Get Updates
Get notified of breaking news, exclusive insights, and must-see stories!

ಕಲಾಮ್‌ರಿಂದ ಜೂ.30ರಂದು ದ್ರಾವಿಡ್‌ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

ಕಲಾಮ್‌ರಿಂದ ಜೂ.30ರಂದು ದ್ರಾವಿಡ್‌ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕರ್ನಾಟಕದ ಕ್ರಿಕೆಟಿಗರಲ್ಲಿ ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರನಾದ ಐದನೆಯವ ದ್ರಾವಿಡ್‌

ನವದೆಹಲಿ: ಭಾರತ ಕ್ರಿಕೆಟ್‌ ಉಪ ಕಪ್ತಾನ ರಾಹುಲ್‌ ದ್ರಾವಿಡ್‌ ಅವರಿಗೆ ಜೂನ್‌ 30ರಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್‌ ಕಲಾಂ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.

‘ ನಾನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವುದು ನಿಜಕ್ಕೂ ಅತೀವ ಸಂತಸ ಮತ್ತು ವ್ಯಕ್ತಪಡಿಸಲಾಗದಂತಹ ಖುಷಿಯನ್ನು ಕೊಟ್ಟಿದೆ. ನಾನು ಆದರ್ಶವಾಗಿ ಇಟ್ಟುಕೊಂಡ ಕೆಲ ಕ್ರಿಕೆಟ್‌ ಆಟಗಾರರಿಗೆ ಈ ಗೌರವಯುತ ಪದ್ಮಶ್ರೀ ಪ್ರಶಸ್ತಿ ದೊರಕಿದೆ. ಇದು ನನಗೆ ಸಿಗುತ್ತಿರುವುದು ನನ್ನ ಭಾಗ್ಯ. ಇದನ್ನು ಒಂದು ಉನ್ನತ ಪಾರಿತೋಷ ಎಂದು ಪರಿಗಣಿಸುತ್ತೇನೆ ’ ಎಂದು ದ್ರಾವಿಡ್‌ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಪದ್ಮಶ್ರೀ ಪ್ರಶಸ್ತಿಯ ಗೌರವಕ್ಕೆ ಪಾತ್ರರಾದ ಕರ್ನಾಟಕದ ಕ್ರಿಕೆಟ್‌ ಆಟಗಾರರಲ್ಲಿ ರಾಹುಲ್‌ ದ್ರಾವಿಡ್‌ ಅವರು ಐದನೆಯವರಾಗಿದ್ದಾರೆ. ಇದಕ್ಕೂ ಮುಂಚೆ ಈ.ಎ.ಎಸ್‌. ಪ್ರಸನ್ನ, ಜಿ. ಆರ್‌. ವಿಶ್ವನಾಥ್‌, ಬಿ.ಎಸ್‌. ಚಂದ್ರಶೇಖರ್‌ ಮತ್ತು ಸಯ್ಯದ್‌ ಕೀರ್ಮಾನಿ ಅವರುಗಳು ಈ ಪ್ರಶಸ್ತಿಗೆ ಪಾತ್ರರಾಗಿದ್ದರು.

ದ್ರಾವಿಡ್‌ ಅವರ ಜೊತೆ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಇತರ ಕ್ರೀಡಾಪಟುಗಳೆಂದರೆ- ಅಂಜು ಬಿ. ಜಾರ್ಜ್‌, ದಿಲೀಪ್‌ ಟಿರ್ಕೆ ಮತ್ತು ಕೆ.ಎಂ. ಬೀನಾಮೊಲ್‌.

(ಪಿ.ಟಿ.ಐ)

ಮುಖಪುಟ / ವಾಟ್ಸ್‌ ಹಾಟ್‌

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+