ತುಂಬುತ್ತಿರುವ ಕನ್ನಂಬಾಡಿಯಲ್ಲಿ ಜಲವೈಭವ : ಚಿಗುರಿದ ಕನಸುಗಳು !
ತುಂಬುತ್ತಿರುವ
ಕನ್ನಂಬಾಡಿಯಲ್ಲಿ
ಜಲವೈಭವ
:
ಚಿಗುರಿದ
ಕನಸುಗಳು
!
ಮಂಡ್ಯ-ಮೈಸೂರು
ರೈತರ
ಮೊಗದಲ್ಲಿ
ಲಕಲಕಿಸುತ್ತಿರುವ
ಕಳೆ....
ಜಲಾಶಯದಲ್ಲಿ ಪ್ರಸ್ತುತ (ಆ.6ರಂದು) 115.20 ಅಡಿ ನೀರಿದೆ. ಜಲಾಶಯದ ನೀರಿನ ಸಂಗ್ರಹದ ಗರಿಷ್ಠ ಮಟ್ಟ 124.80 ಅಡಿಗಳು. ನೀರಿನ ಮಟ್ಟದ ಹೆಚ್ಚಳದಿಂದ ಕಳೆದ ನಾಲ್ಕು ವರ್ಷಗಳಿಂದ ತಳಮಟ್ಟದಲ್ಲೇ ಇದ್ದ ಕನ್ನಂಬಾಡಿ ಈ ಬಾರಿ ತುಂಬುವ ಆಶಾಭಾವನೆ ಮೂಡಿದೆ.
ಕನ್ನಂಬಾಡಿ ಜಲಾಶಯದಲ್ಲಿ ನೀರ ಸಂಭ್ರಮ ತುಳುಕುತ್ತಿರುವುದರಿಂದ ಮಂಡ್ಯ ಹಾಗೂ ಮೈಸೂರಿನ ರೈತರು ಹರ್ಷಚಿತ್ತರಾಗಿದ್ದಾರೆ. ಈ ಬಾರಿಯಾದರೂ ಪೂರ್ಣಾವಧಿ ಬೆಳ ಕಾಣಬಹುದೆನ್ನುವ ನಿರೀಕ್ಷೆ ಅವರದು. ಬೆಂಗಳೂರಿನ ಜನತೆಗೆ ಕೊರೆಯಿಲ್ಲದೆ ಕುಡಿಯುವ ನೀರು ಪೂರೈಕೆಯಾಗುವ ಸಂಭ್ರಮ. ಈ ನಡುವೆ ಕನ್ನಂಬಾಡಿಯ ಜಲವೈಭವ ನೋಡಲಿಕ್ಕೆ ಬರುವ ಜನರ ಸಂಖ್ಯೆಯೂ ಹೆಚ್ಚಾಗಿದೆ.
ಯಾವುದೇ ಕ್ಷಣದಲ್ಲಿ ಭರ್ತಿ : ಕೆಆರ್ಎಸ್ ಜಲಾಶಯ ಯಾವುದೇ ಕ್ಷಣದಲ್ಲಿ ಭರ್ತಿಯಾಗಿ ನೀರನ್ನು ನದಿಗೆ ಬಿಡಬಹುದು. ಆ ಕಾರಣದಿಂದಾಗಿ ತಗ್ಗು ಪ್ರದೇಶದ ಜನರು ಜಾನುವಾರು ಹಾಗೂ ಇತರ ಸಾಮಗ್ರಿಗಳೊಂದಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಜಲಾಶಯದ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಜಲಾಶಯದ ನೀರಿನ ಮಟ್ಟ 120 ಅಡಿ ದಾಟಿದ ನಂತರ ನೀರನ್ನು ನದಿಗೆ ಬಿಡುವ ಸಾಧ್ಯತೆಯಿದೆ. ಪ್ರಸ್ತುತ 4 ಸಾವಿರ ಕ್ಯುಸೆಕ್ಸ್ ನೀರನ್ನು ವಿವಿಧ ನಾಲೆಗಳಿಗೆ ಬಿಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಭರ್ತಿಯಾಗಿರುವ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಯತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು