Get Updates
Get notified of breaking news, exclusive insights, and must-see stories!

ಅಡಿಕೆಯ ಹೋದ ಮಾನ ಮರಳಿ ತಂದುಕೊಡಲು ಕೆಸಿಡಿಸಿ ಸಂಕಲ್ಪ

ಅಡಿಕೆಯ ಹೋದ ಮಾನ ಮರಳಿ ತಂದುಕೊಡಲು ಕೆಸಿಡಿಸಿ ಸಂಕಲ್ಪ
ಬಂಜೆ ಗಿಡಗಳ ಜಾಗದಲ್ಲಿ ಅಧಿಕ ಇಳುವರಿಯ ಗಿಡಗಳ ನಾಟಿ

ಮಂಗಳೂರು : ಅಡಿಕೆ ಬೆಳೆಯ ಕಳೆದುಹೋದ ಮಾನವನ್ನು ಮರಳಿ ತಂದುಕೊಡಲು ನಿಶ್ಚಯಿಸಿರುವ ಕರ್ನಾಟಕ ಅಡಿಕೆ ಅಭಿವೃದ್ಧಿ ಮಂಡಳಿ (ಕೆಸಿಡಿಸಿ) - ಹೆಚ್ಚು ಇಳುವರಿ ನೀಡುವ ಅಡಿಕೆ ತಳಿಯನ್ನು ಪರಿಚಯಿಸಲು ಉದ್ದೇಶಿಸಿದೆ.

ರಾಜ್ಯದ 1 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಅಧಿಕ ಇಳುವರಿಯ ಸುಧಾರಿಸಿದ ಅಡಿಕೆ ಗಿಡಗಳನ್ನು 2004-05 ವಿತ್ತ ವರ್ಷದಲ್ಲಿ ನೆಡಲು ಕೆಸಿಡಿಸಿ ನಿರ್ಧರಿಸಿದೆ ಎಂದು ಮಂಡಳಿಯ ಅಧ್ಯಕ್ಷ ವಿ.ಕಲ್ಲಿಗೆ ತಾರಾನಾಥ್‌ ಶೆಟ್ಟಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬಂಜೆ ಗಿಡಗಳನ್ನು ಬದಲಿಸಿ, ಆ ಜಾಗದಲ್ಲಿ ಸುಧಾರಿಸಿದ ತಳಿಯ 2 ಲಕ್ಷ ಅಡಿಕೆ ಗಿಡಗಳನ್ನು ನೆಡಲು 1.8 ಕೋಟಿ ರುಪಾಯಿ ವೆಚ್ಚದಲ್ಲಿ ಕೆಸಿಡಿಸಿ ಯೋಜನೆ ರೂಪಿಸಿದೆ. ಈ ಯೋಜನೆ ಜೂನ್‌ ವೇಳೆಗೆ ಕೊನೆಗೊಳ್ಳುವುದು. ಮಂಡಳಿಯ ಬೆಳ್ಳಿಹಬ್ಬದ ಪ್ರಯುಕ್ತ - ಮುಂದಿನ 5 ವರ್ಷಗಳಲ್ಲಿ 5 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಗಿಡ ನಾಟಿ ಮಾಡಲು ಉದ್ದೇಶಿಸಲಾಗಿದೆ. ಈ ಯೋಜನೆಗೆ 10.5 ಕೋಟಿ ರುಪಾಯಿ ತಗುಲಲಿದೆ ಎಂದು ತಾರಾನಾಥ್‌ ಹೇಳಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಕೆಸಿಡಿಸಿ 2.77 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಕಳೆದ ವಿತ್ತ ವರ್ಷದಲ್ಲಿ ಈ ಪ್ರಮಾಣ 2.67 ಕೋಟಿ ರುಪಾಯಿಗಳಾಗಿತ್ತು ಎಂದು ಮಂಡಳಿಯ ಲೆಕ್ಕಪತ್ರದ ವಿವರ ನೀಡಿದ ತಾರಾನಾಥ್‌- ಕುಂದಾಪುರ ಬಳಿಯಿರುವ ಫೆನ್ನಿ ಕಾರ್ಖಾನೆಯನ್ನು ಮುಚ್ಚಲು ಕೆಸಿಡಿಸಿ ನಿರ್ಧರಿಸಿದೆ ಎಂದರು.

2002-03ನೇ ಸಾಲಿನಲ್ಲಿ ದೇಶ 1.27 ಲಕ್ಷ ಮೆಟ್ರಿಕ್‌ ಟನ್‌ ಅಡಿಕೆಯ (2006 ಕೋಟಿ ರು.ಮೌಲ್ಯದ) ವಿದೇಶಿ ವಿನಿಮಯ ಸಾಧಿಸಿದೆ ಎಂದು ತಾರಾನಾಥ್‌ ಶೆಟ್ಟಿ ತಿಳಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+