ಅಡಿಕೆಯ ಹೋದ ಮಾನ ಮರಳಿ ತಂದುಕೊಡಲು ಕೆಸಿಡಿಸಿ ಸಂಕಲ್ಪ
ಅಡಿಕೆಯ ಹೋದ ಮಾನ ಮರಳಿ ತಂದುಕೊಡಲು ಕೆಸಿಡಿಸಿ ಸಂಕಲ್ಪ
ಬಂಜೆ ಗಿಡಗಳ ಜಾಗದಲ್ಲಿ ಅಧಿಕ ಇಳುವರಿಯ ಗಿಡಗಳ ನಾಟಿ
ರಾಜ್ಯದ 1 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಧಿಕ ಇಳುವರಿಯ ಸುಧಾರಿಸಿದ ಅಡಿಕೆ ಗಿಡಗಳನ್ನು 2004-05 ವಿತ್ತ ವರ್ಷದಲ್ಲಿ ನೆಡಲು ಕೆಸಿಡಿಸಿ ನಿರ್ಧರಿಸಿದೆ ಎಂದು ಮಂಡಳಿಯ ಅಧ್ಯಕ್ಷ ವಿ.ಕಲ್ಲಿಗೆ ತಾರಾನಾಥ್ ಶೆಟ್ಟಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಂಜೆ ಗಿಡಗಳನ್ನು ಬದಲಿಸಿ, ಆ ಜಾಗದಲ್ಲಿ ಸುಧಾರಿಸಿದ ತಳಿಯ 2 ಲಕ್ಷ ಅಡಿಕೆ ಗಿಡಗಳನ್ನು ನೆಡಲು 1.8 ಕೋಟಿ ರುಪಾಯಿ ವೆಚ್ಚದಲ್ಲಿ ಕೆಸಿಡಿಸಿ ಯೋಜನೆ ರೂಪಿಸಿದೆ. ಈ ಯೋಜನೆ ಜೂನ್ ವೇಳೆಗೆ ಕೊನೆಗೊಳ್ಳುವುದು. ಮಂಡಳಿಯ ಬೆಳ್ಳಿಹಬ್ಬದ ಪ್ರಯುಕ್ತ - ಮುಂದಿನ 5 ವರ್ಷಗಳಲ್ಲಿ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಗಿಡ ನಾಟಿ ಮಾಡಲು ಉದ್ದೇಶಿಸಲಾಗಿದೆ. ಈ ಯೋಜನೆಗೆ 10.5 ಕೋಟಿ ರುಪಾಯಿ ತಗುಲಲಿದೆ ಎಂದು ತಾರಾನಾಥ್ ಹೇಳಿದರು.
ಪ್ರಸಕ್ತ ಹಣಕಾಸು ವರ್ಷದಲ್ಲಿ ಕೆಸಿಡಿಸಿ 2.77 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಕಳೆದ ವಿತ್ತ ವರ್ಷದಲ್ಲಿ ಈ ಪ್ರಮಾಣ 2.67 ಕೋಟಿ ರುಪಾಯಿಗಳಾಗಿತ್ತು ಎಂದು ಮಂಡಳಿಯ ಲೆಕ್ಕಪತ್ರದ ವಿವರ ನೀಡಿದ ತಾರಾನಾಥ್- ಕುಂದಾಪುರ ಬಳಿಯಿರುವ ಫೆನ್ನಿ ಕಾರ್ಖಾನೆಯನ್ನು ಮುಚ್ಚಲು ಕೆಸಿಡಿಸಿ ನಿರ್ಧರಿಸಿದೆ ಎಂದರು.
2002-03ನೇ ಸಾಲಿನಲ್ಲಿ ದೇಶ 1.27 ಲಕ್ಷ ಮೆಟ್ರಿಕ್ ಟನ್ ಅಡಿಕೆಯ (2006 ಕೋಟಿ ರು.ಮೌಲ್ಯದ) ವಿದೇಶಿ ವಿನಿಮಯ ಸಾಧಿಸಿದೆ ಎಂದು ತಾರಾನಾಥ್ ಶೆಟ್ಟಿ ತಿಳಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications