ಹುಬ್ಬಳ್ಳಿ: ಮತಪಟ್ಟಿಯಿಂದ ಅಂತರ್ಧಾನರಾದವರ ಪರ ಶೆಟ್ಟರ್ ಕಾಳಜಿ
ಹುಬ್ಬಳ್ಳಿ:
ಮತಪಟ್ಟಿಯಿಂದ
ಅಂತರ್ಧಾನರಾದವರ
ಪರ
ಶೆಟ್ಟರ್
ಕಾಳಜಿ
ಮತಪಟ್ಟಿಯಲ್ಲಿ
ಹೆಸರುಗಳ
ನಾಪತ್ತೆಗೆ
ಕಾರಣ
ಕೃಷ್ಣ
ಪರಮಾತ್ಮ
!
ಚುನಾವಣಾ ಆಯಾಗ ನೀಡಿದ ಗುರುತಿನ ಚೀಟಿ ಇದ್ದರೂ ಸಹಸ್ರಾರು ಜನರಿಗೆ ಮತದಾನ ಮಾಡಲು ಸಾಧ್ಯವಾಗಿಲ್ಲ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಮತದಾನ ಮಾಡಗೊಡದಿದ್ದರೆ ಆಯಾಗ ನೀಡಿದ ಗುರುತಿನ ಚೀಟಿಯ ಉಪಯೋಗವಾದರೂ ಏನು ಎಂದು ಪ್ರಶ್ನಿಸಿದ ಜಗದೀಶ ಶೆಟ್ಟರ್- ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ವೋಟು ವಂಚಿತ ಮತದಾರರಿಗೆ ತಮ್ಮ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಬೇಕು ಎಂದರು. ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಈ ರೀತಿ ಹೆಸರು ನಾಪತ್ತೆಯಾಗಿರುವುದು ಪ್ರಜ್ಞಾವಂತ ಜನರಿರುವ ಪ್ರದೇಶಗಳಲ್ಲಿಯೇ ಹೆಚ್ಚಾಗಿದೆ. ಇದು ಕೃಷ್ಣ ಸರ್ಕಾರದ ವ್ಯವಸ್ಥಿತ ಸಂಚಾಗಿದೆ. ತಿಳುವಳಿಕೆಯುಳ್ಳವರು ಕಾಂಗ್ರೆಸ್ಗೆ ಮತ ಹಾಕುವುದಿಲ್ಲವೆಂದೇ ಇಂಥ ಮತದಾರರ ಹೆಸರನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಲಾಗಿದೆ. ಇದು ಕೃಷ್ಣ ನೇತ್ರತ್ವದ ಸರ್ಕಾರದ ಸಂಚು ಎಂದು ಶೆಟ್ಟರ್ ಆಪಾದಿಸಿದರು.
ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆಯುವೆ. ಈ ಕಾರ್ಯಕ್ಕೆ ಹೊಣೆಗಾರರಾದ ಅಧಿಕಾರಿಗಳ ವಿರುದ್ಧ ಆಯೋಗ ಕ್ರಮ ಕೈಗೊಳ್ಳಬೇಕೆಂದು ಶೆಟ್ಟರ್ ಮನವಿ ಮಾಡಿದರು.
(ಏಜನ್ಸೀಸ್)
ಮುಖಪುಟ / ಕುರುಕ್ಷೇತ್ರ-2004