Get Updates
Get notified of breaking news, exclusive insights, and must-see stories!

ಭಾರತದಲ್ಲಿ ಬದಲಾವಣೆಯ ಪರ್ವ ಆರಂಭ : ಮನಮೋಹನಸಿಂಗ್‌

ಭಾರತದಲ್ಲಿ ಬದಲಾವಣೆಯ ಪರ್ವ ಆರಂಭ : ಮನಮೋಹನಸಿಂಗ್‌
ಕಾಂಗ್ರೆಸ್‌ ಯಜಮಾನಿಕೆಯ ಮೈತ್ರಿಕೂಟದ ನೂತನ ಸರಕಾರ ಮೇ. 22ರ ಶನಿವಾರ ಅಸ್ಥಿತ್ವಕ್ಕೆ

ನವದೆಹಲಿ : ಕೇಂದ್ರದಲ್ಲಿ ಕಾಂಗ್ರೆಸ್‌ ಮೈತ್ರಿಕೂಟದ ನೂತನ ಸರಕಾರವು ಮೇ. 22ರ ಶನಿವಾರ ಅಸ್ಥಿತ್ವಕ್ಕೆ ಬರಲಿದೆ. ನೂತನ ಪ್ರಧಾನಿ ಅರ್ಥ ಶಾಸ್ತ್ರಜ್ಞ ಡಾ. ಮನಮೋಹನ ಸಿಂಗ್‌. ವೃತ್ತಿರಾಜಕಾರಣಿಯಲ್ಲದ , 71ರ ಹರೆಯದ ಪಂಜಾಬ್‌ ಸಂಜಾತ ಸಿಂಗ್‌, ರಾಜ್ಯಸಭೆಗೆ ಆರಿಸಿ ಬಂದದ್ದು ಅಸ್ಸಾಂನಿಂದ. ಆರ್ಥಿಕ ಸುಧಾರಣಾ ತಜ್ಞರಾಗಿರುವ ಅವರನ್ನು ಮಿ। ಕ್ಲೀನ್‌ ಎಂದು ರಾಜಕೀಯ ಮಂದಿ ಬಣ್ಣಿಸುತ್ತಾರೆ. ಅಧ್ಯಾಪಕ, ಭಾರತೀಯ ರಿಸರ್ವ್‌ ಬ್ಯಾಂಕಿನ ಗವರ್ನ್‌ರ್‌, ಆರ್ಥಿಕ ಸಲಹಾಗಾರ, ಆಡಳಿತಗಾರರಾಗಿ ದುಡಿದ ಅಪಾರ ಅನುಭವ ಅವರಿಗುಂಟು.

ಮನಮೋಹನ್‌ ಸಿಂಗ್‌ ಮೇ 20ರ ಗುರುವಾರ ನವದೆಹಲಿಯಲ್ಲಿ ಮಾಧ್ಯ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಪತ್ರಿಕಾಗೋಷ್ಠಿಯ ಪ್ರಮುಖ ಅಂಶಗಳು ಹೀಗಿವೆ :

ಸರಕಾರದ ಪ್ರಮುಖ ಧ್ಯೇಯೋದ್ದೇಶಗಳು :

-ಮೈತ್ರಿಕೂಟ ಅಂಗೀಕರಿಸಿದ ಸಾಮನ್ಯ ಕನಿಷ್ಠ ಕಾರ್ಯಕ್ರಮದಂತೆ ಆಡಳಿತ.

-ಜಾತ್ಯತೀತ ಆಧಾರಿತ ಸರಕಾರ. ಶೋಷಣೆ ಮತ್ತು ಆಂತರಿಕ ಯುದ್ಧಕ್ಕೆ ಆಸ್ಪದವಿಲ್ಲ.

-ಸರಕಾರ ದ್ವಿಕೇಂದ್ರೀಕೃತ ಆಡಳಿತವಲ್ಲ. ಮೈತ್ರಿಕೂಟದ ಸರಕಾರ. ಸೋನಿಯಾ ಗಾಂಧಿ ಹಿತೈಷಿ- ಮಾರ್ಗದರ್ಶಿ. -ಮೈತ್ರಿಕೂಟವು ಐದು ವರ್ಷಗಳ ಕಾಲ ಸಧೃಡ ಮತ್ತು ಸ್ಥಿರ ಸರಕಾರ ನಿಡುವುದು. ಕಾಂಗ್ರೆಸ್‌ ಮತ್ತು ಮಿತ್ರ ಪಕ್ಷಗಳ ಮೈತ್ರಿಕೂಟದ ನಡುವಿನ ಬಾಂಧವ್ಯ ಸುಭದ್ರ.

-ಸರ್ವಶಿಕ್ಷಣ, ಎಲ್ಲರಿಗೂ ಆರೋಗ್ಯ, ಕೊಳಚೆ ನಿವಾಸಿಗಳಿಗೆ ಮನೆ, ಪರಿಸರದ ಅಭಿವೃದ್ಧಿ ಮತ್ತು ಕೃಷಿ ಚಟುವಟಿಕೆಗಳಿಗೆ ಉತ್ತೇಜನ .

ಖಾಸಗೀಕರಣ :

-ಹಿಂದಿನ ಸರಕಾರ ಉದ್ದೇಶಿಸಿದ್ದ ಒಎನ್‌ಜಿಸಿ (ಣಘಎಇ) ಮತ್ತು ಜಿಎಐಎಲ್‌ (ಎಅಐಔ0) ಸಂಸ್ಥೆಗಳ ಖಾಸಗೀಕರಣವಿಲ್ಲ.

-ಖಾಸಗಿಕರಣವು ನಮ್ಮ ಸಿದ್ಧಾಂತದ ಭಾಗವಲ್ಲ. ಭಾರತಕ್ಕೆ ಬಲಶಾಲಿಯಾದ ಖಾಸಗಿ ವಲಯದಷ್ಟೇ ಸಾರ್ವಜನಿಕ ಉದ್ದಿಮೆ ಅವಶ್ಯ.

-ಬ್ಯಾಂಕ್‌ಗಳನ್ನು ಯಾವುದೇ ಕಾರಣಕ್ಕೆ ಖಾಸಗಿಗೊಳಿಸುವುದಿಲ್ಲ. ಅಧಿಕ ಉದ್ಯೋಗಿಗಳನ್ನು ಹೊರದಬ್ಬುವ ನಿರ್ಣಯಗಳನ್ನು ಕೈಗೊಳ್ಳುವುದಿಲ್ಲ.

-ಇತರ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವುದು ಪಿಎಸ್‌ಯು (ಕಖಖಿಠ) ನಿರ್ಣಯಕ್ಕೆ ಬಿಡಲಾಗುವುದು. ಸಾರ್ವಜನಿಕ ವಲಯದ ಉದ್ದಿಮೆಗಳು ಖಾಸಗಿ ಉದ್ದಿಮೆಗಳಿಗೆ ಸ್ಪರ್ಧೆ ಒಡ್ಡುವಂತೆ ಮಾಡುವುದು. ಅವರ ಸಮಾನ ನಿಲ್ಲುವಂತೆ ಮಾಡುವುದು. ಎಲ್ಲಕ್ಕಿಂತ ಮುಖ್ಯ ಕಾರ್ಮಿಕರ ಹಿತಾಸಕ್ತಿ.

-ಸಾರ್ವಜನಿಕ ಉದ್ದಿಮೆಯನ್ನು ಆಂತರಿಕ ಮತ್ತು ವಿದೇಶದಲ್ಲಿ ಖಾಸಗಿ ವಲಯಕ್ಕೆ ಪ್ರತಿಸ್ಪರ್ಧೆ ನೀಡುವಂತೆ ಬೆಳಸಲು ಪ್ರಯತ್ನ.

ಆರ್ಥಿಕತೆ :

-ಮಾನವೀಯ ಮೌಲ್ಯ ಆಧಾರಿತ ಆರ್ಥಿಕ ಸುಧಾರಣೆಗಳಿಗೆ ಮಹತ್ವ.

-ಅಭಿವೃದ್ಧಿಯು ಪ್ರಮುಖ ಆರ್ಥಿಕ ವಿಚಾರ .

-ಬಡತನ ನಿರ್ಮೂಲನೆ, ಉದ್ಯೋಗ ಹೆಚ್ಚಳ ಮತ್ತು ವಿಕೇಂದ್ರಿಕೃತ ಘಟಕಗಳ ಅಭಿವೃದ್ಧಿಗೆ ಮಹತ್ವ

- ಕೃಷಿಗೆ ಹೆಚ್ಚಿನ ಗಮನ ನೀಡಲಾಗುವುದು.

-ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ದಿಟ್ಟ ಹೆಜ್ಜೆ.

ರಾಷ್ಟ್ರೀಯ ಹೆದ್ದಾರಿ:

-ಹಿಂದಿನ ಸರಕಾರ ಆರಂಭಿಸಿದ ರೂ. 58,000 ಕೋಟಿಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯನ್ನು ಮುಂದುವರಿಸಲಾಗುವುದು.

-ರಸ್ತೆಗಳು ರಾಷ್ಟ್ರೀಯ ಹಿತಾಸಕ್ತಿಯ ವಿಷಯ. ದೇಶದ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಅಗತ್ಯ.

ಸುವರ್ಣ ಚರ್ತುಭುಜ ರಸ್ತೆಯ ಜೊತೆ ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆಗೆ ಮಹತ್ವ.

ಧಾರ್ಮಿಕ ವಿಚಾರ :

-ಭಾರತ ಪ್ರಾಚೀನ ಸಂಸ್ಕೃತಿಯ ರಾಷ್ಟ್ರ. ಹಿಂದುತ್ವದ ಸಹಿಷ್ಣತಾ ಭಾವವನ್ನು ಕಾಪಾಡಿಕೊಂಡು ಬರಲಾಗುವುದು.

-ಜಾತಿ-ಮತದ ಆಧಾರದಲ್ಲಿ ಜನರನ್ನು ವಿಭಜಿಸುವುದಕ್ಕೆ ವಿರೋಧ. ಜನರನ್ನು ವಿಭಜಿಸಿ ಸರಕಾರದ ಅವಧಿ ಸಂಪೂರ್ಣಗೊಳಿಸುವ ಅಗತ್ಯವಿಲ್ಲ.

-ಕೋಮು ಭಾಂದವ್ಯ ಬಲಗೊಳಿಸಲು ಶ್ರಮ. ಎಲ್ಲಾ ದೇಶಪ್ರೇಮಿ ಮತೀಯರು ತಮ್ಮ ಧರ್ಮಯುದ್ಧವನ್ನು ಬಡತನ, ಅಜ್ಞಾನ ಮತ್ತು ರೋಗದ ವಿರುದ್ಧ ನಡೆಸಲು ಕರೆ.

-ಹಿಂದಿನ ಸರಕಾರದಂತೆ ಯಾವುದೇ ವಿಭಜಕ ಮತ್ತು ವಿಧ್ವಂಸಕ ಶಕ್ತಿಗಳಿಗೆ ಆಟವಾಡಲು ಅವಕಾಶವಿಲ್ಲ.

ಪಾಕಿಸ್ಥಾನ್‌ :

-ಇಸ್ಲಮಾಬಾದ್‌ಜೊತೆ ಮಾತುಕತೆಗೆ ಒಲವು.

-ನೆರೆಹೊರೆಯ ರಾಷ್ಟ್ರಗಳೊಂದಿಗೆ ಬಾಂಧವ್ಯ ಅಭಿವೃದ್ಧಿಗೆ ಪ್ರಯತ್ನ.

-ಪಾಕ್‌-ಭಾರತದ ಕೆಟ್ಟ ಇತಿಹಾಸವ ಮರೆತು ಹೊಸ ಭವಿಷ್ಯತ್‌ನತ್ತ ದೃಷ್ಟಿ.

-ಬರ್ಲಿನ್‌ ಗೋಡೆ ಬೀಳುವುದನ್ನು ಹಿಂದೆ ಯಾರಾದರೂ ನಿರೀಕ್ಷಿಸಲಿಲ್ಲ. ಅಂತಹ ಪ್ರಯತ್ನ .

ಭಾರತದ ಹಿತಾಸಕ್ತಿಯನ್ನು ತ್ಯಾಗ ಮಾಡದೆ ಪಾಕಿಸ್ಥಾನದ ಜೊತೆ ಬಾಂಧವ್ಯ ಮುಂದುವರಿಕೆ.

ಗುಜರಾತ್‌ - ಸಿಖ್ಖ್‌ ಹತ್ಯಾಕಾಂಡ :

-ಗುಜರಾತ್‌ ಮತ್ತು ಸಿಖ್ಖ್‌ ಹತ್ಯಾಕಾಂಡದಂತಹ ಘಟನೆಗಳಿಗೆ ಇನ್ನು ಮುಂದೆ ಆಸ್ಪದವಿಲ್ಲ. ಇತಿಹಾಸದಿಂದ ನಾವು ಪಾಠ ಕಲಿತುಕೊಂಡಿದ್ದೇವೆ.

-ಈ ಹತ್ಯಾಕಾಂಡದಲ್ಲಿ ನೊಂದವರಿಗೆ ಪರಿಹಾರ ನೀಡುವ ಪ್ರಶ್ನೆಯಿಲ್ಲ. ಸರಕಾರದಿಂದ ಆದಷ್ಟು ಸಹಾಯ ಮಾಡಲಾಗುವುದು.

-ಗುಜರಾತ್‌ನ್ಯಾಯಾಲಯಗಳ ಕಾರ್ಯವೈಖರಿ ಕುರಿತು ಬೇಸರ. ಆ ಕುರಿತು ಹೆಚ್ಚಿನ ಗಮನ .

ಅಯೋಧ್ಯೆ:

-ಸೂಕ್ಷ್ಮ ವಿಚಾರಗಳಿಗೆ ನ್ಯಾಯಾಲಯದ ತೀರ್ಮಾನವೇ ಉತ್ತಮ.

-ಅಯೋಧ್ಯೆ ವಿಚಾರದಲ್ಲಿ ನಿರರ್ಥಕವಾಗಿ ಸಾಗುವ ಮಾತುಕತೆಗಳಿಗೆ ಆಸ್ಪದವಿಲ್ಲ. ಈ ಕುರಿತ ಮಹತ್ವದ ಮತ್ತು ಅತಿಸೂಕ್ಷ್ಮ ವಿಚಾರಗಳಿಗೆ ಮಾತ್ರ ಮಾತುಕತೆ ನಡೆಸಲಾಗುವುದು.

-ಇದಲ್ಲದೇ ಇನ್ನೂ ಹಲವು ಆಂತರಿಕ ಸಮಸ್ಯೆಗಳಿಗೆ ನ್ಯಾಯಾಲಯದ ತೀರ್ಪನ್ನೇ ಅಂಗೀಕರಿಸಲಾಗುವುದು.

ಕಾಶ್ಮೀರ ಸಮಸ್ಯೆ :

-ಕಾಶ್ಮೀರ ಸಮಸ್ಯೆಗೆ ಸಂಬಂಧ ಪಟ್ಟ ಸರ್ವರ ಜೊತೆ ಭಾರತ ಮಾತುಕತೆ ನಡೆಸಲು ಸಿದ್ಧ.

-ಸ್ವಾತಂತ್ರ ಕೇಳುತ್ತಿರುವ ಹುರಿಯತ್‌ ಕಾನ್ಫರೆನ್ಸ್‌ನ್ನು ಸಹ ಮಾತುಕತೆಗೆ ಆಹ್ವಾನಿಸಲಾಗುವುದು. ಜಮ್ಮು-ಕಾಶ್ಮೀರದ ಶಾಂತಿಗಾಗಿ ಇರುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಲಾಗುವುದು. ಅದು ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿಯಲಿದೆ.

(ಇನ್‌ಫೊವಾರ್ತೆ/ಪಿಟಿಐ)

ಮುಖಪುಟ / ಕುರುಕ್ಷೇತ್ರ-2004

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+