ನಮ್ಮವರೇ ನಮ್ಮನ್ನು ಬೈದರೆ ಸಹಿಸಿಕೊಳ್ಳುವುದು ಕಷ್ಟಕಷ್ಟ -ವಾಜಪೇಯಿ
ನಮ್ಮವರೇ
ನಮ್ಮನ್ನು
ಬೈದರೆ
ಸಹಿಸಿಕೊಳ್ಳುವುದು
ಕಷ್ಟಕಷ್ಟ
-ವಾಜಪೇಯಿ
‘ಪಾಂಚಜನ್ಯ’ದಲ್ಲಿ
ಪ್ರಧಾನಿ
ಅಟಲ್
ವಿಶೇಷ
ಸಂದರ್ಶನ
ಆತ್ಮವಿಶ್ವಾಸವೇ ನಮ್ಮ ಅತಿ ದೊಡ್ಡ ಆಸ್ತಿ. ಅದೇ ಕಡಿಮೆಯಾದರೆ ? ಎಂದು ಆರ್ಎಸ್ಎಸ್ ಮುಖವಾಣಿ ‘ಪಾಂಚಜನ್ಯ’ ಕ್ಕೆ ನೀಡಿದ ಸಂದರ್ಶನದಲ್ಲಿ ವಾಜಪೇಯಿ ಉದ್ಘರಿಸಿದ್ದಾರೆ.
ಪ್ರಬಲವಾದ ವಿರೋಧಾಭಾಸಗಳು ಇರಬಹುದು. ಆದರೂ ನಾವು ಒಬ್ಬರು ಇನ್ನೊಬ್ಬರ ಧ್ಯೇಯಗಳನ್ನು ಸಂಶಯದಿಂದ ನೋಡಬಾರದು. ನಾವೆಲ್ಲ ಸಂಘ ಪರಿವಾರದ ಚಿಂತನೆಯವರು. ಆ ಚಿಂತನೆಯಲ್ಲಿ ಮುಂದುವರಿಯುತ್ತಿದ್ದೇವೆ. ಅದು ದೇಶದ ಅಭಿವೃದ್ಧಿಗಾಗಿ. ಈ ನಡುವೆ ಪರಸ್ಪರ ಆಪಾದಿಸುವುದರಲ್ಲಿ ಅರ್ಥವಿಲ್ಲ ಎಂದು ವಾಜಪೇಯಿ ಹೇಳಿದ್ದಾರೆ. ಸಂಘ ಪರಿವಾರದ ಯಾವುದಾದರು ಹೇಳಿಕೆಯಿಂದ ಬೇಸರಗೊಂಡಿದ್ದೀರ ಎಂಬ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ನಿಮ್ಮ ಮುಂದಿನ ಉತ್ತರಾಧಿಕಾರಿಯನ್ನಾಗಿ ಯಾರನ್ನು ನೇಮಿಸುತ್ತೀರಿ ಎಂಬ ಪ್ರಶ್ನ್ನೆಗೆ- ರಾಜಕಾರಣದಲ್ಲಿ ಯಾರೂ ಅವರ ಉತ್ತರಾಧಿಕಾರಿಗಳನ್ನ ನಿರ್ಧರಿಸುವುದಿಲ್ಲ. ನಾನು ನನ್ನ ಉತ್ತರಾಧಿಕಾರಿಯನ್ನು ನಿರ್ಧರಿಸುವ ಪ್ರಶ್ನೆಯೇ ಇಲ್ಲ . ಪಕ್ಷ ಇದನ್ನು ನಿರ್ಧರಿಸುತ್ತದೆ. ನಾನು ಹೇಗೆ ನಿರ್ಧರಿಸಲು ಸಾಧ್ಯ ಎಂದು ವಾಜಪೇಯಿ ಹೇಳಿದ್ದಾರೆ.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004