಸಲಾಗಿದೆ. ರಾಜ್ಯ ಸರಕಾರ ಈ ರೈಲಿಗಾಗಿ 20-12-2002ರಂದು ಸಲ್ಲಿಸಿದ್ದ ಮನವಿಗೆ ಭಾರತೀಯ ರೈಲ್ವೆ ಇಲಾಖೆ ಈಗ ಸ್ಪಂದಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ರೈಲಿಗೆ 18 ಕೋಚ್ಗಳನ್ನು ಅಳಪಡಿಸಲಾಗಿದ್ದು, ಇವುಗಳಲ್ಲಿ 11 ಕೋಚ್ ಹವಾನಿಯಂತ್ರಣ ಸೆಲೂನ್ಗಳನ್ನು ಹೊಂದಿರುತ್ತವೆ. ಒಂದು ಹವಾನಿಯಂತ್ರಿತ ಬಾರ್, ಹವಾ ನಿಯಂತ್ರಿತ ಕಾನ್ಫ್ರೆನ್ಸ್ ಕಾರ್, ಹವಾನಿಯಂತ್ರಿತ ಉಪಹಾರ ಗೃಹ ಈ ರೈಲಿನಲ್ಲಿರುತ್ತದೆ. ಸಿಬ್ಬಂದಿಯ ವಸತಿ ಮತ್ತು ವಿದ್ಯುಚ್ಛಕ್ತಿ ಪೂರೈಕೆಗಾಗಿ ಒಂದು ಕೋಚ್ ಮೀಸಲಿಡಲಾಗಿದೆ.
ಮಾರ್ಚ್-ಏಪ್ರಿಲ್ ರಜಾ ದಿನಗಳಲ್ಲಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಯುವ ನಿರೀಕ್ಷೆಯನ್ನು ವಿಲಾಸಿ ರೈಲು ್ಫಯೋಜನೆ ಹೊಂದಿದೆ. ಈ ದಿನಗಳಲ್ಲಿ ಪ್ರಯಾಣದ ದರ ವಿದೇಶಿ ಪ್ರವಾಸಿಗರಿಗೆ ಒಂದು ದಿನಕ್ಕೆ 300 ಅಮೆರಿಕನ್ ಡಾಲರ್ ಮತ್ತು ದೇಶಿಯ ಪ್ರವಾಸಿಗರಿಗೆ 11680 ರೂಗಳಾಗಿವೆ. ಬೇರೆ ತಿಂಗಳಿನಲ್ಲಿ 200 ಡಾಲರ್ ಮತ್ತು 7760 ರೂ ಇರಲಿದೆ.
ಅಂದಹಾಗೆ, ರಾಜಸ್ತಾನದಲ್ಲಿ ವಿಲಾಸಿ ರೈಲು ಕಳೆದ 22 ವರ್ಷಗಳಿಂದ ಜನಪ್ರಿಯತೆಯನ್ನು ಪಡೆದಿದೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications