‘ಧ್ವನಿ ಪ್ರತಿಷ್ಠಾನ’ದ ಲೇಖನ ಸ್ಪರ್ಧೆಯಲ್ಲಿ ಪ್ರಭಾಕರ ಶಿಶಿಲ ಪ್ರಥಮ
‘ಧ್ವನಿ
ಪ್ರತಿಷ್ಠಾನ’ದ
ಲೇಖನ
ಸ್ಪರ್ಧೆಯಲ್ಲಿ
ಪ್ರಭಾಕರ
ಶಿಶಿಲ
ಪ್ರಥಮ
ಕನ್ನಡ
ನಾಡು
ನುಡಿ
ರಕ್ಷಣೆ
ಯಾಕೆ
ಮತ್ತು
ಹೇಗೆ?
ಮಾರ್ಚ್ನಲ್ಲಿ
ಪುಸ್ತಕ
ದ್ವಿತೀಯ ಬಹುಮಾನವನ್ನು ಕೆ.ಆರ್.ಉಮಾದೇವಿ ಉರಾಳ್- ತೀರ್ಥಹಳ್ಳಿ ಹಾಗೂ ನಾಗೇಂದ್ರ ಡೊಡ್ಡಮನಿ- ಶಿರಸಿ ಅವರು ಹಂಚಿಕೊಂಡಿರುವರು. ತೃತೀಯ ಬಹುಮಾನ ಎಲ್.ಪಿ.ಶಾಸ್ತ್ರಿ- ಬೆಂಗಳೂರು ಮತ್ತು ಯಸ್. ವಿ. ಶಂಕರಪ್ಪ - ಬೆಂಗಳೂರು ಪಡೆದುಕೊಂಡಿರುವರು.
ಬಹುಮಾನಗಳು ನಗದು ರೂ.5000, 2000, 1000, ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ತೀರ್ಪುಗಾರರ ಆಯ್ಕೆಯ ಹತ್ತು ಉತ್ತಮ ಲೇಖನ ಪುರಸ್ಕಾರವು ಡಾ. ಎಸ್.ವಿ.ಪ್ರಭಾವತಿ- ಬೆಂಗಳೂರು, ಡಾ.ಜೆ.ಎಸ್.ಅಶ್ವತ್ಕುಮಾರ್- ಮುನಿರಬಾದ್, ಯ.ರು.ಪಾಟೀಲ್-ಬೆಳಗಾವಿ, ಮೀನಾಕ್ಷಿಕಾಂತ್- ನರಸಿಂಹರಾಜಪುರ, ಬಿ.ಇಂದಿರಾ-ಬೆಂಗಳೂರು, ಪಿ.ಮಂಜುನಾಥಸ್ವಾಮಿ- ಬೆಂಗಳೂರು, ಚ.ಹ.ರಘುನಾಥ್- ಬೆಂಗಳೂರು, ಹೆಚ್.ಸುಬ್ಬರಾವ್-ದೆಹಲಿ, ಎಸ್.ಶಾಂತರಾಮ್-ಮೈಸೂರು ಹಾಗೂ ಲಕ್ಷ್ಮಣ ಟಿ. ಬಾದಮಿ- ಬಾಗಲಕೋಟೆ ಅವರಿಗೆ ಸಂದಿದೆ.
ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹಾಗೂ ಪತ್ರಕರ್ತ ಎನ್.ಗುರುರಾಜ್ ತೀರ್ಪುಗಾರರಾಗಿ ಸಹಕರಿಸಿದ್ದರು. ಆಯ್ದ ಲೇಖನಗಳ ಸಂಕಲನ ಪ್ರಕಟಿಸುವ ಯೋಜನೆಯನ್ನು ಹಾಕಿಕೊಂಡಿದ್ದು , ಪುಸ್ತಕ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು 2005ರ ಮಾರ್ಚ್ ತಿಂಗಳಲ್ಲಿ ನಡೆಸಲಾಗುವುದು ಎಂದು ಧ್ವನಿ ಪ್ರತಿಷ್ಠಾನದ ಪ್ರಧಾನ ಸಂಚಾಲಕ ಪ್ರಕಾಶ್ ರಾವ್ ಪಯ್ಯಾರ್ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು