ಅಡಚಣೆಗಳನಡುವೆ ಮುಹೂರ್ತ ನಿಗದಿ; ಡಿ.15 ಸಂಪುಟ ವಿಸ್ತರಣೆ
ಅಡಚಣೆಗಳನಡುವೆ
ಮುಹೂರ್ತ
ನಿಗದಿ;
ಡಿ.15
ಸಂಪುಟ
ವಿಸ್ತರಣೆ
ಡಿ.ಕೆ.
ಶಿವಕುಮಾರ್
ಇಲ್ಲ
,
ದೇಶಪಾಂಡೆಯೂ
ನಿಶ್ಚಿತವಿಲ್ಲ
ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದು 6 ತಿಂಗಳುಗಳೇ ಆಗಿವೆ. ಆದರೆ ಸಂಚಿವ ಸಂಪುಟದ ವಿಸ್ತರಣೆಗೆ ಅಡೆತಡೆಗಳು ತಪ್ಪಿದ್ದೇ ಇಲ್ಲ . ಧರ್ಮಸಿಂಗ್ ಮುಖ್ಯಮಂತ್ರಿಯಾಗಿ, ಸಿದ್ಧರಾಮಯ್ಯ ಉಪಮುಖ್ಯಮಂತ್ರಿಯಾಗಿ ರೂಪುಗೊಂಡ ಸಮ್ಮಿಶ್ರ ಸರ್ಕಾರದಲ್ಲಿ ಜೂನ್ 5 ರಂದು ಸಂಪುಟ ವಿಸ್ತರಣೆ ನಡೆದಿತ್ತು . ಈ ವಿಸ್ತರಣೆಯಲ್ಲಿ ಎರಡೂ ಪಕ್ಷಗಳಿಂದ ತಲಾ ಐದೈದು ಮಂದಿ ಸಂಪುಟ ಸೇರಿದ್ದರು. ಇದಾದ ಆರು ತಿಂಗಳು ಕಳೆದಮೇಲೆ ಸಂಪುಟ ವಿಸ್ತರಣೆಗೆ ಮತ್ತೆ ದಿನಾಂಕ ನಿಗದಿಯಾಗಿದೆ.
ಈ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್ನಿಂದ 9 ಮಂದಿ ಹಾಗೂ ಜೆಡಿಎಸ್ ನಿಂದ 11 ಜನ ಸಂಪುಟಕ್ಕೆ ಸೇರ್ಪಡೆಯಾಗುವ ನಿರೀಕ್ಷಿಯಿದೆ.
ಸಂಭವನೀಯ ಸಚಿವರ ಪಟ್ಟಿ ಇಂತಿದೆ :
ಕಾಂಗ್ರೆಸ್ನಿಂದ - ಎಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ, ಆರ್.ವಿ.ದೇಶಪಾಂಡೆ ಅಥವಾ ಪ್ರೊ.ಬಿ.ಕೆ.ಚಂದ್ರಶೇಖರ್, ಭಾಗೀರಥಿ ಮರುಳಸಿದ್ಧನಗೌಡ, ಡಾ.ಜಿ. ಪರಮೇಶ್ವರ್ ಅಥವಾ ಅಂಜನಮೂರ್ತಿ, ವೈ. ನಾಗಪ್ಪ , ಜಬ್ಬಾರ್ಖಾನ್ ಹೊನ್ನಳ್ಳಿ, ಕುಮಾರ್ ಬಂಗಾರಪ್ಪ.
ಜನತಾದಳದಿಂದ - ಅಮರೇಗೌಡ ಬಯ್ಯಾಪುರ, ಇಕ್ಬಾಲ್ ಅನ್ಸಾರಿ, ಬಸವರಾಜ ಹೊರಟ್ಟಿ, ಅಲಂಗೂರು ಶ್ರೀನಿವಾಸ್, ಸಿ.ಚನ್ನಿಗಪ್ಪ, ಎಚ್.ವೈ.ಮೇಟಿ, ಡಾ.ಎಚ್.ಸಿ.ಮಹದೇವಪ್ಪ, ಎಚ್.ಎಸ್. ಮಹದೇವಪ್ರಸಾದ್, ಬಿ.ಆರ್.ಪಾಟೀಲ್ ಅಥವಾ ವೈಜನಾಥ್ ಪಾಟೀಲ್, ಎನ್. ಚಲುವರಾಯಸ್ವಾಮಿ ಅಥವಾ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ, ಕೆ.ವೆಂಕಟೇಶ್ ಅಥವಾ ಸತ್ಯನಾರಾಯಣ್.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ