ಹಿಡಕಲ್ ಅಣೆಕಟ್ಟೆಗೆ 5 ವರ್ಷದ ಗುಳೆ ನಂತರ ಮರಳಿದ ‘ನೀರಹಾಡು’
ಹಿಡಕಲ್
ಅಣೆಕಟ್ಟೆಗೆ
5
ವರ್ಷದ
ಗುಳೆ
ನಂತರ
ಮರಳಿದ
‘ನೀರಹಾಡು’
ಸುರಕ್ಷಿತ
ಸ್ಥಳಗಳಿಗೆ
ತೆರಳುವಂತೆ
ತಗ್ಗುಪ್ರದೇಶದ
ಜನರಿಗೆ
ಸೂಚನೆ
ಬರಿದಾಗಿದ್ದ ಹಿಡಕಲ್ ಜಲಾಶಯ ಮುಂಗಾರು ವೈಭವದಿಂದಾಗಿ ನಳನಳಿಸುತ್ತಿದೆ. ತುಂಬಿತುಳುಕಿದ ಜಲಾಶಯದ ಎಂಟೂ ಕ್ರೆಸ್ಟ್ಗೇಟ್ಗಳನ್ನು ತೆರೆದು ನೀರು ಬಿಡಲಾಗಿದೆ. ಸುತ್ತಮುತ್ತಲ ಪ್ರದೇಶಕ್ಕೆಲ್ಲ ಸಂಭ್ರಮವೋ ಸಂಭ್ರಮ. ರೈತರ ಆನಂದವಂತೂ ಹೇಳತೀರದು.
ಮಹಾರಾಷ್ಟ್ರಕ್ಕೆ ಹೊಂದಿಕೊಂಡಂತಿರುವ ಹಿಡಕಲ್ ಜಲಾಶಯದ ಜಲಾನಯನ ಪ್ರದೇಶದಲ್ಲಿ ಈ ಸಲ ಉತ್ತಮ ಮಳೆ ಬಿದ್ದಿರುವುದರಿಂದ ಜಲಾಶಯದ ಒಳಹರಿವು ಹೆಚ್ಚಿದೆ. ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ನೀರನ್ನು ಘಟಪ್ರಭಾ ನದಿಗೆ ಬಿಡುಗಡೆ ಮಾಡಲಾಗಿದ್ದು , ತಗ್ಗು ಪ್ರದೇಶದ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.
ಆ.19ರಂದು ಜಲಾಶಯಕ್ಕೆ ಒಳಹರಿವಿನ ಪ್ರಮಾಣ 7571 ಕ್ಯೂಸೆಕ್ಸ್ ಆಗಿತ್ತು . ಜಲಾಶಯದ ನೀರನ್ನು ಎಡ ಹಾಗೂ ಬಲದಂಡೆ ಕಾಲುವೆಗಳಿಗೆ ಬಿಡುಗಡೆ ಮಾಡಲಾಗಿದೆ. ಬೆಳಗಾವಿ ನಗರ ಹಾಗೂ ಇತರ 17 ಹಳ್ಳಿಗಳು, ಹುಕ್ಕೇರಿ-ಸಂಕೇಶ್ವರ ಹಾಗೂ ಅವಕ್ಕೆ ಹೊಂದಿಕೊಂಡ 26 ಹಳ್ಳಿಗಳಿಗೆ ಕುಡಿಯುವ ನೀರನ್ನೂ ಬಿಡುಗಡೆ ಮಾಡಲಾಗಿದೆ.
ಅಂದಹಾಗೆ, ಜಲಾಶಯದ ನೀರಿನ ಗರಿಷ್ಠ ಸಂಗ್ರಹ ಸಾಮರ್ಥ್ಯ 2175 ಅಡಿಗಳು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು