Get Updates
Get notified of breaking news, exclusive insights, and must-see stories!

ಹಿಡಕಲ್‌ ಅಣೆಕಟ್ಟೆಗೆ 5 ವರ್ಷದ ಗುಳೆ ನಂತರ ಮರಳಿದ ‘ನೀರಹಾಡು’

ಹಿಡಕಲ್‌ ಅಣೆಕಟ್ಟೆಗೆ 5 ವರ್ಷದ ಗುಳೆ ನಂತರ ಮರಳಿದ ‘ನೀರಹಾಡು’
ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಗ್ಗುಪ್ರದೇಶದ ಜನರಿಗೆ ಸೂಚನೆ

ಹುಕ್ಕೇರಿ : ಇದು ಗಂಗಾವತರಣದ ಮತ್ತೊಂದು ಸುದ್ದಿ . ಐದು ವರ್ಷಗಳಿಂದ ಗುಳೆ ಹೊಂಟಿದ್ದ ನೀರಹಾಡು ಹಿಡಕಲ್‌ ಜಲಾಶಯಕ್ಕೆ ವಾಪಸ್ಸಾದ ಸುದ್ದಿ .

ಬರಿದಾಗಿದ್ದ ಹಿಡಕಲ್‌ ಜಲಾಶಯ ಮುಂಗಾರು ವೈಭವದಿಂದಾಗಿ ನಳನಳಿಸುತ್ತಿದೆ. ತುಂಬಿತುಳುಕಿದ ಜಲಾಶಯದ ಎಂಟೂ ಕ್ರೆಸ್ಟ್‌ಗೇಟ್‌ಗಳನ್ನು ತೆರೆದು ನೀರು ಬಿಡಲಾಗಿದೆ. ಸುತ್ತಮುತ್ತಲ ಪ್ರದೇಶಕ್ಕೆಲ್ಲ ಸಂಭ್ರಮವೋ ಸಂಭ್ರಮ. ರೈತರ ಆನಂದವಂತೂ ಹೇಳತೀರದು.

ಮಹಾರಾಷ್ಟ್ರಕ್ಕೆ ಹೊಂದಿಕೊಂಡಂತಿರುವ ಹಿಡಕಲ್‌ ಜಲಾಶಯದ ಜಲಾನಯನ ಪ್ರದೇಶದಲ್ಲಿ ಈ ಸಲ ಉತ್ತಮ ಮಳೆ ಬಿದ್ದಿರುವುದರಿಂದ ಜಲಾಶಯದ ಒಳಹರಿವು ಹೆಚ್ಚಿದೆ. ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ನೀರನ್ನು ಘಟಪ್ರಭಾ ನದಿಗೆ ಬಿಡುಗಡೆ ಮಾಡಲಾಗಿದ್ದು , ತಗ್ಗು ಪ್ರದೇಶದ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.

ಆ.19ರಂದು ಜಲಾಶಯಕ್ಕೆ ಒಳಹರಿವಿನ ಪ್ರಮಾಣ 7571 ಕ್ಯೂಸೆಕ್ಸ್‌ ಆಗಿತ್ತು . ಜಲಾಶಯದ ನೀರನ್ನು ಎಡ ಹಾಗೂ ಬಲದಂಡೆ ಕಾಲುವೆಗಳಿಗೆ ಬಿಡುಗಡೆ ಮಾಡಲಾಗಿದೆ. ಬೆಳಗಾವಿ ನಗರ ಹಾಗೂ ಇತರ 17 ಹಳ್ಳಿಗಳು, ಹುಕ್ಕೇರಿ-ಸಂಕೇಶ್ವರ ಹಾಗೂ ಅವಕ್ಕೆ ಹೊಂದಿಕೊಂಡ 26 ಹಳ್ಳಿಗಳಿಗೆ ಕುಡಿಯುವ ನೀರನ್ನೂ ಬಿಡುಗಡೆ ಮಾಡಲಾಗಿದೆ.

ಅಂದಹಾಗೆ, ಜಲಾಶಯದ ನೀರಿನ ಗರಿಷ್ಠ ಸಂಗ್ರಹ ಸಾಮರ್ಥ್ಯ 2175 ಅಡಿಗಳು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+