ಬೆಂಗಳೂರಿನ ಇಂದಿರಾ ನಗರದಲ್ಲಿ ‘ಕನ್ನಡ ಸಮ್ಮೇಳನ’
ಬೆಂಗಳೂರಿನ ಇಂದಿರಾ ನಗರದಲ್ಲಿ 'ಕನ್ನಡ ಸಮ್ಮೇಳನ'
ಕರ್ನಾಟಕದಲ್ಲಿ ನೆಲೆಸಿದವರೆಲ್ಲರೂ ಕನ್ನಡಿಗರು ಎನ್ನುವ ಧ್ಯೇಯವಾಕ್ಯದಡಿ ಏ.11ರಂದು ಬೆಂಗಳೂರಿನಲ್ಲೊಂದು ಕನ್ನಡ ಸಮ್ಮೇಳನ ನಡೆಯಲಿದೆ. ಕನ್ನಡ ಪ್ರೀತಿಯ ಈ ಸಮ್ಮೇಳನಕ್ಕೆ ಕನ್ನಡಪ್ರಿಯರೆಲ್ಲರಿಗೂ ಸ್ವಾಗತ.
ಇಂದಿರಾನಗರದ 'ಭಾರತೀಯ ಕರ್ನಾಟಕ ಸಂಘ', ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ (ಈಕವಿ) ಸಹಯೋಗದೊಂದಿಗೆ ಏಪ್ರಿಲ್ 11ರ ಭಾನುವಾರ 'ಕನ್ನಡ ಸಮ್ಮೇಳನ'ವನ್ನು ಹಮ್ಮಿಕೊಂಡಿದೆ.
ಏ.11ರ ಬೆಳಿಗ್ಗೆ 10 ಗಂಟೆಗೆ ಇಂದಿರಾನಗರದ ಎನ್ ಡಿ ಕೆ ಕಲ್ಯಾಣ ಮಂಟಪದಲ್ಲಿ ಕರ್ನಾಟಕದಲ್ಲೆ ಪ್ರಪ್ರಥಮ ಎನ್ನಬಹುದಾದ 'ಕನ್ನಡ ಸಮ್ಮೇಳನ' ಪ್ರಾರಂಭವಾಗಲಿದೆ. ಆಂಗ್ಲಭಾಷೆ ಇಲ್ಲದೆ ಯಾವ ಕ್ಷೇತ್ರದಲ್ಲೂ ಮುಂದುವರೆಯಲು ಸಾಧ್ಯವಿಲ್ಲ ಎನ್ನುವ ಮನೋಭಾವದ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವುದು ಈ ಸಮ್ಮೇಳನದ ಉದ್ದೇಶ. ಸಚಿವೆ ರಾಣಿ ಸತೀಶ್ ಅಧ್ಯಕ್ಷತೆಯ ಸಮ್ಮೇಳನವನ್ನು ಪ್ರೊ. ಯು.ಆರ್.ರಾವ್ ಉದ್ಘಾಟಿಸುವರು.
ಬೇರೆ ಬೇರೆ ಕ್ಷೇತ್ರದಲ್ಲಿ ಕನ್ನಡವನ್ನು ಹೇಗೆ ಅಳವಡಿಸಬಹುದು ಎಂಬ ಚರ್ಚಾಗೋಷ್ಠಿಯಲ್ಲಿ , ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನದಲ್ಲಿದ್ದು ಕರ್ನಾಟಕದಾದ್ಯಂತ ಜನಪ್ರಿಯರಾಗಿರುವ ಸುಮಾರು 25 ಜನರು ಒಂದೇ ವೇದಿಕೆಯಲ್ಲಿ ಕುಳಿತು ಕನ್ನಡ ಭಾಷೆಯ ಅಳಿವು ಉಳಿವಿನ ಬಗ್ಗೆ ಚರ್ಚೆ ಮಾಡುವರು. ಈ ಸಮ್ಮೇಳನದಲ್ಲಿ 3 ಚರ್ಚಾಗೋಷ್ಠಿಗಳು ನಡೆಯುತ್ತವೆ.
ಗೋಷ್ಠಿ-1 : 'ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಬಳಕೆ'
ಈ ಗೋಷ್ಠಿಯಲ್ಲಿ- ಡಾ.ಎಲ್.ಎಮ್ ಪಾಟ್ನಾಯಕ್, ಶ್ರೀಮತಿ ಡಾ. ಸುಧಾ ರಾಜು, ಡಾ.ಘರೆ, ರಾಜೀವ್ ಚಾವ್ಲ, ಡಾ.ಜಿ ಎಲ್ ಗಂಗಾಪ್ರಸಾದ್, ಡಾ.ಜಿ ರಮೇಶ್, ಡಾ.ಪಿ ನಾರಾಯಣ್ ರೆಡ್ಡಿ ಮತ್ತು ಶ್ರೀನಾಥ್ ಶಾಸ್ತ್ರಿ ವಿಷಯ ಮಂಡಿಸಿ ಚರ್ಚೆಯಲ್ಲಿ ಭಾಗವಹಿಸುವರು.
ಗೋಷ್ಠಿ-2 : 'ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಬಳಕೆ'
ಎರಡನೇ ಗೋಷ್ಠಿಯ ಚರ್ಚೆಯಲ್ಲಿ ಬಿ.ಜಿ ರುದ್ರಪ್ಪ , ಸಿ.ಜಿ. ಕೃಷ್ಣದಾಸ್ ನಾಯರ್, ಡಾ.ದೇಶಪಾಂಡೆ, ಡಾ.ಶ್ರೀಧರನ್, ಡಾ.ಶರಚ್ಚಂದ್ರ, ಡಾ.ಎಸ್.ಕೆ.ಸಿನ್ಹ , ಡಾ.ಕೆ.ಟಿ. ಮಾಧವನ್ ಹಾಗೂ ಹಾಲ್ದೊಡ್ಡೇರಿ ಸುಧೀಂದ್ರ ಭಾಗವಹಿಸುವರು.
ಗೋಷ್ಠಿ-3 : 'ಸಾರ್ವಜನಿಕ ಪ್ರದೇಶಗಳಲ್ಲಿ ಕನ್ನಡದ ಬಳಕೆ'
ಗೋಷ್ಠಿಯಲ್ಲಿ- ಚಿರಂಜೀವಿ ಸಿಂಗ್, ಸುಬೀರ್ ಹರಿಸಿಂಗ್, ಡಾ.ಈ.ವಿ. ರಮಣ ರೆಡ್ಡಿ, ಆರ್.ಸಿ. ಪುರೋಹಿತ್, ಅರ್ಜುನ್ ದೇವ್, ಡಾ.ಪಿ. ಗೋಸ್ವಾಮಿ, ಜಿ. ಪರಮೇಶ್ವರಪ್ಪ, ಮತ್ತು ಟಿ.ಆರ್. ಕೃಷ್ಣೇಗೌಡ ಭಾಗವಹಿಸುವರು.
ಈ ಚರ್ಚಾಗೋಷ್ಠಿಯ ಮತ್ತೊಂದು ವೈಶಿಷ್ಟ್ಯವೆಂದರೆ ಈ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿರುವ ಅನೇಕ ಗಣ್ಯವ್ಯಕ್ತಿಗಳ ಮಾತೃಭಾಷೆ ಕನ್ನಡ ಅಲ್ಲ. ಇವರೆಲ್ಲರೂ ಬಹಳ ವರ್ಷಗಳಿಂದ ಕರ್ನಾಟಕದಲ್ಲೆ ನೆಲಸಿ ಕನ್ನಡಿಗರಾಗಿರುವಂಥವರು.
ಪ್ರತೀ ಚರ್ಚಾಗೋಷ್ಠಿಗೂ 1 ಗಂಟೆಯ ಕಾಲಾವಕಾಶ ಇರುತ್ತದೆ. ಗೋಷ್ಠಿಗಳ ನಡುವೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕನ್ನಡ ಸಮ್ಮೇಳನದ ಕೊನೆಯಲ್ಲಿ ಬೆಂಗಳೂರಿನ ಸುಪ್ರಸಿದ್ಧ ಪ್ರಭಾತ್ ಕಲಾವಿದರು ನಡೆಸಿಕೊಡುವ 'ಕರ್ನಾಟಕದ ವೈಭವ' ಎಂಬ ನೃತ್ಯರೂಪಕ ಇದೆ.
ಕಾರ್ಯಕ್ರಮಕ್ಕೆ ಭಾಗವಹಿಸಲು 100 ರೂಪಾಯಿಗಳ ಪ್ರವೇಶ ಶುಲ್ಕವಿದೆ. ಟಿಕೆಟ್ ದೊರೆಯುವ ಸ್ಥಳ : ಅಂಕಿತ ಪುಸ್ತಕ, ಗಾಂಧಿಬಜಾರ್. ಫೋನ್- (080) 26617100.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ಕೆ.ಟಿ. ಸತೀಶ್- [email protected]. ದೂರವಾಣಿ ಸಂಖ್ಯೆ- 9886128500.
-
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Kannada Vs Hindi: ಭಾಷಾ ಶಿಕ್ಷಣ–ಸಮಸ್ಯೆ ಇರುವುದು ಫೈನ್ ಟ್ಯೂನಿಂಗ್ನಲ್ಲಿ: ರಾಜಾರಾಂ ತಲ್ಲೂರು ಬರಹ -
Vasudhendra: ಬರಹಗಾರ ವಸುಧೇಂದ್ರಗೆ ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಎಂದ ನೆಟ್ಟಿಗರು -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ











Click it and Unblock the Notifications