Get Updates
Get notified of breaking news, exclusive insights, and must-see stories!

ರವೀಂದ್ರ ಕಲಾಕ್ಷೇತ್ರದಲ್ಲಿ ಎರಡು ದಿನಗಳ ‘ರಂಗೋತ್ಸವ- 2003’

ರವೀಂದ್ರ ಕಲಾಕ್ಷೇತ್ರದಲ್ಲಿ ಎರಡು ದಿನಗಳ ‘ರಂಗೋತ್ಸವ- 2003’
ರಂಗಭೂಮಿ ಉದ್ಧಾರಕ್ಕೆ ಜನರೇ ಮುಂದಾಗಬೇಕು-ಮಲ್ಲಿಕಾರ್ಜುನಯ್ಯ

ಬೆಂಗಳೂರು : ರಂಗಭೂಮಿಯನ್ನು ಬೆಳೆಸಲು ಜನರೇ ಮುಂದಾಗಬೇಕು ಎಂದು ಲೋಕಸಭೆಯ ಮಾಜಿ ಉಪಾಧ್ಯಕ್ಷ ಎಸ್‌.ಮಲ್ಲಿಕಾರ್ಜುನಯ್ಯ ಕರೆ ಕೊಟ್ಟಿದ್ದಾರೆ.

ನಗರದಲ್ಲಿ ಗೆಜ್ಜೆ- ಹೆಜ್ಜೆ ರಂಗ ತಂಡದ ಎರಡು ದಿನಗಳ ಕಾಲದ ರಂಗೋತ್ಸವ- 2003 ಕಾರ್ಯಕ್ರಮವನ್ನು ಸೋಮವಾರ (ನ.10) ಉದ್ಘಾಟಿಸಿ ಅವರು ಮಾತಾಡಿದರು. ಹಿಂದೆ ರಾಜ ಮಹಾರಾಜರು ನಾಟಕವನ್ನು ಬೆಂಬಲಿಸುತ್ತಿದ್ದರು. ಆಮೇಲೆ ಸರ್ಕಾರ ಅದಕ್ಕೆ ಬೆಂಬಲವಾಗಿ ನಿಂತಿತು. ಕೇವಲ ಸರ್ಕಾರದಿಂದ ರಂಗಭೂಮಿಯ ಬೆಳವಣಿಗೆ ಸಾಧ್ಯವಿಲ್ಲ. ಸಮಾಜವೇ ಅದನ್ನು ಕಾಪಾಡಲು ಮುಂದಾಗಬೇಕು ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪತ್ರಕರ್ತ ಎಸ್‌.ನಾಗಣ್ಣ ಇವತ್ತಿನ ವಿದ್ಯುನ್ಮಾನ ಪ್ರಪಂಚದಲ್ಲಿ ರಂಗಭೂಮಿ ಬಲವಾಗಬೇಕಾದರೆ ಗ್ರಾಮೀಣ ಪ್ರತಿಭೆಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ಕೊಟ್ಟರು.

ವಿಮಲಾ ರಂಗಾಚಾರ್‌ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮನುಷ್ಯ ಜೀವನದ ಬೆಳವಣಿಗೆಗೆ ಕಲಾ ಪ್ರಕಾರ ಎಷ್ಟು ಮುಖ್ಯ ಎಂಬುದನ್ನು ತಿಳಿಸಿದ ವಿಮಲಾ ರಂಗಾಚಾರ್‌, ಸನ್ಮಾನ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.

ಸೋಮವಾರ ಸಂಜೆ 6.30 ಗಂಟೆಗೆ ಖುಷಿಯಾಟ (ಬೋಧಾಯನನ ಭಗವದಜ್ಜುಕೀಯಂ) ನಾಟಕ ಪ್ರದರ್ಶಿತವಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಪಾಲಕೃಷ್ಣ ನಾಯರಿ ಅವರ ಮಾರ್ಗದರ್ಶನದಲ್ಲಿ ಎಂ.ಇ.ಎಸ್‌.ಕಿಶೋರ ಕೇಂದ್ರದ ರಂಗಕರ್ಮಿಗಳು ಈ ನಾಟಕದಲ್ಲಿ ಅಭಿನಯಿಸಿದರು. ಅದೇ ದಿನ ಸಂಜೆ 7.30 ಗಂಟೆಗೆ ಆಂಜನೇಯ ರಚಿಸಿರುವ ಸಾಮ್ರಾಟ್‌ ಶ್ರೀಪುರುಷ ನಾಟಕವನ್ನು ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘದವರು ಪ್ರದರ್ಶಿಸಿದರು. ಮರುದಿನ ಯಕ್ಷ ಜನಮೇಜಯ (ಶ್ರೀರಂಗರ ಕೇಳು ಜನಮೇಜಯ) ಹಾಗೂ ಕೀ.ರಂ.ನಾಗರಾಜ್‌ ಅನುವಾದಿಸಿರುವ ಭಾಸ ವ್ಯಾಯೋಗಂ ನಾಟಕಗಳು ಪ್ರದರ್ಶಿತವಾದವು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+