‘ಮಲ್ಲಿಗೆ’ ಮಳೆಯ ನಡುವೆ ಕಣ್ಣಿಗೆ‘ಹಬ್ಬ’ವಾದ ‘ಬೆಂಗಳೂರು ಕರಗ’
‘ಮಲ್ಲಿಗೆ’ ಮಳೆಯ ನಡುವೆ ಕಣ್ಣಿಗೆ‘ಹಬ್ಬ’ವಾದ ‘ಬೆಂಗಳೂರು ಕರಗ’
ಮುಖ್ಯಮಂತ್ರಿ ಕೃಷ್ಣ ಹಾಗೂ ಅವರ ಚುನಾವಣಾ ಎದುರಾಳಿ ಅನಂತ್ನಾಗ್ರಿಂದ ಕರಗಕ್ಕೆ ಪೂಜೆ
ಹಲಸೂರುಪೇಟೆಯ ಧರ್ಮರಾಯ ಸ್ವಾಮಿಯ ದೇಗುಲದಲ್ಲಿ ಪೂಜೆ ಸಲ್ಲಿಸಿದ ನಂತರ ಊರು ಪ್ರದಕ್ಷಿಣೆಗೆ ಹೊರಟ ಕರಗವನ್ನು ಸಾವಿರಾರು ಜನರು ಸಂಭ್ರಮದಿಂದ ಸ್ವಾಗತಿಸಿದರು. ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಜ್ಯದ ಇತರ ಪ್ರದೇಶಗಳಿಂದಲೂ ಕರಗ ವೀಕ್ಷಣೆಗೆ ಅನೇಕ ಭಕ್ತರು ಆಗಮಿಸಿದ್ದರು. ಕರಗಕ್ಕೆ ಪೂಜೆ ಸಲ್ಲಿಸಿದ ಪ್ರಮುಖರಲ್ಲಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ , ನಟ ಅನಂತನಾಗ್ ಹಾಗೂ ಮೇಯರ್ ರಮೇಶ್ ಸೇರಿದ್ದಾರೆ.
ಶಕ್ತಿದೇವತೆಯ ಸಂಕೇತವಾದ ಹೂವಿನ ಕರಗವನ್ನು ವೀರಕುಮಾರ ಅಭಿಮನ್ಯು ಈ ಬಾರಿಯೂ ಹೊತ್ತಿದ್ದರು. ಆಯುಧಧಾರಿಗಳಾದ 1500 ವೀರಕುಮಾರರ ಬೆಂಗಾವಲಿನಲ್ಲಿ ಕರಗ ಸಂಚರಿಸಿತು. ಹಲಸೂರುಪೇಟೆ, ತಿಗಳರಪೇಟೆ, ಗೊಲ್ಲರಪೇಟೆ, ನಗರ್ತಪೇಟೆ, ಕುಂಬಾರಪೇಟೆ, ದೇವಾಂಗಪೇಟೆ, ಅಕ್ಕಿಪೇಟೆ, ಅವೆನ್ಯೂ ರಸ್ತೆಗಳಲ್ಲಿ ಸಂಚರಿಸಿದ ಕರಗ- ಮಸ್ತಾನ್ ಪೇಟೆ ದರ್ಗಾದ ಪ್ರದಕ್ಷಿಣೆಯ ನಂತರ ಧರ್ಮರಾಯ ಸ್ವಾಮಿ ದೇವಸ್ಥಾನವನ್ನು ಸೇರಿತು.
ಮಲ್ಲಿಗೆ ದಂಡೆಗಳಿಂದ ಅಲಂಕೃತಗೊಂಡಿದ್ದ ಕರಗ ಮನೋಹರವಾಗಿತ್ತು . ಕರಗ ಸಂಚರಿಸುವ ಹಾದಿಯುದ್ದಕ್ಕೂ ಭಕ್ತರು ಮಲ್ಲಿಗೆ ಚೆಲ್ಲುವ ದೃಶ್ಯಗಳು ಸಾಮಾನ್ಯವಾಗಿದ್ದವು. ಹಾದಿಮಧ್ಯದಲ್ಲಿ ಕೆಲವೆಡೆ ಪಾನಕ ಕೋಸಂಬರಿ ಉಪಚಾರವೂ ಇತ್ತು .
ಕರಗದ ರಾತ್ರಿ ಬೆಂಗಳೂರಿನಲ್ಲಿ ಮಲ್ಲಿಗೆ ಮೊಗ್ಗು ಚೆಲ್ಲಿದಂತೆ ತುಂತುರು ್ಫಹನಿ ಬಿದ್ದುದು ಇನ್ನೊಂದು ವಿಶೇಷ.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications