ಭ್ರಷ್ಟಾಚಾರ ನೀಗಲು ವಿದ್ಯಾರ್ಥಿಗಳಿಗೆ ಕಡ್ಡಾಯ ಎನ್.ಸಿ.ಸಿ. -ಕಲಾಂ
ಭ್ರಷ್ಟಾಚಾರ
ನೀಗಲು
ವಿದ್ಯಾರ್ಥಿಗಳಿಗೆ
ಕಡ್ಡಾಯ
ಎನ್.ಸಿ.ಸಿ.
-ಕಲಾಂ
ಸಾಮಾಜಿಕ
ಅಭಿವೃದ್ಧಿ
ಹಾಗೂ
ಶಾಂತಿ
ಸಾಧನೆಗಾಗಿ
ಎನ್ಸಿಸಿ
ವಿದ್ಯಾರ್ಥಿಗಳಿಗೆ ಎನ್ಸಿಸಿ ತರಬೇತಿ ನೀಡುವುದರಿಂದ ಸಮಾಜದಲ್ಲಿನ ಭ್ರಷ್ಟಾಚಾರವನ್ನು ನಿರ್ಮೂಲಗೊಳಿಸುವುದು ಸಾಧ್ಯವಾಗುತ್ತದೆ. ಅಂತೆಯೇ ಶಿಸ್ತಿನ ಅಳವಡಿಕೆ ಹಾಗೂ ಪರಿಸರ ಪ್ರೇಮವೂ ಎನ್ಸಿಸಿ ತರಬೇತಿಯಿಂದ ಸಾಧ್ಯವಾಗುತ್ತದೆ . ಹಾಗಾಗಿ ಎಲ್ಲ ಅರ್ಹ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಎನ್ಸಿಸಿ ಕಡ್ಡಾಯಗೊಳಿಸಬೇಕು ಎಂದು ಕಲಾಂ ಎನ್ಸಿಸಿ ಉಪನ್ಯಾಸವೊಂದರಲ್ಲಿ ಸೋಮವಾರ ಹೇಳಿದರು.
ಎನ್ಸಿಸಿ ಕಡ್ಡಾಯಗೊಳಿಸುವುದರಿಂದ ಎನ್ಸಿಸಿಗೆ 20 ಮಿಲಿಯನ್ ವಿದ್ಯಾರ್ಥಿಗಳಿಂದ ಬಲಗೊಳ್ಳುತ್ತದೆ. ಸಾಮಾಜಿಕ ಅಭಿವೃದ್ಧಿ ಹಾಗೂ ಶಾಂತಿ ಸಾಧನೆಯಲ್ಲಿ ಈ ಹೆಚ್ಚಳ ಧನಾತ್ಮಕ ಪಾತ್ರ ವಹಿಸುತ್ತದೆ ಎಂದು ಕಲಾಂ ಹೇಳಿದರು.
2020ರೊಳಗೆ ಭಾರತವನ್ನು ಅಭಿವೃದ್ಧಿ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸುವ ಮಂತ್ರಕ್ಕೆ 25 ವರ್ಷದೊಳಗಿನ 540 ಮಿಲಿಯನ್ ಯುವಜನರು ಇಂಧನವಾಗಿದ್ದಾರೆ ಎಂದು ಕಲಾಂ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು