ಹಂಪಿ ಸಮಗ್ರ ಅಭಿವೃದ್ಧಿಗೆ ಕೇಂದ್ರದಿಂದ 5 ಕೋಟಿ ಅನುದಾನ
ಹಂಪಿ
ಸಮಗ್ರ
ಅಭಿವೃದ್ಧಿಗೆ
ಕೇಂದ್ರದಿಂದ
5
ಕೋಟಿ
ಅನುದಾನ
ಹಳೇಬೀಡಿನಲ್ಲಿನ
ಹೊಯ್ಸಳ
ದೇಗುಲದ
ಅಭಿವೃದ್ಧಿಗೆ
61
ಲಕ್ಷ
ರುಪಾಯಿ
ಹಂಪಿಯ ಸುತ್ತಲಿನ ಪ್ರದೇಶವನ್ನು ಪರಂಪರೆ ಹಳ್ಳಿಯನ್ನು ರೂಪಿಸಲಾಗುವುದು. ಈ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನಿಗಾ ಹರಿಸಿದ್ದು , 5 ಕೋಟಿ ರುಪಾಯಿ ಅನುದಾನ ನೀಡಲಿದೆ ಎಂದು ಸಚಿವೆ ರೇಣುಕಾ ಚೌಧುರಿ ಹೇಳಿದರು. ಅವರು ಅ.12ರಂದು ಹಂಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಗಾಲಿಗಳ ಮೇಲಿನ ಅರಮನೆ ಮಾದರಿಯಲ್ಲಿ ಹಂಪಿ ಸೇರಿದಂತೆ ದಕ್ಷಿಣ ಭಾರತದ ಸಾಂಸ್ಕೃತಿಕ-ಪಾರಂಪರಿಕ ನಗರಿಗಳ ಪ್ರಚಾರಕ್ಕೆ ಮುಂದಿನ ವರ್ಷ ರೈಲು ಸಂಚಾರ ಪ್ರಾರಂಭವಾಗಲಿದೆ. ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶವನ್ನು ಸಂಪರ್ಕಿಸುವ ಈ ರೈಲಿನಲ್ಲಿ ಪ್ರವಾಸಿಗರು ಪ್ಯಾಕೇಜ್ ರೂಪದಲ್ಲಿ ಸಂಚರಿಸಬಹುದು ಎಂದರು.
ಅರ್ಧಕ್ಕೆ ನಿಂತಿರುವ ಆನೆಗೊಂದಿ ತೂಗುಸೇತುವೆ ವಿಷಯವನ್ನು ಯುನೆಸ್ಕೋದೊಂದಿಗೆ ಚರ್ಚಿಸುವುದಾಗಿ ರೇಣುಕಾ ಚೌಧುರಿ ಹೇಳಿದರು. ಹಳೇಬೀಡಿನಲ್ಲಿನ ಹೊಯ್ಸಳ ದೇಗುಲದ ಅಭಿವೃದ್ಧಿಗೆ 61 ಲಕ್ಷರುಪಾಯಿಗಳ ಅನುದಾನವನ್ನು ರೇಣುಕಾ ಚೌಧುರಿ ಇದೇ ಸಂದರ್ಭದಲ್ಲಿ ಪ್ರಕಟಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು