ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಗಿ ಮನೆ ಬಾಗಿಲಿಗೆ ಶೃಂಗೇರಿ ಶಾರದಾ ಪೀಠದ ಧರ್ಮಾಸ್ಪತ್ರೆ

By Staff
|
Google Oneindia Kannada News

ರೋಗಿ ಮನೆ ಬಾಗಿಲಿಗೆ ಶೃಂಗೇರಿ ಶಾರದಾ ಪೀಠದ ಧರ್ಮಾಸ್ಪತ್ರೆ
ಅಭಿನವ ವಿದ್ಯಾತೀರ್ಥರ ಪೀಠಾರೋಹಣ ಬೆಳ್ಳಿಹಬ್ಬ ಸ್ಮರಣಾರ್ಥ ವೈದ್ಯಕೀಯ ಪ್ರತಿಷ್ಠಾನ

ಶೃಂಗೇರಿ : ಇಲ್ಲಿನ ಶಾರದ ಧನ್ವಂತರಿ ಧರ್ಮಾಸ್ಪತ್ರೆಯ ಬೆಳ್ಳಿಹಬ್ಬದ ಕಾರ್ಯಕ್ರಮ ಫೆ.15ರ ಭಾನುವಾರ ನಡೆಯಿತು. ಇದೇ ಸಂದರ್ಭದಲ್ಲಿ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳ ಪೀಠಾರೋಹಣದ ಬೆಳ್ಳಿಹಬ್ಬ ಸ್ಮರಣಾರ್ಥ ವೈದ್ಯಕೀಯ ಪ್ರತಿಷ್ಠಾನ ಆರಂಭಗೊಂಡಿತು.

ಶಾರದಾಪೀಠದ ಶ್ರೀ ಭಾರತಿ ತೀರ್ಥ ಸ್ವಾಮೀಜಿಗಳು ಭಾನುವಾರ ಸಂಜೆ ವೈದ್ಯಕೀಯ ಪ್ರತಿಷ್ಠಾನ ಹಾಗೂ ಧರ್ಮಾಸ್ಪತ್ರೆಯ ಬೆಳ್ಳಿಹಬ್ಬದ ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಿದರು.

ದೇಶದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲೊಂದಾದ ಶೃಂಗೇರಿ ಶಾರದಪೀಠ, ಮಲೆನಾಡಿನ ಪರಿಸರದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಂಡಿದೆ. ಈ ಪ್ರದೇಶದಲ್ಲಿನ ಜನರು ವೈದ್ಯಕೀಯ ಸೌಲಭ್ಯಗಳ ಕೊರತೆ ಎದುರಿಸುತ್ತಿರುವುದನ್ನು ಮನಗಂಡ ಪೀಠದ 35ನೇ ಗುರುಗಳಾದ ಶ್ರೀ ಜಗದ್ಗುರು ಅಭಿನವ ವಿದ್ಯಾತೀರ್ಥ ಸ್ವಾಮೀಜಿಗಳು 1979ರಲ್ಲಿ ಧರ್ಮಾಸ್ಪತ್ರೆ ಪ್ರಾರಂಭಿಸಿದ್ದರು. ಸಣ್ಣ ದವಾಖಾನೆಯಾಗಿ ಪ್ರಾರಂಭಗೊಂಡ ಈ ಧರ್ಮಾಸ್ಪತ್ರೆ ಪ್ರಸ್ತುತ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ.

ದಿನದ ಇಪ್ಪತ್ತನಾಲ್ಕು ತಾಸೂ ಚಿಕಿತ್ಸೆಯ ಸೌಲಭ್ಯ ದೊರೆಯುವ ಧರ್ಮಾಸ್ಪತ್ರೆಯಲ್ಲಿ , ಅತ್ಯುತ್ತಮ ಆಹಾರವನ್ನು ರೋಗಿಗಳಿಗೆ ಒದಗಿಸಲಾಗುತ್ತದೆ. ಚಿಕಿತ್ಸೆ ಹಾಗೂ ಆಹಾರ ಸಂಪೂರ್ಣ ಉಚಿತ. ಈ ಆಸ್ಪತ್ರೆಯ ಘಟಕಗಳನ್ನು ವಿವಿಧ ಪ್ರದೇಶಗಳಲ್ಲಿ ಸ್ಥಾಪಿಸಲಾಗಿದ್ದು , ಇವುಗಳು ನಿಯಮಿತವಾಗಿ ವಿಶೇಷ ಕ್ಯಾಂಪ್‌ಗಳನ್ನು ನಡೆಸುತ್ತಿವೆ. ಇದರಿಂದಾಗಿ ಆಸ್ಪತ್ರೆಗೆ ಬರಲಾಗದ ರೋಗಿಗಳು ಕೂಡ ವೈದ್ಯಕೀಯ ಚಿಕಿತ್ಸೆ ಹೊಂದುವುದು ಸಾಧ್ಯವಾಗಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X