ಶಕುಂತಲಾ ಹೆಗಡೆ ಕಾಂಗ್ರೆಸ್ಸಿಗೆ? ಆಗಬಹುದು, ಆಗಬಹುದು !
ಶಕುಂತಲಾ ಹೆಗಡೆ ಕಾಂಗ್ರೆಸ್ಸಿಗೆ? ಆಗಬಹುದು, ಆಗಬಹುದು !
ಲೋಕಸಭಾ ಚುನಾವಣೆಗೆ ನಿಲ್ಲುತ್ತಾರೆ ಎನ್ನುವಊಹಾಪೋಹಗಳು ಚಾಲ್ತಿಯಲ್ಲಿ
- (ದಟ್ಸ್ಕನ್ನಡ ಡೆಸ್ಕ್)
ಬೆಂಗಳೂರಿನ ಸದಾಶಿವನಗರದ ಹೆಗಡೆ ಮನೆಮುಂದೆ ಇವತ್ತು ರಾಜಕೀಯ ಗಾಳಿ ಬಲವಾಗಿ ಬೀಸಲಾರಂಭಿಸಿದೆ. ಬಿಜೆಪಿಯ ಅಡ್ವಾಣಿ-ವೆಂಕಯ್ಯ ನಾಯ್ಡು ಬಂದು ಹೋದರೆ , ಎನ್ಡಿಎಯ ಜಾರ್ಜ್ ಆಗಮನ-ನಿರ್ಗಮನವಾಗಿದೆ. ಇತರ ಎಲ್ಲಾ ಪಕ್ಷಗಳು ಹೆಗಡೆ ಕುಟುಂಬಕ್ಕೆ ಆಹ್ವಾನ ಕೊಡುತ್ತಿವೆ. ಆದರೆ ಹೆಗಡೆ ಪತ್ನಿ, ಶಕುಂತಳಾ ಹೆಗಡೆ ಮಾತ್ರ ಕಾಂಗೈ ಸೇರುವ ಒಲವು ತೋರಿದ್ದಾರೆಂಬ ವರದಿಗಳಿವೆ. ಹೆಗೆಡೆ ಬದುಕಿದ್ದಾಗ ಅವರನ್ನು ಎನ್ಡಿಎ ಮಿತ್ರ ಕೂಟಗಳು ನಡೆಸಿಕೊಂಡ ಪರಿ, ಅವರಿಗೆ ಒಲ್ಲದ ಹುದ್ದೆಗಳು, ಅವರು ಅನಾರೋಗ್ಯ ಪೀಡಿತರಾದಾಗ ಅಲಕ್ಷಿಸಿದ ಕೇಂದ್ರ ಸರಕಾರ, ಹೆಗಡೆಯನ್ನು ನಿರ್ಲಕ್ಷಿಸಿದ ಬಿಜೆಪಿ ನಿಲುವುಗಳು ಮುಂತಾದ ಕಾರಣಗಳಿಂದಾಗಿ ಶಕುಂತಲಾ ಕಾಂಗ್ರೆಸ್ ಸೇರುವರೆಂದು ಪುಕಾರು. ಅಷ್ಟೇನೂ ನಂಬಲರ್ಹವಲ್ಲದ ವರದಿಯ ಪ್ರಕಾರ, ಶಕುಂತಲಾ ಹೆಗಡೆ ತೆರೆಮರೆಯಲ್ಲಿ ಕೃಷ್ಣರಿಗೆ ಕಾಂಗೈ ಸೇರುವ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ..
ಶಕುಂತಲಾ ಹೆಗೆಡೆಗೆ ಒಪ್ಪಿದರೆ ಕಾಂಗೈಗೆ ಭಾರೀ ಬಂಪರ್ ಸಿಕ್ಕಂತೆ. ಲೆಕ್ಕಾಚಾರಗಳು ಹೀಗೇ ಮುಂದುವರೆದರೆ, ದಕ್ಷಿಣ ಬೆಂಗಳೂರು ಅಥವಾ ಕೆನರಾ ಕ್ಷೇತ್ರದಿಂದ ಶಕುಂತಲ ಸ್ಫರ್ಧಿಸುವರು ಎಂದು ಭಾವಿಸಲಾಗುತ್ತಿದೆ. ಹೆಗಡೆ ಪುತ್ರಿ ಮಮತಾ ನಿಚ್ಚಾನಿ ಒಡೆದು ಹೋದ ದಳ ತೊರೆದು ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಎಂಬ ಪುಕಾರುಗಳು ಚುನಾವಣಾ ಮಾರುಕಟ್ಟೆಯಲ್ಲಿ ಹುಟ್ಟಿಕೊಂಡುವೆ. ಹೆಗಡೆ ಮಗ ಕೂಡ ಕಾಂಗೈಗೆ ಮರಳುವ ಸಾಧ್ಯತೆ ಇದೆ. ಹೆಗಡೆ ತಮ್ಮ ರಾಜಕೀಯ ಜೀವನ ಆರಂಭಿಸಿದ್ದೂ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ನಿಂದಲೇ.
ಈ ಬೆಳವಣಿಗೆಗಳ ನಡುವೆ ಇನ್ನಷ್ಟು ಬಡವಾಗುತ್ತಿರುವುದು ಹೆಗಡೆ ರಚಿಸಿದ ‘ದಳ’. ಎಂಬತ್ತರ ದಶಕದಲ್ಲಿ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ತಂದ ಹೆಗಡೆ ಸ್ಥಾಪಿಸಿದ ಪಕ್ಷ ಈಗ ಅಂಬಿಗನಿಲ್ಲದ ನೌಕೆಯಾಗಿದೆ.
ಇತ್ತ ರಾಜ್ಯ ಕಾಂಗೈ ವಂಶಾಡಳಿತ ಗುಂಗಿನಿಂದ ಹೊರಬಂದಂತ್ತಿಲ್ಲ! ಸೋನಿಯಾ, ಪ್ರಿಯಾಂಕಾ, ರಾಹುಲ್ಗೆ ರಾಜ್ಯದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಹ್ವಾನ ನೀಡಲಾಗಿದೆ ಎಂದು ಜನಾರ್ದನ ಪೂಜಾರಿ ಹೇಳಿದ್ದಾರೆ. ಇಂದಿರಜ್ಜಿ ಚಿಕ್ಕಮಗಳೂರಿನಲ್ಲಿ ಗೆದ್ದರೆ, ಸೊಸೆ ಸೋನಿಯ ಅಮ್ಮ ಬಳ್ಳಾರಿಯಲ್ಲಿ ಗೆದ್ದ ರೆ, ಮೊಮ್ಮಗಳು ಪ್ರಿಯಾಂಕ ಕೋಲಾರದಲ್ಲಿ ಗೆಲ್ಲಲಾರಳಾ?
ಮುಖಪುಟ / ವಾಟ್ಸ್ ಹಾಟ್
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications