ಹೀಗೊಂದು ನಾಟಕಗಳ ರಾಜ್ಯೋತ್ಸವ
ಹೀಗೊಂದು ನಾಟಕಗಳ ರಾಜ್ಯೋತ್ಸವ
ಭಾರತೀಯ ವಿಜ್ಞಾನ ಮಂದಿರದ ಕನ್ನಡ ಸಂಘ ತನ್ನ 25ನೇ ರಾಜ್ಯೋತ್ಸವವನ್ನು ಅಬ್ಬರ- ಆರ್ಭಟದ ಕಾರ್ಯಕ್ರಮ, ಸವಕಲು ಭಾಷಣಗಳಿಲ್ಲದೆ ಎರಡು ನಾಟಕಗಳನ್ನು ಪ್ರದರ್ಶಿಸುವ ಮೂಲಕ ಆಚರಿಸಲಿದೆ.
ನವೆಂಬರ್ 12 ಹಾಗೂ 13ನೇ ತಾರೀಕು ನಗರದ ಟಾಟಾ ಇನ್ಸ್ಟಿಟ್ಯೂಟ್ (ಐಐಎಸ್ಸಿ) ನ ಸತೀಶ್ ಧಾವನ್ ಸಭಾಂಗಣದಲ್ಲಿ (ಸಿ.ಎಸ್.ಐ.ಸಿ. ಸಭಾಂಗಣ) ಎರಡು ನಾಟಕಗಳ ಪ್ರದರ್ಶನವಿದೆ. ಹುಬ್ಬಳ್ಳಿಯ ಗುರು ಸಂಸ್ಥೆ 12ನೇ ತಾರೀಕು ಸಂಜೆ 4 ಗಂಟೆಗೆ ‘ಆಲ್ ದಿ ಬೆಸ್ಟ್’ ನಾಟಕ ಪ್ರದರ್ಶಿಸಲಿದೆ. ಇತ್ತೀಚೆಗೆ ಸಾಕಷ್ಟು ಸದ್ದು ಮಾಡಿರುವ ಈ ನಾಟಕವನ್ನು ‘ಯದ್ವಾ ತದ್ವಾ’ ಧಾರಾವಾಹಿ ಖ್ಯಾತಿಯ ಯಶವಂತ ಸರದೇಶಪಾಂಡೆ ನಿರ್ದೇಶಿಸಿದ್ದಾರೆ. ನಿರ್ದೇಶನದ ಜೊತೆಗೆ ಕಚಗುಳಿಯಿಡುವ ಪಾತ್ರದಲ್ಲಿ ಮಿಂಚುತ್ತಿರುವುದೂ ಅವರೇ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಹಾಗೂ ಭಾರತೀಯ ವಿಜ್ಞಾನ ಮಂದಿರದ ನಿಬಂಧಕ ಡಾ. ಉದಯ್ ಬಾಲಕೃಷ್ಣನ್ ಈ ನಾಟಕವನ್ನು ಮುಖ್ಯ ಅತಿಥಿಗಳಾಗಿ ವೀಕ್ಷಿಸಲಿದ್ದಾರೆ.
ಮರುದಿನ, ನವೆಂಬರ್ 13ರಂದು ಸಂಜೆ 4 ಗಂಟೆಗೆ ಗೋಲ್ಡನ್ ಗೈಸ್ ತಂಡದವರಿಂದ ಅರ್ಧ ತಾಸು ನೃತ್ಯ. ನಂತರ ಅನ್ವೇಷಣಾ ತಂಡದವರಿಂದ ಜಿ.ಪಿ.ರಾಜರತ್ನಂ ವಿರಚಿತ ‘ನರಕದ ನ್ಯಾಯ’ ನಾಟಕ ಪ್ರದರ್ಶನ. ದಟ್ಸ್ಕನ್ನಡ ಡಾಟ್ ಕಾಂ ಬಳಗದ ಪ್ರಸಾದ್ ನಾಯಕ್ ಈ ನಾಟಕ ನಿರ್ದೇಶಿಸಿದ್ದಾರೆ. ಚಲನಚಿತ್ರ ನಟ ರಾಜೇಶ್, ಜವಹರಲಾಲ್ ಉನ್ನತ ಶಿಕ್ಷಣ ಅಧ್ಯಯನ ಸಂಸ್ಥೆಯ ಆಡಳಿತಾಧಿಕಾರಿ ಎ.ಎನ್.ಜಯಚಂದ್ರ ಹಾಗೂ ಭಾರತೀಯ ವಿಜ್ಞಾನ ಮಂದಿರದ ಉಪ ನಿಬಂಧಕ (ಕ್ಯಾಪ್ಟನ್) ಎಂ.ಎಸ್.ವೆಂಕಟೇಶ್ ಈ ನಾಟಕ ಕಾರ್ಯಕ್ರಮದ ಮುಖ್ಯ ಅತಿಥಿಗಳು.
ಇದು ಭಾರತೀಯ ವಿಜ್ಞಾನ ಮಂದಿರದ ಕನ್ನಡ ಸಂಘ ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವದ ಬೆಳ್ಳಿ ಹಬ್ಬ. ಅಂದಹಾಗೆ, ನಾಟಕ ನೋಡಲು ಟಿಕೇಟು ಕೊಳ್ಳಬೇಕಾಗಿಲ್ಲ. ಪ್ರವೇಶ ಸಂಪೂರ್ಣ ಉಚಿತ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications