Get Updates
Get notified of breaking news, exclusive insights, and must-see stories!

ಹಾಸನ ಹೊರವಲಯದಿ ಪೆಟ್ರೋಲ್‌ ಬಂಕ್‌ ಲೂಟಿ, ಐವರ ಕಗ್ಗೊಲೆ

ಹಾಸನ ಹೊರವಲಯದಿ ಪೆಟ್ರೋಲ್‌ ಬಂಕ್‌ ಲೂಟಿ, ಐವರ ಕಗ್ಗೊಲೆ
60 ಸಾವಿರ ರುಪಾಯಿ ಲೂಟಿ, ಗಾಯಾಳುಗಳು ಜಿಲ್ಲಾ ಆಸ್ಪತ್ರೆಗೆ ದಾಖಲು

ಹಾಸನ : ನಗರದ ಹೊರವಲಯದ ರಾಜಘಟ್ಟದ ಬಳಿಯ ಪೆಟ್ರೋಲ್‌ ಬಂಕ್‌ಗೆ ನುಗ್ಗಿರುವ ಡಕಾಯಿತರ ಗುಂಪು, ಐವರನ್ನು ಕೊಂದು 60 ಸಾವಿರ ರುಪಾಯಿಗಳನ್ನು ಅಪಹರಿಸಿದೆ.

ಬೆಂಗಳೂರು-ಮಂಗಳೂರು ಹೆದ್ದಾರಿಯ ಬೈಪಾಸ್‌ ರಸ್ತೆಯಲ್ಲಿನ ಕೌಶಿಕ್‌ ಎಂಟರ್‌ಪ್ರೆೃಸಸ್‌ ಎನ್ನುವ ಪೆಟ್ರೋಲ್‌ಬಂಕ್‌ಗೆ ನುಗ್ಗಿರುವ ಡಕಾಯಿತರ ಗುಂಪು ಈ ದುಷ್ಕೃತ್ಯ ನಡೆಸಿದೆ. ಡಕಾಯಿತರ ಗುಂಪಿನಲ್ಲಿ ಐದು ಮಂದಿ ಇದ್ದರೆಂದು ಪ್ರಾಥಮಿಕ ತನಿಖೆಯ ನಂತರ ಪೊಲೀಸರು ತಿಳಿಸಿದ್ದಾರೆ. ಏ.10, ಶನಿವಾರ ರಾತ್ರಿ 2.30ರ ಸುಮಾರಿಗೆ ಈ ದುಷ್ಕೃತ್ಯ ಸಂಭವಿಸಿದೆ.

ಪೆಟ್ರೋಲ್‌ ಬಂಕ್‌ನ ಮುಂಭಾಗದಲ್ಲಿ ಮಲಗಿದ್ದ ನಂದಕುಮಾರ್‌ (45), ನಟರಾಜ್‌ ಶಾಸ್ತ (35) ಎಂಬುವರನ್ನು ಡಕಾಯಿತರು ಕೊಚ್ಚಿ ಕೊಂದಿದ್ದಾರೆ. ಅದೇ ಸಮಯಕ್ಕೆ ಪೆಟ್ರೋಲ್‌ಗಾಗಿ ಬಂದ ಎನ್‌.ಟಿ.ಕುಮಾರ್‌ (45) ಹಾಗೂ ಸತೀಶ್‌ಕುಮಾರ್‌ (40) ಎನ್ನುವವರೂ ಡಕಾಯಿತರಿಂದ ಇರಿತಕ್ಕೊಳಗಾಗಿದ್ದಾರೆ. ಆನಂತರದ ನತದೃಷ್ಟ - ಕಚೇರಿಯ ಒಳಗೆ ಮಲಗಿದ್ದ ಕಾವಲುಗಾರ ದಿನೇಶ್‌ (20).

ವ್ಯವಸ್ಥಾಪಕಕ ಪುಟ್ಟಣ್ಣ ಹಾಗೂ ಕೆಲಸಗಾರರಾದ ಮಂಜುನಾಥ, ಮಂಜುಶೆಟ್ಟಿ, ಕುಮಾರ್‌ ಎನ್ನುವವರ ಮೇಲೂ ಡಕಾಯಿತರು ಹಲ್ಲೆ ನಡೆಸಿದ್ದು , ಗಾಯಾಳುಗಳು ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+