ಸಿದ್ಧಗಂಗೆ ಮಾಜಿ ಸ್ವಾಮಿಗೆ 10 ವರ್ಷ ಕಠಿಣ ಸಜೆ, 25ಲಕ್ಷ ದಂಡ
ಸಿದ್ಧಗಂಗೆ
ಮಾಜಿ
ಸ್ವಾಮಿಗೆ
10
ವರ್ಷ
ಕಠಿಣ
ಸಜೆ,
25ಲಕ್ಷ
ದಂಡ
ಗೌರಿಶಂಕರರ
ಮೇಲಿನ
ಸಲಿಂಗ
ರತಿ
ಆರೋಪ
ಸಾಬೀತು
ನ್ಯಾಯಮೂರ್ತಿ ಎಂ.ಎಫ್.ಸಲ್ಡಾನ ಮತ್ತು ನ್ಯಾಯಮೂರ್ತಿ ಕೆ.ರಾಮಣ್ಣ ಅವರನ್ನೊಳಗೊಂಡ ನ್ಯಾಯಪೀಠ, ಗೌರೀಶಂಕರ ಸ್ವಾಮಿಗೆ 10 ವರ್ಷಗಳ ಕಠಿಣ ಶಿಕ್ಷೆ ಹಾಗೂ 25 ಲಕ್ಷ ರುಪಾಯಿಗಳ ದಂಡವನ್ನು ಮಂಗಳವಾರ ವಿಧಿಸಿತು. ಅಪರಾಧಿಯನ್ನು ತಕ್ಷಣವೇ ಬಂಧಿಸಿ ಜೈಲಿಗೆ ಕಳಿಸುವಂತೆ ನ್ಯಾಯಪೀಠ ಆದೇಶಿಸಿತು.
ತೀರ್ಪು ನೀಡುವ ಸಂದರ್ಭದಲ್ಲಿ ಗೌರಿಶಂಕರ ಸ್ವಾಮಿ ನ್ಯಾಯಪೀಠದ ಮುಂದೆ ಹಾಜರಿರಲಿಲ್ಲ . ಅನಾರೋಗ್ಯದ ಪ್ರಮಾಣಪತ್ರ ಕಳುಹಿಸಿದ್ದ ಸ್ವಾಮಿ- ಸುಪ್ರಿಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುವವರೆಗೆ ಶಿಕ್ಷೆಯನ್ನು ತಡೆಹಿಡಿಯಬೇಕೆಂದು ಕೋರಿದ್ದರು. ಪ್ರತಿಷ್ಠಿತ ವ್ಯಕ್ತಿಗಳು ಕಾನೂನಿನ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಬಹುದೆನ್ನುವ ಶಂಕೆಯ ಹಿನ್ನೆಲೆಯಲ್ಲಿ ಸ್ವಾಮಿಯ ಮನವಿಗಳನ್ನು ನ್ಯಾಯಪೀಠ ತಳ್ಳಿಹಾಕಿತು.
25 ಲಕ್ಷ ರುಪಾಯಿ ದಂಡ ವಸೂಲಿ ಮಾಡಿ, ಆ ಹಣವನ್ನು ಸ್ವಾಮಿಯಿಂದ ಲೈಂಗಿಕ ಶೋಷಣೆಗೆ ಒಳಗಾದ ದಿಲೀಪ್ಸಿಂಗ್ಗೆ ನೀಡಬೇಕು ಎಂದು ಆದೇಶಿಸಿರುವ ನ್ಯಾಯಪೀಠ- 25 ಲಕ್ಷ ರುಪಾಯಿ ದಂಡ ನೀಡಲು ತಪ್ಪಿದಲ್ಲಿ ಗೌರಿಶಂಕರ ಸ್ವಾಮಿಗೆ ಇನ್ನೂ ಒಂದು ವರ್ಷ ಕಠಿಣ ಸಜೆ ವಿಧಿಸಿದೆ.
ಸಿದ್ಧಗಂಗಾ ಮಠದಲ್ಲಿ ದ್ದ ದಿಲೀಪ್ ಸಿಂಗ್ ಎನ್ನುವ ವಿದ್ಯಾರ್ಥಿಯನ್ನು ಗೌರೀಶಂಕರ ಸ್ವಾಮಿ ಸಲಿಂಗ ರತಿಗೆ ಬಳಸಿಕೊಂಡಿದ್ದರು ಎನ್ನುವ ವಿವಾದ 1986ರಲ್ಲಿ ರಾಜ್ಯಾದ್ಯಂತ ಸುದ್ದಿಯಾಗಿತ್ತು . ಈ ಹಗರಣದ ಹಿನ್ನೆಲೆಯಲ್ಲಿ ಸ್ವಾಮಿಯನ್ನು ಸಿದ್ಧಗಂಗಾ ಮಠದಿಂದ ಉಚ್ಛಾಟಿಸಲಾಗಿತ್ತು .
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು