ಅಖಾಡಕ್ಕಿಳಿದ ಹೆಂಡದ ದೊರೆಗಳು, ಪಾರ್ಟಿ ಫಂಡಿಗೆ ಗ್ರಹಣ!
ಅಖಾಡಕ್ಕಿಳಿದ ಹೆಂಡದ ದೊರೆಗಳು, ಪಾರ್ಟಿ ಫಂಡಿಗೆ ಗ್ರಹಣ!
ಮಲ್ಯ ಜನತಾಪಕ್ಷದಲ್ಲಿ ವಿರಾಜಮಾನ, ಹರಿಖೋಡೆ ಅರಸು ಪಕ್ಷದ ಯಜಮಾನ, ಹೀಗಿರುವಾಗ ಬಡಪಾಯಿ ರಾಜಕಾರಣಿಗಳದು ಯಾತರ ಧ್ಯಾನ ?
- ದಟ್ಸ್ಕನ್ನಡ ಬ್ಯೂರೊ
ಹೆಂಡದ ದೊರೆಗಳು ರಾಜಕೀಯವನ್ನು ನಿಯಂತ್ರಿಸುತ್ತಾರೆ ಎನ್ನುವ ಮಾತು ಪದೇಪದೇ ಬಳಕೆಯಾಗುವುದುಂಟು. ಏಕೆಂದರೆ, ಇವರು ನೀಡುವ ಪಾರ್ಟಿ ಫಂಡಿನಿಂದಲೇ ಚುನಾವಣೆಗಳು ರಂಗೇರುತ್ತವೆ. ರಾಜಕಾರಣಿಗಳು ಹೆಂಡದ ದೊರೆಗಳ ಋಣದಲ್ಲಿರುತ್ತಾರೆ. ಚುನಾವಣೆ ಮುಗಿದ ನಂತರದ ಐದು ವರ್ಷಗಳಲ್ಲಿ ಋಣ ಸಂದಾಯದ ಕೆಲಸ.
ಆದರೆ, ಈ ಬಾರಿ ಗಾಳಿ ಬೀಸುವ ದಿಕ್ಕು ತುಸು ಬದಲಾದಂತಿದೆ. ನಮ್ಮಪ್ಪನ ದುಡ್ಡಲ್ಲಿ ಅವರಪ್ಪನ ಜಾತ್ರೆ ಯಾಕೆ ಎನ್ನುವಂತೆ, ಮದ್ಯೋದ್ಯಮಿಗಳೇ ರಾಜಕೀಯದ ಅಖಾಡಕ್ಕೆ ನೇರ ಇಳಿದಿರುವ ಬೆಳವಣಿಗೆ ರಾಜ್ಯ ರಾಜಕಾರಣದ ರಂಗುಗಳನ್ನೇ ಬದಲಿಸಿದೆ. ಒಂದೆಡೆ ಅಂತರರಾಷ್ಟ್ರೀಯ ಖ್ಯಾತಿಯ ಮದ್ಯೋದ್ಯಮಿ ವಿಜಯ್ ಮಲ್ಯ ನೇಗಿಲು ಹೊತ್ತ ರೈತನ ಜನತಾಪಕ್ಷವನ್ನು ಗುತ್ತಿಗೆ ತೆಗೆದುಕೊಂಡಿದ್ದಾರೆ. ತಾನೇನು ಕಡಿಮೆ ಎನ್ನುವಂತೆ ಖೋಡೆ ಬಳಗ ದೇವರಾಜ ಅರಸು ಹೆಸರಲ್ಲಿ ಹೊಸ ಪಕ್ಷವನ್ನೇ ಕಟ್ಟಿದ್ದಾರೆ. ಮದ್ಯದ ದೊರೆಗಳೇ ಚುನಾವಣಾ ಅಖಾಡದಲ್ಲಿ ತಮ್ಮ ಕುದುರೆಗಳನ್ನು ನೇರವಾಗಿ ಓಡಿಸುತ್ತಿರುವಾಗ, ಪಾಪ, ರಾಜಕಾರಣಿಗಳಿಗೆ ದುಡ್ಡಾದರೂ ಎಲ್ಲಿಂದ ಬರಬೇಕು ?
ಈ ಹಿಂದೆ ‘ಯುಬಿ ಸಮೂಹ’ದ ಮಾಲಕ ಮಲ್ಯ ಅಲ್ಲಿ-ಇಲ್ಲಿ ರಾಜಕೀಯದವರೊಡನೆ ಗುರುತಿಸಿಕೊಂಡಿದ್ದರು. ಹೆಗಡೆ ಸಖ್ಯಹೊಂದಿದ್ದ ಮಲ್ಯ ಮುಖ್ಯಮಂತ್ರಿ ಕೃಷ್ಣ ಕೃಪೆಯಿಂದ ಬಿಜೆಪಿಯ ತಾರಾದೇವಿಯನ್ನು ಹೊರತಳ್ಳಿ ರಾಜ್ಯಸಭೆ ಪ್ರವೇಶಿಸಿದರು. ನಂತರದ ಬೆಳವಣಿಗೆಯಲ್ಲಿ ರಾತ್ರಿ ಬೆಳಗಾದಾಗ ಜನತಾದಳ ಸಂಯುಕ್ತದ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಬಿಟ್ಟರು. ಬಿರುಕೊಡೆದ ದಳದಲ್ಲಿ ನಿಲ್ಲಲಾರದೆ ಸುಬ್ರಹ್ಮಣ್ಯ ಸ್ವಾಮಿ ನಾಯಕತ್ವದ ಜನತಾ ಪಕ್ಷಕ್ಕೆ ಸೇರಿಕೊಂಡರು. ಇದು ರಾಜ್ಯ ರಾಜಕಾರಣದ ಮೇಲೆ ಪ್ರಭಾವ ಬೀರದಿದ್ದರೂ, ರಾಜ್ಯ ಚುನಾವಣಾ ಅರ್ಥಶಾಸ್ತ್ರದ ಮೇಲೆ ಪ್ರಭಾವ ಬೀರಿದೆ. ಇದರಿಂದ ಹಲವು ರಾಜ್ಯ ನಾಯಕರಿಗೆ ಚುನಾವಣಾ ಫಂಡ್ ಹೊಂದಿಸುವುದು ಕಷ್ಟವಾಗಿದೆ.
‘ಜನತಾ ಪರಿವಾರ’ದ ಪ್ರಮುಖ ಫಂಡ್ದಾರನಾಗಿದ್ದ ಇನ್ನೊಬ್ಬ ಹೆಂಡದದೊರೆ ಹರಿಖೋಡೆ ‘ದೇವರಾಜು ಅರಸು ಸಂಯುಕ್ತ ಪಕ್ಷ’ ಸ್ಥಾಪಿಸಿದ್ದಾರೆ. 80ರ ದಶಕದಲ್ಲಿ ‘ಜನತಾ ದಳದ’ ಏಳಿಗೆಗೆ ಮೂಲಗಳನ್ನು ಒದಗಿಸಿದವರು ಈ ಹರಿಖೋಡೆ. ಈಗ ದಳ-ದಳ ಗಳಾದ ಜನತಾ ಪರಿವಾರ ಬಡವಾಗಿದೆ. ಆ ಕಾರಣದಿಂದಲೂ ಕೆಲವು ನಾಯಕರು ಬೇರೆ ಪಕ್ಷದತ್ತ ಕಾಲು ಹಾಕುತ್ತಿದ್ದಾರೆ ಎಂಬ ವದಂತಿಯಿದೆ. ಆದರೆ ‘ಜೆಡಿಯು’ ಮಾತ್ರ ಖೋಡೆಯ ‘ಅರಸು ಪಕ್ಷ’ದ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ.
ಇನ್ನೊಂದೆಡೆ ಬಿಜೆಪಿಗೆ ಪ್ರಮುಖ ಫಂಡ್ದಾರನಾಗಿದ್ದ ಟ್ರಾವೆಲ್ಸ್ ದೊರೆ ವಿಜಯ ಸಂಕೇಶ್ವರ ‘ಕನ್ನಡ ನಾಡು ಪಕ್ಷ ’ ಸ್ಥಾಪಿಸಿದ್ದಾರೆ. ಇದು ಆರ್ಥಿಕವಾಗಿ ಬಿಜೆಪಿಗೆ ಕರ್ನಾಟಕದಲ್ಲಿ ಬಿದ್ದ ಹೊಡೆತ. ಅಲ್ಲವೆನ್ನುವಿರಾ ಅನಂತಕುಮಾರ್?
ಅಂದಹಾಗೆ, ರಾಜಕೀಯ ಪಕ್ಷಗಳಿಗೆ ಈಗ ಉಳಿದಿರುವುದಾದರೂ ಏನು ? ಬೇರೆ ಪಕ್ಷಗಳ ಮಾತು ಗೊತ್ತಿಲ್ಲ - ಮುಖ್ಯಮಂತ್ರಿ ಕೃಷ್ಣ ರಿಗೆ ಮಾತ್ರ ದಾರಿಗಳು ಹೊಳೆದಿವೆಯಂತೆ ; ಐಟಿ ಕಂಪನಿಗಳಿಗೆ ಪರವಾನಗಿ, ಆಧುನೀಕರಣ, ಫ್ಲೈಓವರ್ಗಳ ಗುತ್ತಿಗೆ..... ಒಂದೇ ಎರಡೇ, ಕೈ ಇಟ್ಟಲ್ಲೆಲ್ಲ ಕೊಪ್ಪರಿಗೆ !
ಮುಖಪುಟ / ವಾಟ್ಸ್ ಹಾಟ್
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications