ಎಂಥ ಓಡಾಟ-ತನಿಖೆ! ಎಲ್ಲ ಶ್ರೀಮತಿ ಧರ್ಮಸಿಂಗ್ ಫೋನ್ಗಾಗಿ
ಎಂಥ ಓಡಾಟ-ತನಿಖೆ! ಎಲ್ಲ ಶ್ರೀಮತಿ ಧರ್ಮಸಿಂಗ್ ಫೋನ್ಗಾಗಿ
ಮುಖ್ಯಮಂತ್ರಿ ಪತ್ನಿ ಪುತ್ರರ ಮೊಬೈಲ್ ಕಳೆದುಹೋದಾಗ........
ಮಾಮೂಲಿ ತನಿಖೆಯಲ್ಲ ; ಮೊಬೈಲ್ ಪತ್ತೆ ಹಾಗೂ ಅದನ್ನು ಕದ್ದವರ ಪತ್ತೆಗಾಗಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಸಹಕಾರ ಪಡೆದು ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆಗೆ ಇದ್ದಕ್ಕಿದ್ದಂತೆ ಕರ್ತವ್ಯೋದಯವಾದದ್ದು ಹೇಗೆ? ಯಾವ ಬೋಧಿವೃಕ್ಷದ ಕೆಳಗೆ? ಪೋಲೀಸ್ ಇಲಾಖೆ ಕಾರ್ಯ ವೈಖರಿ ಬಗೆಗೆ ಭೇಷ್ ಭೇಷ್ ಎನ್ನುವ ಮೊದಲು ಸುದ್ದಿಯನ್ನು ಪೂರ್ತಿ ಓದಿ ಬಿಡಿ.
ಮೊನ್ನೆ, ನ.13ರಂದು ಮುಖ್ಯಮಂತ್ರಿ ಧರ್ಮಸಿಂಗ್ ಪತ್ನಿ-ಪರಿವಾರ ಸಮೇತರಾಗಿ ಯಲಹಂಕದ ಸಮೀಪವಿರುವ ತಮ್ಮ ತೋಟಕ್ಕೆ ಭೇಟಿ ನೀಡಿದ್ದರು. ಒಂಥರಾ ಪಿಕ್ನಿಕ್ನಂಥ ಕಾರ್ಯಕ್ರಮ. ಪಾಲನಹಳ್ಳಿ ರೈಲ್ವೆ ಕ್ರಾಸಿಂಗ್ ಬಳಿ ಕಾರನ್ನು ನಿಲ್ಲಿಸಿದ್ದರು. ಅವಘಡ ನಡೆದದ್ದೇ ಆಗ.
ತೋಟಕ್ಕೆ ಹೋದವರು ಮರಳಿ ಬಂದು ನೋಡಿದರೆ ಕಾರಿನ ಗಾಜು ಚಿಂದಿಚಿಂದಿ. ಕಳ್ಳರು ಕಿಟಕಿ ಗಾಜನ್ನು ಒಡೆದು ಕಾರಿನೊಳಗಿದ್ದ ಮುಖ್ಯಮಂತ್ರಿಗಳ ಪತ್ನಿ ಪ್ರಭಾವತಿ ಹಾಗೂ ಪುತ್ರನ ಮೊಬೈಲ್ ಹ್ಯಾಂಡ್ಸೆಟ್ಗಳನ್ನು ಕೊಂಡೊಯ್ದಿದ್ದರು.
ಮುಖ್ಯಮಂತ್ರಿಗಳ ಪರಿವಾರಕ್ಕೆ ಮೊಬೈಲ್ ಯಾವ ಲೆಕ್ಕ? ಈ ಉದಾಸೀನದಿಂದಲೋ, ಅಥವಾ ಬಡಪಾಯಿ ಬಳಸಿಕೊಳ್ಳಲಿ ಎನ್ನುವ ಧರ್ಮರಾಯ ಬುದ್ಧಿಯಿಂದಲೋ ಏನೋ- ಮೊಬೈಲ್ ಕಳುವಿನ ಬಗ್ಗೆ ದೂರು ನೀಡಲೇ ಇಲ್ಲ . ್ಫಮುಂದಿನದೇ ತಮಾಷೆ. ದೊರೆಗಳು ದೂರು ನೀಡದಿದ್ದರೂ ಪೋಲೀಸರು ಸ್ವಯಂಪ್ರೇರಣೆಯಿಂದ ಕಾರ್ಯಪ್ರವೃತ್ತರಾದರು. ಶ್ವಾನದಳವೇನು, ಬೆರಳಚ್ಚು ತಜ್ಞರ ಓಡಾಟವೇನು... ರಾಮರಾಮ! ಮೊಬೈಲ್ ಕಳ್ಳ ಮಾತ್ರ ಇನ್ನೂ ಸಿಕ್ಲಿಲ್ಲ .
ಮೊಬೈಲ್ ಕಳ್ಳರಿಗಾಗಿ ತಲೆ ಕೆಡಿಸಿಕೊಂಡ ಪೊಲೀಸರ ನೋಡಿ, ತನ್ನ ದೂರು ಧೂಳು ತಿನ್ನುವುದನ್ನು ನೆನೆಯುತ್ತ ಬಡ ಬೋರೇಗೌಡ ನಿಟ್ಟುಸಿರುಬಿಟ್ಟಿದ್ದನ್ನು ಮಾತ್ರ ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ .
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications