ಮಧುಮೇಹ : ಭದ್ರಾವತಿ ಆಕಾಶವಾಣಿ ಕೇಂದ್ರದಿಂದ ವಿಶೇಷ ಸರಣಿ
ಮಧುಮೇಹ
:
ಭದ್ರಾವತಿ
ಆಕಾಶವಾಣಿ
ಕೇಂದ್ರದಿಂದ
ವಿಶೇಷ
ಸರಣಿ
ರೋಗ-ಚಿಕಿತ್ಸೆಯ
ಎಲ್ಲ
ಆಯಾಮಗಳ
ಕುರಿತು
ಒಳನೋಟಗಳು,
ಸ್ಪರ್ಧೆಯೂ
ಉಂಟು
ಸಕ್ಕರೆ ಕಾಯಿಲೆಯ ಲಕ್ಷಣಗಳು, ಪರಿಣಾಮಗಳು, ದೇಹದ ವಿವಿಧ ಭಾಗಗಳ ಮೇಲೆ ಬೀರುವ ಪರಿಣಾಮ, ಕಾಯಿಲೆ ನಿಯಂತ್ರಣಕ್ಕೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಆಹಾರ ಪಥ್ಯೆ ಮುಂತಾದ ವಿಷಯಗಳ ಕುರಿತು ಈ ಕಾರ್ಯಕ್ರಮ ಬೆಳಕು ಚೆಲ್ಲಲಿದೆ. ಪ್ರತಿ ಸೋಮವಾರ ಬೆಳಗ್ಗೆ 8.35ಕ್ಕೆ ಪ್ರಸಾರವಾಗುವ ಈ ವಿಶೇಷ ಕಾರ್ಯಕ್ರಮ ಸರಣಿ, ಜೂನ್ 21ರಿಂದಲೇ ಪ್ರಾರಂಭವಾಗಿದೆ.
ಕಾರ್ಯಕ್ರಮವನ್ನು ಆಕರ್ಷಣೀಯವಾಗಿಸಲು ಬಹುಮಾನ ಯೋಜನೆಯಾಂದನ್ನು ಆಕಾಶವಾಣಿ ಕೇಂದ್ರ ಆಯೋಜಿಸಿದೆ. ಪ್ರತಿ ಕಾರ್ಯಕ್ರಮದ ಕೊನೆಯಲ್ಲಿಯೂ ಪ್ರಶ್ನೆಯಾಂದನ್ನು ಕೇಳಲಾಗುತ್ತಿದ್ದು , ಸರಿಯುತ್ತರ ಕಳುಹಿಸುವ ಅದೃಷ್ಟಶಾಲಿಗಳಿಗೆ ಬಹುಮಾನ ನೀಡಲಾಗುವುದು.
ಮಧುಮೇಹ ರೋಗಿಗಳು ಹಾಗೂ ಆಸಕ್ತರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಆಕಾಶವಾಣಿಯ ಪ್ರಕಟಣೆ ತಿಳಿಸಿದೆ. ಮಧುಮೇಹಕ್ಕೆ ಸಂಬಂಧಿಸಿದಂತೆ ತಮ್ಮ ತೊಂದರೆ, ಸಲಹೆಗಳನ್ನು ಕಳುಹಿಸಲೂ ಅವಕಾಶವಿದೆ. ವಿಳಾಸ : ನಿಲಯದ ನಿರ್ದೇಶಕರು, ಸಕ್ಕರೆ ಕಾಯಿಲೆ ಸರಣಿ ಕಾರ್ಯಕ್ರಮ ವಿಭಾಗ, ಆಕಾಶವಾಣಿ, ಜೆಪಿಎಸ್ ಕಾಲೊನಿ, ಭದ್ರಾವತಿ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು