ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರವಾಡ ಜಿಲ್ಲಾಪಂಚಾಯಿತಿ ಅಧ್ಯಕ್ಷರಾಗಿ ಬಸವಂತಪ್ಪ ಆಯ್ಕೆ

By Staff
|
Google Oneindia Kannada News

ಧಾರವಾಡ ಜಿಲ್ಲಾಪಂಚಾಯಿತಿ ಅಧ್ಯಕ್ಷರಾಗಿ ಬಸವಂತಪ್ಪ ಆಯ್ಕೆ
ಉಪಾಧ್ಯಕ್ಷೆಯಾಗಿ ಪರಿಶಿಷ್ಟ ಮಹಿಳೆ ಅಕ್ಕವ್ವ ಲಮಾಣಿ

ಧಾರವಾಡ: ಧಾರವಾಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ (ಡ.12, ಬುಧವಾರ) ಅಧ್ಯಕ್ಷರಾಗಿ ಬಸಂವಂತಪ್ಪ ತಿಪ್ಪಣ್ಣ ಗುಡದರಿ ಹಾಗೂ ಉಪಾಧ್ಯಕ್ಷರಾಗಿ ಅಕ್ಕವ್ವ ಲಾಲಪ್ಪ ಲಮಾಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲಾಧಿಕಾರಿ ಕಪಿಲಮೋಹನ್‌ ಅವರು ಚುನಾವಣಾಧಿಕಾರಿಯಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಬಸವಂತಪ್ಪ ತಿಪ್ಪಣ್ಣ ಗುಡದರಿ, ಸಿ. ಎನ್‌. ಶ್ಯಾಗೋಟಿ, ಎಸ್‌. ಕೆ. ಸೊಟ್ಟಮ್ಮನವರ, ಶಾಂತಪ್ಪ ಗೋನಾಳ ಹಾಗೂ ಈರಮ್ಮ ಕುಂದಗೋಳ ಸೇರಿದಂತೆ ಐವರು ನಾಮಪತ್ರ ಸಲ್ಲಿಸಿದ್ದರು.

ಆದರೆ ಕೊನೆ ಗಳಿಗೆಯಲ್ಲಿ ಬಸವಂತಪ್ಪ ಅವರ ಪರವಾಗಿ ಉಳಿದ ನಾಲ್ವರು ತಮ್ಮ ನಾಮಪತ್ರವನ್ನು ವಾಪಸ್ಸು ಪಡೆದರು. ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಮಹಿಳೆಗೆ ಮೀಸಲಾಗಿದ್ದು, ಹಿಂದೆ ಅಧ್ಯಕ್ಷರಾಗಿದ್ದ ಅಕ್ಕವ್ವ ಲಮಾಣಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.

(ಇನ್ಪೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X