ಬೆಂಗಳೂರಿನ ಎಚ್ಚೆನ್ ಕಲಾಕ್ಷೇತ್ರದಲ್ಲಿ ಅಪರೂಪದ ಮದುವೆ
ಬೆಂಗಳೂರಿನ ಎಚ್ಚೆನ್ ಕಲಾಕ್ಷೇತ್ರದಲ್ಲಿ ಅಪರೂಪದ ಮದುವೆ
ಮಧು- ನಸೀಮಾ ಕೊನೆಗೂ ಮದುವೆಯಾದರು
ಕೊನೆಗೂ ಮಧುವಿನ ತಾಯಿ ಇಂದ್ರಮ್ಮ ಹಾಗೂ ನಸೀಮಾ ತಂದೆ- ತಾಯಿ ಗುಲಾಬ್ ಮತ್ತು ಶಾಫುಲ್ಲ ಮದುವೆಗೆ ಒಪ್ಪಿದರು. ನವೆಂಬರ್ 12ನೇ ತಾರೀಕು ಎಚ್ಚೆನ್ ಕಲಾಕ್ಷೇತ್ರದಲ್ಲಿ ಮದುವೆ.
ಪ್ರೇಮಕಥೆ ಮಾಮೂಲಾಗಿದೆ. ಆದರೆ, ಎಚ್ಚೆನ್ ಕಲಾಕ್ಷೇತ್ರ ಕಲ್ಯಾಣ ಮಂಟಪವಾದದ್ದು ಒಂದು ವಿಶೇಷ. ಇದಕ್ಕೆ ಮೂಲ ಕಾರಣ ನಾಗತೀಹಳ್ಳಿ ಚಂದ್ರಶೇಖರ್. ಈ ಜಾತ್ಯತೀತ ಮದುವೆಗೆ ಸಾಕ್ಷಿಯಾಗಲು ಅವರು ಒಪ್ಪಿ ಬಂದಿದ್ದರು. ಎಚ್ಚೆನ್ ಕಲಾಕ್ಷೇತ್ರದ ವೇದಿಕೆಯ ಮೇಲೆ ತೀರಾ ಸರಳ ವಿವಾಹ. ನಸೀಮಾ ಬೆರಳಿಗೆ ಮಧು ಉಂಗುರ ತೊಡಿಸಿದಾಗ ಸಾಹಿತಿಗಳಿಂದ ಕರತಾಡನ ! ಕೀ.ರಂ.ನಾಗರಾಜ್, ಸಿ.ಜಿ.ಕೆ., ರಂಗ ಚಳವಳಿಕಾರ ಅಶೋಕ್ ಬಾದರದಿನ್ನಿ ಮೊದಲಾದ ಅಕ್ಷರ ಹಾಗೂ ಕಲಾ ಮಿತ್ರರು ಮದುವೆಯ ಮುಖ್ಯ ಅತಿಥಿಗಳಾಗಿದ್ದರು.
ಇಂಥಾ ಮದುವೆಗಳನ್ನು ನಾವು ಹೆಚ್ಚು ಹೆಚ್ಚಾಗಿ ಬೆಂಬಲಿಸಬೇಕು. ಮಧು ಹಾಗೂ ನಸೀಮಾ ಧೃತಿಗೆಡಗೆ ಪರಿಸ್ಥಿತಿಯನ್ನು ಎದುರಿಸಿ, ಮದುವೆಯಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ನಾಗತಿ ನಕ್ಕರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications