ಹಿಂಸೆ ಬಿಡಿ, ಮಾತುಕತೆಗೆ ಕೂರಿ: ನಕ್ಸಲ್ರಿಗೆ ಧರ್ಮಸಿಂಗ್ ಕರೆ
ಹಿಂಸೆ
ಬಿಡಿ,
ಮಾತುಕತೆಗೆ
ಕೂರಿ:
ನಕ್ಸಲ್ರಿಗೆ
ಧರ್ಮಸಿಂಗ್
ಕರೆ
ನಕ್ಸಲರು
ಹಿಂಸೆಗಿಳಿದರೆ
ಸರ್ಕಾರ
ಮೂಕ
ಪ್ರೇಕ್ಷಕನಾಗಿ
ಕುಳಿತುಕೊಳ್ಳಲು
ಸಾಧ್ಯವಿಲ್ಲ
ನಕ್ಸಲರೊಂದಿಗೆ ಮಾತುಕತೆಗೆ ನಾವು ಸಿದ್ಧ . ಆದರೆ ನಕ್ಸಲರು ಹಿಂಸೆಗಿಳಿದರೆ ಸರ್ಕಾರ ಮೂಕ ಪ್ರೇಕ್ಷಕನಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಅ.13ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಧರ್ಮಸಿಂಗ್ ಹೇಳಿದರು.
ನಕ್ಸಲ್ ಸಮಸ್ಯೆಯನ್ನು ಸಾಮಾಜಿಯ ಸಮಸ್ಯೆಯನ್ನಾಗಿ ಪರಿಗಣಿಸಲು ಸರ್ಕಾರ ಯೋಚಿಸುತ್ತಿದೆ. ಆ ಕಾರಣದಿಂದಲೇ ಅವರೊಂದಿಗೆ ಮಾತುಕತೆಗೆ ಸಿದ್ಧವಿದೆ ಎಂದ ಧರ್ಮಸಿಂಗ್, ಈ ಹಿನ್ನೆಲೆಯಲ್ಲಿ ಆಂಧ್ರ ಸರ್ಕಾರ ಹಾಗೂ ನಕ್ಸಲ್ ನಾಯಕರೊಡನೆ ನಡೆಯುತ್ತಿರುವ ಮಾತುಕತೆಯನ್ನು ಉದಾಹರಿಸಿದರು.
ಜನರ ಹಿತಾಸಕ್ತಿಯನ್ನು ರಕ್ಷಿಸುವುದು ಸರ್ಕಾರದ ಪ್ರಾಥಮಿಕ ಕರ್ತವ್ಯ ಎಂದು ಸ್ಪಷ್ಟಪಡಿಸಿದ ಧರ್ಮಸಿಂಗ್- ನಕ್ಸಲರು ಮೊದಲು ಹಿಂಸಾತ್ಮಕ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂದು ಕರೆ ನೀಡಿದರು.
ಆಗುಂಬೆ ಬಳಿಯ ಬರ್ಕಾಣ ಜಲಪಾತದಿಂದ 5 ಕಿಮೀ ದೂರದಲ್ಲಿ ಅ. 11ರಂದು ನಕ್ಸಲರು ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿತ್ತು . ಈ ಚಕಮಕಿಯಲ್ಲಿ ನಕ್ಸಲ್ ಗುಂಪಿನಲ್ಲಿ ಸಾವುನೋವು ಉಂಟಾಗಿರಬಹುದು ಎಂದು ಊಹಿಸಲಾಗಿದೆ.
(ಪಿಟಿಐ)
ಮುಖಪುಟ / ಧರ್ಮ-ಕಾರಣ