Get Updates
Get notified of breaking news, exclusive insights, and must-see stories!

ನಮ್ಮವರೇ ನಮ್ಮನ್ನು ಬೈದರೆ ಸಹಿಸಿಕೊಳ್ಳುವುದು ಕಷ್ಟಕಷ್ಟ -ವಾಜಪೇಯಿ

ನಮ್ಮವರೇ ನಮ್ಮನ್ನು ಬೈದರೆ ಸಹಿಸಿಕೊಳ್ಳುವುದು ಕಷ್ಟಕಷ್ಟ -ವಾಜಪೇಯಿ
‘ಪಾಂಚಜನ್ಯ’ದಲ್ಲಿ ಪ್ರಧಾನಿ ಅಟಲ್‌ ವಿಶೇಷ ಸಂದರ್ಶನ

ನವದೆಹಲಿ : ಏಕರೂಪದ ತತ್ವ-ಸಿದ್ದಾಂತವನ್ನು ಹೊಂದಿದ ಸಂಘಟನೆಗಳು ನಮ್ಮ ವಿರುದ್ಧ ಟೀಕೆ ಮಾಡುವಾಗ ಅನ್ಯಾಯವೆಸಗಿದಂತಾಗುತ್ತದೆ ಎಂದು ಸಂಘಪರಿವಾರದ ಹೆಸರು ಉಲ್ಲೇಖಿಸದೆ ಪ್ರಧಾನಿ ವಾಜಪೇಯಿ ಹೇಳಿದ್ದಾರೆ.

ಆತ್ಮವಿಶ್ವಾಸವೇ ನಮ್ಮ ಅತಿ ದೊಡ್ಡ ಆಸ್ತಿ. ಅದೇ ಕಡಿಮೆಯಾದರೆ ? ಎಂದು ಆರ್‌ಎಸ್‌ಎಸ್‌ ಮುಖವಾಣಿ ‘ಪಾಂಚಜನ್ಯ’ ಕ್ಕೆ ನೀಡಿದ ಸಂದರ್ಶನದಲ್ಲಿ ವಾಜಪೇಯಿ ಉದ್ಘರಿಸಿದ್ದಾರೆ.

ಪ್ರಬಲವಾದ ವಿರೋಧಾಭಾಸಗಳು ಇರಬಹುದು. ಆದರೂ ನಾವು ಒಬ್ಬರು ಇನ್ನೊಬ್ಬರ ಧ್ಯೇಯಗಳನ್ನು ಸಂಶಯದಿಂದ ನೋಡಬಾರದು. ನಾವೆಲ್ಲ ಸಂಘ ಪರಿವಾರದ ಚಿಂತನೆಯವರು. ಆ ಚಿಂತನೆಯಲ್ಲಿ ಮುಂದುವರಿಯುತ್ತಿದ್ದೇವೆ. ಅದು ದೇಶದ ಅಭಿವೃದ್ಧಿಗಾಗಿ. ಈ ನಡುವೆ ಪರಸ್ಪರ ಆಪಾದಿಸುವುದರಲ್ಲಿ ಅರ್ಥವಿಲ್ಲ ಎಂದು ವಾಜಪೇಯಿ ಹೇಳಿದ್ದಾರೆ. ಸಂಘ ಪರಿವಾರದ ಯಾವುದಾದರು ಹೇಳಿಕೆಯಿಂದ ಬೇಸರಗೊಂಡಿದ್ದೀರ ಎಂಬ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ನಿಮ್ಮ ಮುಂದಿನ ಉತ್ತರಾಧಿಕಾರಿಯನ್ನಾಗಿ ಯಾರನ್ನು ನೇಮಿಸುತ್ತೀರಿ ಎಂಬ ಪ್ರಶ್ನ್ನೆಗೆ- ರಾಜಕಾರಣದಲ್ಲಿ ಯಾರೂ ಅವರ ಉತ್ತರಾಧಿಕಾರಿಗಳನ್ನ ನಿರ್ಧರಿಸುವುದಿಲ್ಲ. ನಾನು ನನ್ನ ಉತ್ತರಾಧಿಕಾರಿಯನ್ನು ನಿರ್ಧರಿಸುವ ಪ್ರಶ್ನೆಯೇ ಇಲ್ಲ . ಪಕ್ಷ ಇದನ್ನು ನಿರ್ಧರಿಸುತ್ತದೆ. ನಾನು ಹೇಗೆ ನಿರ್ಧರಿಸಲು ಸಾಧ್ಯ ಎಂದು ವಾಜಪೇಯಿ ಹೇಳಿದ್ದಾರೆ.

(ಪಿಟಿಐ)

ಮುಖಪುಟ / ಕುರುಕ್ಷೇತ್ರ-2004

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+