ಮುಂಗಾರು ಕೃಪೆಯಿಂದಾಗಿ ಬಾದಾಮಿ ‘ಅಗಸ್ತ್ಯ ತೀರ್ಥ’ದಿ ಲವಲವಿಕೆ
ಮುಂಗಾರು
ಕೃಪೆಯಿಂದಾಗಿ
ಬಾದಾಮಿ
‘ಅಗಸ್ತ್ಯ
ತೀರ್ಥ’ದಿ
ಲವಲವಿಕೆ
ಕೊಳವೆ
ಬಾವಿಗಳಲ್ಲಿ
ಮತ್ತೆ
ನೀರು,
ನಾಗರಿಕರಿಗೆ
ನೆಮ್ಮದಿಯ
ಉಸಿರು
ಸತತ ಬರದಿಂದಾಗಿ ಎಂದೂ ತಳವನ್ನೇ ತೋರದ ಅಗಸ್ತ್ಯ ತೀರ್ಥ ಹೆಚ್ಚೂ ಕಡಿಮೆ ಒಣಗುವ ಸ್ಥಿತಿಗೆ ಬಂದಿತ್ತು . ಪವಿತ್ರ ಅಗಸ್ತ್ಯ ತೀರ್ಥ ಬರಿದಾಗುತ್ತಿರುವುದನ್ನು ನೋಡಿ ಸ್ಥಳೀಯ ಜನತೆ ಆತಂಕ ಪಡುತ್ತಿದ್ದರು. ಇಂಥ ಸಂಕಟದ ಸಮಯದಲ್ಲಿ ಮಳೆರಾಯ ಮುನಿಸು ತೊರೆದಿದ್ದಾನೆ ; ಚೆಂದದ ಮಾನ್ಸೂನ್ನಿಂದಾಗಿ ಅಗಸ್ತ್ಯ ತೀರ್ಥ ಮತ್ತೆ ಲಕಲಕಿಸುತ್ತಿದೆ.
ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿ, ಕನ್ನಡಿಗರ ಹೆಮ್ಮೆಯ ಸ್ಥಳಗಳಲ್ಲೊಂದು. ಇಲ್ಲಿನ ಅಗಸ್ತ್ಯ ತೀರ್ಥಕ್ಕೆ ಪೌರಾಣಿಕ ಐತಿಹ್ಯವಿದ್ದು , ಪಟ್ಟಣದ ಜೀವಸೆಲೆಗಳಲ್ಲಿ ಒಂದಾಗಿದೆ. ಒಂದಾನೊಂದು ಕಾಲದಲ್ಲಿ ಪಟ್ಟಣದ ಜನರ ಕುಡಿಯುವ ನೀರಿನ ಆಕರವೂ ಇದಾಗಿತ್ತು . ಆದರೆ, ಕಳೆದ ಮೂರು ವರ್ಷಗಳಲ್ಲಿ ಮಳೆಯ ಕೊರತೆಯಿಂದಾಗಿ ಅಗಸ್ತ್ಯ ತೀರ್ಥದ ತಳ ಕಂಡಿತ್ತು .
ಪ್ರಸ್ತುತ ಸುರಿಯುತ್ತಿರುವ ಮಳೆಯಿಂದಾಗಿ ಅಗಸ್ತ್ಯ ತೀರ್ಥ ಭರ್ತಿಯಾಗಿದೆ. ಅಗಸ್ತ್ಯ ತೀರ್ಥದ ಸುತ್ತಮುತ್ತಲ ಪ್ರದೇಶದ ಅಂತರ್ಜಲ ಕೂಡ ವೃದ್ಧಿಯಾಗಿದ್ದು , ಕೊಳವೆ ಬಾವಿಗಳಲ್ಲಿ ಮತ್ತೆ ನೀರು ಕಾಣಿಸಿಕೊಂಡಿದೆ. ಅಗಸ್ತ್ಯ ತೀರ್ಥವನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಬೇಕು ಹಾಗೂ ನೀರಿನ ಸೂಕ್ತ ಬಳಕೆಗೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪಟ್ಟಣದ ನಾಗರಿಕರು ಸ್ಥಳೀಯ ಆಡಳಿತವನ್ನು ಒತ್ತಾಯಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು