ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಿರೀಶ್‌ ಕಾರ್ನಾಡ್‌ ಜೊತೆ ಎಸ್‌.ಎಂ.ಕೃಷ್ಣ ಮಹತ್ವದ ಮಾತುಕತೆ

By Staff
|
Google Oneindia Kannada News

ಗಿರೀಶ್‌ ಕಾರ್ನಾಡ್‌ ಜೊತೆ ಎಸ್‌.ಎಂ.ಕೃಷ್ಣ ಮಹತ್ವದ ಮಾತುಕತೆ
ಛಾಪಾ ಕಾಗದದ ತನಿಖೆ ಸಿಬಿಐಗೆ ಇಲ್ಲ- ಕೃಷ್ಣ ಪುನರುಚ್ಚಾರ

ಬೆಂಗಳೂರು : ಬಾಬಾಬುಡನ್‌ಗಿರಿಯಲ್ಲಿ ದತ್ತ ಜಯಂತಿ ನಿಷೇಧಿಸುವ ವಿಷಯವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್‌ ಕಾರ್ನಾಡ್‌ ಹಾಗೂ ಮತ್ತಿತರ ಸಾಹಿತಿ- ಬರಹಗಾರರ ಜೊತೆ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಮಂಗಳವಾರ (ನ. 25) ಮಹತ್ವದ ಮಾತುಕತೆ ನಡೆಸಿದರು.

ಮಾತುಕತೆಯ ನಂತರ ಸುದ್ದಿಗಾರರ ಜೊತೆ ಮಾತಾಡಿದ ಕೃಷ್ಣ, ತಕ್ಷಣವೇ ದತ್ತ ಜಯಂತಿ ನಿಷೇಧಿಸುವ ವಿಷಯದಲ್ಲಿ ಏನೂ ಹೇಳುವುದಿಲ್ಲ ಎಂದು ನುಣುಚಿಕೊಂಡರು.

ಸುದ್ದಿಗಾರರು ಮತ್ತೆ ಛಾಪಾ ಕಾಗದ ಹಗರಣದ ಸಿಬಿಐ ತನಿಖೆಯ ಆಗ್ರಹದ ವಿಷಯದ ಕುರಿತು ಪ್ರಶ್ನೆ ಕೇಳಿದರು. ಕೇಂದ್ರ ಸರ್ಕಾರ ಸಿಬಿಐ ತನಿಖೆಗೆ ಆದೇಶ ಕೊಟ್ಟಿದೆ. ಹಾಗಂತ ನಾವು ಸುತಾರಾಂ ಸಿಬಿಐ ತನಿಖೆಗೆ ಪ್ರಕರಣವನ್ನು ಒಪ್ಪಿಸುವುದಿಲ್ಲ. ಈಗಾಗಲೇ ಆರೋಪಪಟ್ಟಿ ಸಲ್ಲಿಸಲಾಗಿದ್ದು, ವಿಶೇಷ ನ್ಯಾಯಾಲಯದಲ್ಲಿ ವಾರದ ನಂತರ ವಿಚಾರಣೆ ಚುರುಕಾಗಲಿದೆ. ವಿಚಾರಣೆಯನ್ನು ಆದಷ್ಟು ಬೇಗ ಮುಗಿಸಿ ಎಂದು ವಿಶೇಷ ಕೋರ್ಟಿನ ಮುಕ್ಯಸ್ಥರಾಗಿರುವ ಸೆಷನ್ಸ್‌ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎ.ಟಿ.ಮನೋಳಿ ಅವರನ್ನು ಕೋರಿಕೊಂಡಿದ್ದೇವೆ ಎಂದು ಕೃಷ್ಣ ಉತ್ತರ ಕೊಟ್ಟರು.

(ಪಿಟಿಐ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X