ಫ್ಲೈಓವರ್ ಸಹವಾಸ ಸಾಕು, ಮರಗಳ ಕಡಿತಕ್ಕೆ ಬ್ರೇಕು -ಕೋರ್ಟ್
ಫ್ಲೈಓವರ್
ಸಹವಾಸ
ಸಾಕು,
ಮರಗಳ
ಕಡಿತಕ್ಕೆ
ಬ್ರೇಕು
-ಕೋರ್ಟ್
ಫ್ಲೈಓವರ್
ನಿರ್ಮಾಣಕ್ಕಾಗಿ
ಬೆಂಗಳೂರಿನಲ್ಲಿ
ಈಗಾಗಲೇ
ಕಡಿಯಲಾಗಿರುವ
ಮರಗಳ
ಸಂಖ್ಯೆ
9800.
ಫ್ಲೈ ಓವರ್ಗಳ ನಿರ್ಮಾಣದ ವಿರುದ್ಧ ನಾಗರಿಕರ ಪ್ರತಿರೋಧ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ನೂತನ ಫ್ಲೈಓವರ್ಗಳ ನಿರ್ಮಾಣಕ್ಕೆ ನ್ಯಾಯಾಲಯ ತಡೆಗಟ್ಟಿದೆ. ಫ್ಲೈ ಓವರ್ ನಿರ್ಮಾಣಕ್ಕಾಗಿ ನಗರದ ಸಾಕಷ್ಟು ಮರಗಳನ್ನು ಕಡಿಯಬೇಕಾಗುತ್ತದೆ. ಇದರಿಂದ ವಾತಾವರಣದಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಫ್ಲೈಓವರ್ಗಳ ಬದಲಿಗೆ ನೆಲಮಾಳಿಗೆ ನಿರ್ಮಿಸಿ ಪಾದಚಾರಿಗಳಿಗೆ ಅನುಕೂಲ ಮಾಡಿಕೊಡುವುದು ಸೂಕ್ತ ಎಂದು ನ್ಯಾಯಮೂರ್ತಿ ಎಂ. ಎಫ್. ಸಲ್ಡಾನಾ, ನ್ಯಾಯಮೂರ್ತಿ ಎಂ. ಎಸ್. ರಾಜೇಂದ್ರ ಪ್ರಸಾದ್ ಅವರನ್ನೊಳಗೊಂಡ ವಿಭಾಗೀಯ ಪೀಠ ಸೂಚಿಸಿದೆ.
ಬೆಂಗಳೂರು ನಗರದಲ್ಲಿ ಕೇವಲ ಫ್ಲೈಓವರ್ ನಿರ್ಮಾಣಕ್ಕಾಗಿ ಈಗಾಗಲೇ 9,800 ಮರಗಳನ್ನು ಕಡಿಯಲಾಗಿದೆ. ಇನ್ನಷ್ಟು ಫ್ಲೈಓವರ್ಗಳ ನಿರ್ಮಾಣಕ್ಕೆ ಮರಗಳನ್ನು ಕಡಿದರೆ ನಗರದಲ್ಲಿ ಶುದ್ಧ ಗಾಳಿಗೆ ತತ್ವಾರ ಬರಬಹುದಾದ್ದರಿಂದ ಫ್ಲೈಓವರ್ ಯೋಜನೆಗಳನ್ನು ಕೈಬಿಡಬೇಕು ಎಂದು ಕೋರ್ಟ್ ಹೇಳಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು